ಬ್ರೇಕಿಂಗ್ ನ್ಯೂಸ್
13-03-22 01:50 pm Mangalore Correspondent ಕ್ರೈಂ
ಮಂಗಳೂರು, ಮಾ.13: ಮಂಗಳೂರಿನ ಹಿರಿಯ ಪತ್ರಕರ್ತರೊಬ್ಬರಿಗೆ ಫೋನ್ ಮಾಡಿದ್ದ ಉತ್ತರ ಭಾರತ ಮೂಲದ ನಕಲಿ ಮೋಸಗಾರರು ಕೆವೈಸಿ ಮಾಹಿತಿ ಕೇಳಿ ಕೊನೆಗೆ ತಾವೇ ಉಗಿಸಿಕೊಂಡ ಘಟನೆ ನಡೆದಿದೆ.
ಮಂಗಳೂರಿನ ದಿ ಹಿಂದು ಪತ್ರಿಕೆಯ ನಿವೃತ್ತ ಪತ್ರಕರ್ತ, ಈಗ ಫ್ರೀಲ್ಯಾನ್ಸಿ ಆಗಿ ಕೆಲಸ ಮಾಡುತ್ತಿರುವ ರಘುರಾಮ್ ಅವರಿಗೆ ಫೋನ್ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಬಿಎಸ್ಸೆನ್ನೆಲ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಆಧಾರ್ ಕಾರ್ಡ್, ಇನ್ನಿತರ ಕೆವೈಸಿ ಮಾಹಿತಿಗಳನ್ನು ನೀಡುವಂತೆ ಕೇಳಿದ್ದಾನೆ. ಈ ರೀತಿಯ ಮೋಸದ ಬಗ್ಗೆ ಅರಿವಿದ್ದ ರಘುರಾಮ್, ಮೊದಲಿಗೆ ಏನೂ ಅರಿಯದವರಂತೆ ನಟಿಸಿದ್ದಾರೆ. ಹೌದು.. ಕೆವೈಸಿ ಅಪ್ಡೇಟ್ ಎಂದರೇನು, ಯಾವೆಲ್ಲ ಮಾಹಿತಿಗಳು ಬೇಕು ಎಂದು ಕೇಳಿದ್ದಾರೆ.
ಇದೇ ವಿಚಾರದಲ್ಲಿ ಆಗಂತುಕ ವ್ಯಕ್ತಿ ಎರಡು, ಮೂರು ಬಾರಿ ಕರೆ ಮಾಡಿದ್ದು, ಹಿಂದಿಯಲ್ಲಿ ಮಾತನಾಡಿದ್ದ. ನೀವು ಸರಿಯಾದ ಮಾಹಿತಿ ನೀಡದಿದ್ದರೆ ನಿಮ್ಮ ಸಿಮ್ ಬ್ಲಾಕ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಅದಕ್ಕೆ ಹೋಗಪ್ಪಾ, ಬ್ಲಾಕ್ ಮಾಡು.. ನೀನು ಯಾರಿಗೆ ಮೋಸ ಮಾಡುತ್ತಿದ್ದೀಯಾ.. ನಾನು ಬಿಎಸ್ಸೆನ್ನೆಲ್ ಸಿಮ್ ಹಿಂದಿನಿಂದಲೂ ಬಳಸುತ್ತಿದ್ದೇನೆ ಎಂದು ಹೇಳಿ ತಿರುಗಿ ಬೈದಿದ್ದಾರೆ. ಬೈಗುಳ ಕೇಳುತ್ತಲೇ ಮೋಸಗಾರ ವ್ಯಕ್ತಿ ಕರೆ ಕಟ್ ಮಾಡಿದ್ದಾನೆ.
ಈ ಬಗ್ಗೆ ರಘುರಾಮ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಸೈಬರ್ ಠಾಣೆಯ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ತನಗೆ ಕರೆ ಮಾಡಿದ್ದ ವ್ಯಕ್ತಿಯ 6290455345 ಹಾಗೂ 9749759698 ಮೊಬೈಲ್ ನಂಬರಿನ ಬಗ್ಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಆಗಂತುಕನ ಮೊಬೈಲ್ ನಂಬರನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದಾರಂತೆ.
ಕಳೆದ ಎರಡು- ಮೂರು ವರ್ಷಗಳಲ್ಲಿ ಈ ರೀತಿಯ ಮೋಸದಾಟ ನಡೆಯುತ್ತಿದ್ದು, ಪಶ್ಚಿಮ ಬಂಗಾಳ, ಬಿಹಾರದ ವ್ಯಕ್ತಿಗಳು ತಾವು ಬ್ಯಾಂಕ್ ಸಿಬಂದಿ, ಮೊಬೈಲ್ ಕಂಪನಿಯಿಂದ ಎಂದು ಹೇಳಿಕೊಂಡು ಜನಸಾಮಾನ್ಯರನ್ನು ಯಾಮಾರಿಸಿ ವಂಚಿಸುತ್ತಿದ್ದಾರೆ. ಬ್ಯಾಂಕ್ ಮಾಹಿತಿ ಪಡೆದು ಆಧಾರ್, ಪಾನ್ ಕಾರ್ಡ್, ಓಟಿಪಿ ನಂಬರ್ ಕೇಳಿ, ಬ್ಯಾಂಕ್ ಖಾತೆಯಿಂದಲೇ ಹಣ ಪೀಕಿಸುತ್ತಾರೆ. ಇಂಗ್ಲಿಷ್, ಹಿಂದಿಯಲ್ಲಿ ವ್ಯವಹರಿಸುತ್ತಿದ್ದವರು ಈಗ ಕನ್ನಡದಲ್ಲಿಯೂ ಮಾತನಾಡಿ ಜನರನ್ನು ಸುಲಭದಲ್ಲಿ ನಂಬುವಂತೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಿದರೆ, ನೈಜ ಬ್ಯಾಂಕ್ ಸಿಬಂದಿಯೇ ಆಗಿರಬೇಕು ಎಂದು ಮಾಹಿತಿ ನೀಡುತ್ತಾರೆ ಎನ್ನುವ ನೆಲೆಯಲ್ಲಿ ಮೋಸದಾಟ ಮಾಡುತ್ತಾರೆ.
An alert citizen foiled the attempt of an online fraudster who tried to take him for a ride. The fraudster called the citizen and said that he was calling from the BSNL company and asked for KYC related documents. The stranger called the person from 6290455345 and 9749759698 mobile numbers. He said that he was calling from BSNL and if the subscriber does not provide necessary documents for KYC, the sim card would be blocked. When the alert citizen started questioning him more, the fraudster started abusing him and cut the call.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm