ಬ್ರೇಕಿಂಗ್ ನ್ಯೂಸ್
21-03-22 09:41 am Mangalore Correspondent ಕ್ರೈಂ
ಪುತ್ತೂರು, ಮಾ.21 : ದಕ್ಷಿಣ ಕನ್ನಡ - ಕೊಡಗು ಜಿಲ್ಲೆಯ ಗಡಿಭಾಗ ಸಂಪಾಜೆಯಲ್ಲಿ ಜ್ಯೋತಿಷಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡ ಚಿನ್ನಾಭರಣ ಮತ್ತು ನಗದು ಲೂಟಿಗೈದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ ಘಟನೆ ನಡೆದಿದ್ದು ಸ್ಥಳೀಯವಾಗಿ ಪುರೋಹಿತ ಮತ್ತು ಜ್ಯೋತಿಷಿಯಾಗಿ ಹೆಸರು ಗಳಿಸಿರುವ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ತಂಡ ಕೃತ್ಯ ಎಸಗಿದೆ. ರಾತ್ರಿ 8.30 ರ ವೇಳೆಗೆ ಆಗಂತುಕರು ಎಳನೀರು ಕಡಿಯುವ ಕತ್ತಿ ಹಿಡಿದು ಮನೆಗೆ ನುಗ್ಗಿದ್ದಾರೆ. ಈ ವೇಳೆ, ಅಂಬರೀಶ್ ಭಟ್ ಮನೆಯಲ್ಲಿ ಇರಲಿಲ್ಲ.
ಅಂಬರೀಶ್ ಭಟ್ ಅವರಿಗೆ ಇಬ್ಬರು ಪುತ್ರರಿದ್ದು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ದೊಡ್ಡ ಮಗ ಶ್ರೀವತ್ಸ ತನ್ನ ಪತ್ನಿಯ ಜೊತೆಗೆ ಮನೆಗೆ ಬಂದಿದ್ದರು. ದರೋಡೆ ಕೃತ್ಯದ ಸಂದರ್ಭದಲ್ಲಿ ಅತ್ತೆ ಮತ್ತು ಸೊಸೆ ಮಾತ್ರ ಇದ್ದರು. ಮನೆಗೆ ನುಗ್ಗಿದ ತಂಡ, ಸೊಸೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡಿದ್ದಾರೆ. ಬಳಿಕ ಕತ್ತಿ ತೋರಿಸಿ ಬೆದರಿಸಿದ್ದು ಕಪಾಟಿನ ಕೀಲಿ ಕೈ ಕೊಡುವಂತೆ ಕೇಳಿದ್ದಾರೆ. ಜೀವ ಭಯದಿಂದ ಅತ್ತೆ , ಸೊಸೆ ಕೀಯನ್ನು ಕೊಟ್ಟಿದ್ದು ಆಗಂತುಕರು ಕಪಾಟಿನಲ್ಲಿದ್ದ ಸುಮಾರು ನೂರು ಗ್ರಾಂನಷ್ಟು ಚಿನ್ನದ ಒಡವೆ, ಒಂದುವರೆ ಲಕ್ಷದಷ್ಟು ಇದ್ದ ನಗದು ಹಣವನ್ನು ಕಿತ್ತುಕೊಂಡು ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದಾರೆ. ದರೋಡೆ ತಂಡದಲ್ಲಿದ್ದವರು ತಮಿಳು ಮಾತನಾಡುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.
Burglars enter house of Astrologer show them talwar and flee with gold and cash at house in Sampaje in Dakshina Kannada. The robbers were said to be talking in Tamil.
22-04-25 01:00 pm
Bangalore Correspondent
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm