ಬ್ರೇಕಿಂಗ್ ನ್ಯೂಸ್
15-03-22 08:42 pm HK Desk news ಕ್ರೈಂ
ಚಂಡೀಗಢ, ಮಾ.15: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಾಲ್ ಅವರ ಮೇಲೆ ಜಲಂಧರ್ ನಲ್ಲಿ ಕಬಡ್ಡಿ ಟೂರ್ನಮೆಂಟ್ ನಡೆಯುತ್ತಿದ್ದಾಗಲೇ ದುಷ್ಕರ್ಮಿಗಳು ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಎದೆ ಮತ್ತು ತಲೆಯನ್ನು ಗುರಿಯಾಗಿಸಿ ದುಷ್ಕರ್ಮಿಗಳು 20 ಸುತ್ತು ಗುಂಡು ಹಾರಿಸಿದ್ದಾರೆ.
ಸಂದೀಪ್ ತಲೆಯೊಳಗೆ ಎಂಟರಿಂದ ಹತ್ತು ಬುಲೆಟ್ ಹೊಕ್ಕಿರುವುದಾಗಿ ಜಲಂಧರ್ ಡಿಎಸ್ಪಿ ಲಕ್ವೀಂದರ್ ಸಿಂಗ್ ತಿಳಿಸಿದ್ದಾರೆ. ತುಂಬ ಹತ್ತಿರದಿಂದ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿದ್ದು, ಸ್ಥಳದಲ್ಲಿ ಸೇರಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸಂದೀಪ್ ನಂಗಾಲ್ ನೆಲದಲ್ಲಿ ಬಿದ್ದು ಉರುಳಾಡಿದ್ದ ವಿಡಿಯೋ ವೈರಲ್ ಆಗಿದೆ. ಜಲಂಧರ್ ನಗರ ಹೊರವಲಯದ ಮಾಲಿಯಾನ್ ಗ್ರಾಮದಲ್ಲಿ ಕಬಡ್ಡಿ ಟೂರ್ನಮೆಂಟ್ ನಡೆಯುತ್ತಿದ್ದಾಗಲೇ ಗುಂಡಿನ ಹಾರಾಟ ನಡೆದಿದೆ.
ಪಂಜಾಬ್ ರಾಜ್ಯದ ಜಲಂಧರ್ ಮೂಲದ ಸಂದೀಪ್ ನಂಗಾಲ್, ಕಳೆದ ಹತ್ತು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆನಡಾ, ಅಮೆರಿಕ, ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ ಪರವಾಗಿ ಆಕರ್ಷಕ ಆಟವಾಡಿ ಗಮನ ಸೆಳೆದಿದ್ದರು. ಇತ್ತೀಚೆಗೆ ಜಲಂಧರ್ ನಲ್ಲಿ ಕಬಡ್ಡಿ ಫೆಡರೇಶನ್ ಒಂದನ್ನು ನಡೆಸುತ್ತಿದ್ದ ಸಂದೀಪ್ ಜೊತೆಗೆ ಗಾಲ್ಫ್ ಕ್ಲಬ್ ನವರು ಜಟಾಪಟಿ ನಡೆಸಿದ್ದರು. ಇದೇ ವಿಚಾರದಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿದೆ ಎನ್ನಲಾಗುತ್ತಿದೆ.
International Kabbadi player Sandeep Nangal was shot dead by unidentified assailants during a Kabaddi Cup in a Malian village in Jalandhar. It has been learned that around 20 rounds were fired at his head and chest.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm