ಬ್ರೇಕಿಂಗ್ ನ್ಯೂಸ್
14-04-22 09:43 pm Bengaluru Correspondent ಕ್ರೈಂ
ಬೆಂಗಳೂರು, ಎ.14 : ಜನಸಾಮಾನ್ಯರನ್ನು ಯಾಮಾರಿಸಿ ಸೈಬರ್ ಕಳ್ಳರು ಬ್ಯಾಂಕ್ ಖಾತೆಯಿಂದಲೇ ಹಣ ಕೀಳುವುದನ್ನು ಕೇಳಿದ್ದೇವೆ. ಆದರೆ ಈಗ ಸೈಬರ್ ಕಳ್ಳರು ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಇನ್ಸ್ ಪೆಕ್ಟರ್ ಆಗಿರುವ ವ್ಯಕ್ತಿಯ ಖಾತೆಗೇ ಕನ್ನ ಹಾಕಿ ಹಣ ಕಳವು ಮಾಡಿದ್ದಾರೆ.
ಬ್ಯಾಂಕ್ ಕೆವೈಸಿ, ಪಾನ್ ಕಾರ್ಡ್ ಅಪ್ ಡೇಟ್ ಮಾಡುವ ಹೆಸರಲ್ಲಿ ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯುರೋ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಎಂಬವರ ಖಾತೆಯಿಂದ ಹಣ ಎಗರಿಸಿದ್ದಾರೆ. ಎಸ್ ಬಿಐನ ಯೋ ಯೋ ಆಪ್ ಮೂಲಕ ಮೆಸೇಜ್ ಕಳಿಸಿದ್ದ ಆರೋಪಿಗಳು, ಮೆಸೇಜ್ ಓಪನ್ ಮಾಡ್ತಿದ್ದಾಗೆ ಅಸಲಿ ಬ್ಯಾಂಕ್ ಸಿಬಂದಿ ರೀತಿಯಲ್ಲೇ ವ್ಯವಹರಿಸಿದ್ದಾರೆ.
ಬ್ಯಾಂಕ್ ಲೋಗೋ, ಯೊ ಯೊ ಸಿಂಬಲ್ ಎಲ್ಲವೂ ಅಸಲಿಯ ರೀತಿಯಲ್ಲೇ ಇತ್ತು. ಹೀಗಾಗಿ ಬ್ಯಾಂಕ್ ಕಡೆಯಿಂದಲೇ ಅಪ್ ಡೇಟ್ ಕೇಳ್ತಿದ್ದಾರೆಂದು ನಂಬಿದ್ದ ಇನ್ಸ್ ಪೆಕ್ಟರ್ ನಾಗಭೂಷಣ್ ತನ್ನ ಪಾನ್ ನಂಬರ್, ಆಧಾರ್, ಮೊಬೈಲ್ ನಂಬರ್ ಎಲ್ಲವನ್ನೂ ಕೊಟ್ಟಿದ್ದರು. ಎಲ್ಲಾ ದಾಖಲೆಗಳು ಅಪ್ ಡೇಟ್ ಆಗ್ತಿದ್ದಂತೆ ಓಟಿಪಿ ನಂಬರ್ ಬಂದಿದ್ದು ಅದನ್ನು ಪಡೆದು ಅಕೌಂಟಿನಲ್ಲಿದ್ದ 3 ಲಕ್ಷ 66 ಸಾವಿರ ರೂ.ವನ್ನು ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ. ಪ್ರಕರಣ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ನಾಗಭೂಷಣ್ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Bangalore Police inspector at city crime record looses Rs 3 lakhs for cyber crime.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm