ಬ್ರೇಕಿಂಗ್ ನ್ಯೂಸ್
20-02-22 12:40 pm HK Desk news ಕ್ರೈಂ
ಮುಂಬೈ, ಫೆ.20 : ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ, ಗ್ರೋಸರಿ ಸಾಮಾನುಗಳ ಚೈನ್ ಲಿಂಕ್ ಬಿಸಿನೆಸ್ ಕಂಪನಿ ನೂತನ್ ದಾಲ್ ಮಿಲ್ ಹೆಸರಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ನೂರಾರು ಮಂದಿಯಿಂದ ಹೂಡಿಕೆ ಮಾಡಿಸಿ 40 ಕೋಟಿಗೂ ಹೆಚ್ಚು ಹಣ ಮೋಸ ಮಾಡಿರುವ ಆರೋಪದಲ್ಲಿ ಕಂಪನಿ ಮಾಲೀಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಮಹಿಳೆ ಅನಿತಾ ರೂಪ್ ಸಿಂಗ್ ಕಡೇಚಾ, ತನಗೆ 15 ಪರ್ಸೆಂಟ್ ಕಮಿಷನ್ ನೀಡುವುದಾಗಿ ಹೇಳಿ 41.5 ಲಕ್ಷ ಹೂಡಿಕೆ ಮಾಡಿಸಿ, ವಂಚನೆ ಎಸಗಿದ್ದಾಗಿ ಗೋರೆಗಾಂವ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ವೇಳೆ ಇದೇ ಮಾದರಿಯಲ್ಲಿ ಹಲವಾರು ಮಂದಿಗೆ ಮೋಸ ಎಸಗಿರುವುದು ಪತ್ತೆಯಾಗಿದೆ. ಅನಿತಾಗೆ ತನ್ನ ಗೆಳೆಯನ ಮೂಲಕ ಆರೋಪಿ ಕೇತನ್ ರಂಭಿಯಾ ಪರಿಚಯ ಆಗಿತ್ತು. ಗೆಳೆಯನೂ ಇದೇ ಮಾದರಿಯಲ್ಲಿ ಹಣ ಹೂಡಿಕೆ ಮಾಡಿದ್ದ. 2019ರ ಜೂನ್ ತಿಂಗಳಿಂದ 2020 ಡಿಸೆಂಬರ್ ನಡುವೆ 41.5 ಲಕ್ಷ ರೂ. ಹಣವನ್ನು ಅನಿತಾ ಹೂಡಿಕೆ ಮಾಡಿದ್ದರು. ಹಣ ಕೇಳಿದಾಗ, ಒಂದು ವರ್ಷ ನನ್ನಲ್ಲಿ ಇರಲಿ, ಮುಂದೆ 16 ಶೇಕಡಾ ಬಡ್ಡಿ ಸಹಿತ ನೀಡುವುದಾಗಿ ನಂಬಿಸಿದ್ದ. ಆನಂತರವೂ ಹಣ ಕೊಡದೇ ಇದ್ದಾಗ ತನಗೆ ಕೊಟ್ಟಿದ್ದ ಸ್ಟಾಂಪ್ ಪೇಪರ್ ಬಗ್ಗೆ ಚೆಕ್ ಮಾಡಿದ್ದಾರೆ. ಅದರಲ್ಲಿ ಸೀರಿಯಲ್ ನಂಬರ್ ಸೇಮ್ ಇರುವುದು ಕಂಡುಬಂದಿದ್ದು ಲಾಯರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.

ಹಲವಾರು ವರ್ಷಗಳಿಂದ ಗ್ರಾಹಕರಾಗಿರುವ ಮಂದಿಯನ್ನು ನಂಬಿಸಿ ಮೋಸ ಮಾಡಿದ್ದಾರೆ. ವರ್ಷಕ್ಕೆ 15 ರಿಂದ 16 ಪರ್ಸೆಂಟ್ ಲಾಭಾಂಶ ನೀಡುವುದಾಗಿ ಹೇಳಿ ಹಣ ಪಡೆದಿದ್ದರು. ಹಣ ಪಡೆಯುವಾಗ ನೂರು ರುಪಾಯಿ ಸ್ಟಾಂಪ್ ಪೇಪರಿನಲ್ಲಿ ಅಗ್ರಿಮೆಂಟ್ ಮಾಡಿಸುತ್ತಿದ್ದರು. ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದು 40 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂದು ಅನಿತಾ ಕಡೇಚಾ ಹೇಳಿದ್ದಾರೆ. ದೂರು ಆಧರಿಸಿ ಪೊಲೀಸರು ಆರೋಪಿ ರಂಭಿಯಾನನ್ನು ಬಂಧಿಸಿದ್ದಾರೆ.
The owner of Nutan Dal Mill, a chain of grocery stores and one of the leading businesses in the sector in Mumbai, has been arrested by Goregaon police for allegedly cheating a 34-year-old woman to the tune of Rs 41.5 lakh by promising her 15 per cent returns. Police said he duped a number of his customers using this modus operandi.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm