ಬ್ರೇಕಿಂಗ್ ನ್ಯೂಸ್
08-03-22 02:12 pm Bengalore Correspondent ಕ್ರೈಂ
ಬೆಂಗಳೂರು, ಮಾ.8: ಮುಂಬೈನಲ್ಲಿ ಕೊಲೆ, ದರೋಡೆ, ಹಫ್ತಾ ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಲಿಯಾಸ್ ಅಬ್ದುಲ್ ಆಸಿಫ್ ಅಕಾ ಬಕ್ಕಣ್ಣ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈನಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಫ್ತಾ , ಡಕಾಯಿತಿ ಹೀಗೆ 37 ಪ್ರಕರಣಗಳನ್ನು ಆರೋಪಿ ಎದುರಿಸುತ್ತಿದ್ದ. ಆರೋಪಿ ಇಲಿಯಾಸ್, ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿ ಕೃಷ್ಣ , ಎಎಸ್ಪಿ ಲಕ್ಷ್ಮೀ ಗಣೇಶ್, ಆನೇಕಲ್ ಡೆಪ್ಯುಟಿ ಎಂ. ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಪೊಲೀಸರು ಬೆನ್ನುಬಿದ್ದಾಗ, ಆರೋಪಿ ಇಲಿಯಾಸ್ ತನ್ನಲ್ಲಿದ್ದ ಗನ್ ತೆಗೆದು ತಿರುಗಿ ಬೀಳಲು ಸಜ್ಜಾಗಿದ್ದ. ಆದರೆ ಪೊಲೀಸರು ಶಸ್ತ್ರ ಸಜ್ಜಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಪ್ರತಿದಾಳಿ ನಡೆಸಲು ಮುಂದಾಗದೆ ಶರಣಾಗಿದ್ದಾನೆ. ಆರೋಪಿ ಬಳಿಯಿಂದ ನಾಲ್ಕು ಸಜೀವ ಗುಂಡು, ಒಂದು ಪಿಸ್ತೂಲ್, 15 ಸಿಮ್ ಕಾರ್ಡ್, ಆರು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಸಿಕಂದರ್ ರಾಜು ಲೂಲಾಡಿಯಾ ಎಂಬ ಉದ್ಯಮಿಯನ್ನು ಆತನ ಕಚೇರಿಯಲ್ಲೇ ಹಣಕ್ಕಾಗಿ ಕಬ್ಬಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಲಾಗಿತ್ತು. ಅದರಲ್ಲಿ ಪ್ರಮುಖ ಆರೋಪಿಯಾಗಿದ್ದ ಇಲಿಯಾಸ್ ಅಬ್ದುಲ್ ಆಸಿಫ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಮುಂಬೈ ನಗರ ಮತ್ತು ಮಹಾರಾಷ್ಟ್ರದಾದ್ಯಂತ ಆರೋಪಿ ಪತ್ತೆಗೆ ಹುಡುಕಾಟ ನಡೆದಿತ್ತು. ಹಾಗಾಗಿ ಕರ್ನಾಟಕಕ್ಕೆ ಬಂದು ದಕ್ಷಿಣ ಬೆಂಗಳೂರಿನ ನಿಗೂಢ ಜಾಗದಲ್ಲಿ ಅವಿತುಕೊಂಡಿದ್ದ. ಈ ಬಗ್ಗೆ ಮುಂಬೈ ಪೊಲೀಸರು ನೀಡಿದ ಸುಳಿವು ಆಧರಿಸಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
The Karnataka Police have arrested one of the most wanted Mumbai gangsters, Iliyas Abdul Asif a.k.a Bhackana, in an early morning operation here on Tuesday.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm