ಬ್ರೇಕಿಂಗ್ ನ್ಯೂಸ್
14-02-22 09:25 pm Bengaluru Correspondent ಕ್ರೈಂ
ಬೆಂಗಳೂರು, ಫೆ.14 : 100 ಕೋಟಿ ಲೋನ್ ಕೊಡಿಸುವುದಾಗಿ ಹೇಳಿ ಉದ್ಯಮಿಗಳನ್ನು ವಂಚಿಸುತ್ತಿದ್ದ ಅಂತರಾಜ್ಯ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಹಾಗೂ ಮಧ್ಯಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಸಂತೋಷ್, (36), ಸಂದೇಶ್ (45) ಸೇರಿ ಐವರ ಬಂಧಿತರು. ನೂರು ಕೋಟಿ ಲೋನ್ ಕೊಡಿಸೋದಾಗಿ ಹೇಳಿ ಉದ್ಯಮಿ ವಿನ್ಸನ್ ಎಂಬವರಿಂದ ಒಂದು ಕೋಟಿ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಸೂಟ್ಕೇಸ್ನಲ್ಲಿ ತುಂಬಿಸಿದ ಹಣವನ್ನು ತೋರಿಸಿ ಖದೀಮರು ಗಾಳ ಹಾಕುತ್ತಿದ್ದರು. ಎರಡು ಸಾವಿರ ಮುಖಬೆಲೆಯ ಕೋಟ್ಯಾಂತರ ರೂ. ನಗದು ತೋರಿಸಿ ವಂಚನೆ ಎಸಗಿದ್ದಾರೆ ಎನ್ನಲಾಗಿತ್ತು. ವಿನ್ಸನ್, ಮೈಸೂರಿನ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿಯಾಗಿದ್ದು ವ್ಯಾಪಾರ ಅಭಿವೃದ್ಧಿ ಮಾಡಲು ಲೋನ್ ಪಡೆಯಲು ತಿರುಗಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ಸಂತೋಷ್ ಹಾಗೂ ಸಂದೇಶ್, ನೂರು ಕೋಟಿ ಲೋನ್ ತೆಗೆಸಿಕೊಡುವುದಾಗಿ ಹೇಳಿ ಸ್ನೇಹ ಸಂಪಾದಿಸಿದ್ದರು. ಆನಂತರ, ಹಲವು ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಮೀಟಿಂಗ್ ನಡೆಸಿದ್ದು ಈ ಬಗ್ಗೆ ಚರ್ಚೆ ನಡೆಸಿದ್ದರು.
ಸಾವಿರಾರು ಕೋಟಿ ಹಣ ತಮ್ಮ ಬಳಿ ಇರೋದಾಗಿ ಹೇಳಿದ್ದಲ್ಲದೆ, ನಂಬಿಕೆ ಬರಲು ಸೂಟ್ ಕೇಸ್ ಗಳಲ್ಲಿ ತುಂಬಿದ ಹಣವನ್ನು ತೋರಿಸಿ ಆಮಿಷ ಒಡ್ಡಿದ್ದರು. ಇದೆಲ್ಲಾ ಹಣ ನಿಮಗೂ ಸಿಗುತ್ತೆ. ಆದರೆ, ಹಣ ಸಿಗಬೇಕಾದ್ರೆ ಇಂತಿಷ್ಟು ಖರ್ಚಾಗುತ್ತೆ. ಅದಕ್ಕಾಗಿ ಒಂದು ಕೋಟಿ ಬೇಕೆಂದು ಹೇಳಿ ಉದ್ಯಮಿಯಿಂದಲೇ ಹಣವನ್ನು ಪಡೆದಿದ್ದರು. ಆದರೆ ನೂರು ಕೋಟಿಗಾಗಿ ಒಂದು ಕೋಟಿ ಹೋದರೆ ಹೋಗಲಿ ಎಂದು ಹಣ ಕೊಟ್ಟಿದ್ದ ಉದ್ಯಮಿ ತನಗೆ ಹಣ ಬರದಿದ್ದಾಗ ಮೋಸ ಆಗಿರುವ ಬಗ್ಗೆ ತಿಳಿದು ಪೊಲೀಸರತ್ತ ಬಂದಿದ್ದರು. ಸದ್ಯ ಐವರನ್ನ ಬಂಧಿಸಿ 87 ಲಕ್ಷ 73 ಸಾವಿರ ಹಣವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
The Electronics City police on Monday arrested a five-member gang allegedly for cheating several businessmen in the city offering huge amounts of loan and escaping with the 1% commission. This amount sums up to at least ₹1 crore. Based on a complaint filed by Vincent, a garment businessman, a team of police tracked down the gang and arrested them from Mumbai and Madhya Pradesh.
25-06-25 10:32 pm
Bangalore Correspondent
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
25-06-25 10:46 pm
Mangalore Correspondent
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
26-06-25 12:42 am
HK News Desk
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm
Social Media, Woman Murder, Affair, Mandya: ಪ...
25-06-25 04:06 pm
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm