ಬ್ರೇಕಿಂಗ್ ನ್ಯೂಸ್
08-04-22 05:01 pm HK Desk news ಕ್ರೈಂ
ಲಕ್ನೋ, ಎ.8: ಗೋರಖಪುರದ ಗೋರಖನಾಥ ದೇವಸ್ಥಾನಕ್ಕೆ ನುಗ್ಗಿ ಪೊಲೀಸರಿಗೆ ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಮೇಲೆ ತಲವಾರು ಬೀಸಿದ್ದ ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿ ಐಸಿಸ್ ಉಗ್ರರಿಂದ ಹನಿಟ್ರ್ಯಾಪ್ ಗೆ ಒಳಗಾಗಿದ್ದ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಹೀಗಾಗಿ ಪ್ರಕರಣದ ತನಿಖೆ ಆತನ ಭಯೋತ್ಪಾದನ ಸಂಘಟನೆ ಜೊತೆಗಿನ ನಂಟಿನತ್ತ ತಿರುಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು ಮುರ್ತಾಜಾ ಅಬ್ಬಾಸಿಯನ್ನು ಹನಿ ಟ್ರ್ಯಾಪ್ ಮಾಡಿದ್ದರು ಎನ್ನಲಾಗಿದೆ. ಯುವತಿಯೊಬ್ಬಳು ತನ್ನನ್ನು ಐಎಸ್ ಉಗ್ರರು ಹಿಡಿದಿಟ್ಟಿದ್ದು, ನಿನ್ನ ಸಹಾಯ ಬೇಕೆಂದು ಮೈಲ್ ಮಾಡಿದ್ದಳು. ಅದರಂತೆ, ಅಬ್ಬಾಸಿ 40 ಸಾವಿರ ರೂ. ಹಣವನ್ನು ಆಕೆಗೆ ಕಳಿಸಿದ್ದ. ಆನಂತರ ಇಬ್ಬರ ಇಮೇಲ್ ಸಂಭಾಷಣೆ ಮುಂದುವರಿದಿತ್ತು. ಅಲ್ಲದೆ, ಯುವತಿಯು ಭಾರತಕ್ಕೆ ಬಂದು ಭೇಟಿಯಾಗುವುದಾಗಿ ಹೇಳಿದ್ದಳು.

ಯುವತಿಗೆ ಮೂರು ಬಾರಿ ಹಣ ಕಳಿಸಿದ್ದನ್ನು ಅಬ್ಬಾಸಿ ಒಪ್ಪಿಕೊಂಡಿದ್ದಾನೆ. ಐಸಿಸ್ ವಿಚಾರಗಳಿಂದ ಪ್ರೇರಿತನಾಗಿದ್ದಲ್ಲದೆ, ಸದ್ಯದಲ್ಲೇ ಸಂಘಟನೆ ಸೇರುವುದಾಗಿ ಭರವಸೆ ನೀಡಿದ್ದ. ಅದಕ್ಕೆ ತಯಾರಿಯನ್ನೂ ನಡೆಸಿದ್ದ. ಮುಸ್ಲಿಮರ ಮೇಲಿನ ಹಲ್ಲೆ ಘಟನೆಗಳಿಂದ ಪ್ರಚೋದನೆಗೊಂಡು ಭಾರತ ಸರಕಾರದ ವಿರುದ್ಧ ನಿಂತಿದ್ದ. ಅಲ್ಲದೆ, ಕೇಂದ್ರ ಸರಕಾರ ತರಲುದ್ದೇಶಿಸಿದ್ದ ಸಿಎಎ ಕಾಯ್ದೆಯನ್ನೂ ವಿರೋಧಿಸಿದ್ದ. ಪೊಲೀಸರ ವಿಚಾರಣೆ ವೇಳೆ ಈ ಬಗ್ಗೆ ಅಬ್ಬಾಸಿ ಹೇಳಿದ್ದಾನೆ.

ಎಪ್ರಿಲ್ 3ರಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸೇರಿದ ಗೋರಖನಾಥ ದೇವಸ್ಥಾನಕ್ಕೆ ನುಗ್ಗಿದ್ದ ಅಹ್ಮದ್ ಮುರ್ತಾಜ ಅಬ್ಬಾಸಿ ಅಲ್ಲಿದ್ದ ಇಬ್ಬರು ಪೊಲೀಸರಿಗೆ ಹಲ್ಲೆ ಮಾಡಿದ್ದ. ಆಬಳಿಕ ಇತರೇ ಪೊಲೀಸರು ಸೇರಿ ಅಬ್ಬಾಸಿಯನ್ನು ಹಿಡಿದು ಬಂಧಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ವಿಶೇಷ ತನಿಖೆಗೆ ಆದೇಶ ಮಾಡಿದ್ದರು. ಅಲ್ಲದೆ, ಘಟನೆಯನ್ನು ಭಯೋತ್ಪದನಾ ಕೃತ್ಯ ಎಂದು ಹೇಳಿದ್ದರು. ಭಯೋತ್ಪಾದನಾ ವಿರೋಧಿ ದಳಕ್ಕೆ ತನಿಖೆಯ ಹೊಣೆಯನ್ನು ಒಪ್ಪಿಸಿದ್ದರು.
A new twist has come up in the Gorakhnath temple attack case after the Uttar Pradesh Police’s anti-terrorist squad uncovered a honey-trap angle.The Gorakhnath temple attacker, Ahmed Murtaza Abbasi, was allegedly honey-trapped by the Islamic State. According to police sources, Abbasi had first received a mail, presumably from a woman.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm