ಬ್ರೇಕಿಂಗ್ ನ್ಯೂಸ್
09-02-22 04:53 pm HK Desk news ಕ್ರೈಂ
ಮಂಡ್ಯ, ಫೆ.9 : ಮಂಡ್ಯವನ್ನು ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಐವರ ಹತ್ಯಾಕಾಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಎರಡೇ ದಿನದಲ್ಲಿ ಪೊಲೀಸರು ಹತ್ಯೆ ಹಿಂದಿನ ಕಹಾನಿಯನ್ನು ಭೇದಿಸಿದ್ದಾರೆ. ಅಕ್ರಮ ಸಂಬಂಧವೇ ಕೊಲೆಗೆ ಮೂಲ ಕಾರಣ ಎನ್ನೋದು ಬೆಳಕಿಗೆ ಬಂದಿದ್ದು, ತನ್ನ ಕಾಮತೀಟೆಗೆ ಅಡ್ಡಿಯಾದ ತಂಗಿ ಮತ್ತು ಆಕೆಯ ಮಕ್ಕಳನ್ನೇ ಅಕ್ಕನೇ ನಿರ್ದಾಕ್ಷಿಣ್ಯವಾಗಿ ಕೊಲೆಗೈದಿರುವ ವಿಚಾರ ಬಯಲಾಗಿದೆ.
ಫೆ.6ರಂದು ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್ ಎಸ್ ಬಳಿ ಐವರನ್ನು ಕೊಚ್ಚಿ ಕೊಲೆಗೈದ ಭೀಕರ ಹತ್ಯಾಕಾಂಡ ನಡೆದಿದ್ದು, ಮರುದಿನ ವಿಷಯ ತಿಳಿಯುತ್ತಲೇ ಸ್ಥಳೀಯ ಜನರು ಬೆಚ್ಚಿಬೀಳುವಂತಾಗಿತ್ತು. ಗಂಗಾರಾಮ್ ಎಂಬಾತನ ಪತ್ನಿ ಲಕ್ಷ್ಮೀ(26), ರಾಜ್(13), ಕೋಮಲ್(7), ಕುನಾಲ್ (4), ಗೋವಿಂದ (8) ಎಂಬ ತಾಯಿ, ಮಕ್ಕಳು ಒಂದೇ ರಾತ್ರಿಯಲ್ಲಿ ಮಲಗಿದಲ್ಲೇ ದುರಂತ ಸಾವು ಕಂಡಿದ್ದರು.

ಕೊಲೆಯ ಬಳಿಕ ಸಿಕ್ಕಿದ್ದ ಸುಳಿವನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೈಸೂರು ನಿವಾಸಿ ಲಕ್ಷ್ಮೀ(30) ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ಸಂಬಂಧದಲ್ಲಿ ಕೊಲೆಯಾದ ಮಹಿಳೆಗೆ ದೊಡ್ಡಪ್ಪನ ಮಗಳಾಗಿದ್ದು, ಅಕ್ಕ ಆಗುತ್ತಾಳೆ. ತನ್ನ ಗಂಡ ಗಂಗಾರಾಮ್ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಲಕ್ಷ್ಮೀ ಇತ್ತೀಚೆಗೆ ರಂಪ ಮಾಡಿದ್ದಳು. ಆನಂತರ, ಗಂಡ ಆಕೆಯಿಂದ ದೂರವಿದ್ದು, ಪತ್ನಿ, ಮಕ್ಕಳ ಜೊತೆಗೆ ವಾಸವಿದ್ದ. ಮೊನ್ನೆ ಗಂಗಾರಾಮ್ ವ್ಯಾಪಾರ ನಿಮಿತ್ತ ಮನೆಯಿಂದ ದೂರ ಇರುವ ವಿಚಾರ ತಿಳಿದಿದ್ದ ಆರೋಪಿ ಲಕ್ಷ್ಮೀ, ನಿನ್ನ ಜೊತೆ ಮಾತನಾಡಲು ಇದೆಯೆಂದು ಹೇಳಿ ಈಕೆಯ ಮನೆಗೆ ಬಂದಿದ್ದಳು.

ಆನಂತರ ಜೊತೆಗೆ ಊಟ ಮಾಡಿ ಮಲಗಿದ್ದ ಆರೋಪಿ ಲಕ್ಷ್ಮೀ, ತಾಯಿ, ಮಕ್ಕಳು ನಿದ್ರೆಗೆ ಜಾರುತ್ತಲೇ ಮನೆಯಲ್ಲಿದ್ದ ಸುತ್ತಿಗೆಯಿಂದ ತಲೆಗೆ ಬಡಿದು ಒಬ್ಬೊಬ್ಬರನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಸೋದರಿ ಲಕ್ಷ್ಮೀಯನ್ನು ಮಾತ್ರ ಹತ್ಯೆ ಮಾಡುವ ಉದ್ದೇಶ ಇತ್ತಾದರೂ, ಆನಂತರ ಮಕ್ಕಳು ನೋಡಿದರೆಂದು ಅವರನ್ನೂ ಕೊಂದು ಮುಗಿಸಿದ್ದಾಳೆ. ಕೃತ್ಯದ ಬಳಿಕ ಏನೂ ಆಗೇ ಇಲ್ಲ ಎನ್ನುವಂತೆ ನಾಲ್ಕೈದು ಗಂಟೆ ಅದೇ ಮನೆಯಲ್ಲಿ ಕಳೆದು ನಸುಕಿನ ಜಾವ ನಾಲ್ಕು ಗಂಟೆಗೆ ಮೈಸೂರಿಗೆ ತೆರಳಿದ್ದಳು. ಆನಂತರ ಮರುದಿನ ಬೆಳಗ್ಗೆ ಹತ್ತು ಗಂಟೆಗೆ ಸ್ಥಳಕ್ಕೆ ಬಂದು ತಂಗಿ ಸತ್ತಿರುವ ಬಗ್ಗೆ ಗೋಳಾಡಿ ನಾಟಕ ಮಾಡಿದ್ದಾಳೆ. ತನ್ನ ತಂಗಿಯನ್ನು ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿ, ಅತ್ತು ಕರೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಳು. ಆದರೆ, ಕೊಲೆ ಕೃತ್ಯದ ಬಗ್ಗೆ ಲಕ್ಷ್ಮೀ ಗಂಡ ಗಂಗಾರಾಮ್ ಗೆ ತಿಳಿದಿರಲಿಲ್ಲ.

ಆದರೆ ಗಂಗಾರಾಮ್ ಜೊತೆಗೆ ಪ್ರೀತಿ ಮತ್ತು ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮೀ, ಆತನನ್ನು ಪಡೆದೇ ತೀರಬೇಕೆಂದು ತಂಗಿ ಮತ್ತು ಆಕೆಯ ಮಕ್ಕಳನ್ನು ಕೊಂದು ಹಾಕಿದ್ದಾಳೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆಯ ಬಳಿಕ ಮನೆಯ ಮುಂದೆ ಗೋಳಾಡಿದ್ದಲ್ಲದೆ, ಟಿವಿ ಕ್ಯಾಮರಾಗಳನ್ನು ಕಂಡು ದೂರಕ್ಕೆ ಹೋಗುವಂತೆ ಬೆದರಿಕೆ ಹಾಕಿದ್ದಳು. ಕ್ಯಾಮರಾದಲ್ಲಿ ಬರದಂತೆ ಮುಖ ಮುಚ್ಚಿಕೊಳ್ಳುತ್ತಿದ್ದ ಯುವತಿ, ಟಿವಿಯವರು ಬರಬೇಡಿ ಎಂದು ಹೇಳುತ್ತಿದ್ದಳು.
ಆದರೆ, ಗಂಗಾರಾಮ್ ಮತ್ತು ಲಕ್ಷ್ಮೀ ನಡುವಿನ ಸಂಬಂಧದ ಬಗ್ಗೆ ತಿಳಿದಿದ್ದ ಕೆಲವರು ಪೊಲೀಸರಿಗೆ ಸುಳಿವು ನೀಡಿದ್ದರು. ಅದೇ ಸುಳಿವು ಆಧರಿಸಿ, ಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪಾತಕಿಯ ಕೃತ್ಯ ತಿಳಿದುಬಂದಿದೆ. ತಂಗಿ, ಮಕ್ಕಳನ್ನು ಕೊಂದು ಮುಗಿಸಿದರೆ, ಗಂಗಾರಾಮ್ ಜೊತೆ ಸಂತೋಷದಿಂದ ಬಾಳಬಹುದು ಎಂದುಕೊಂಡಿದ್ದ ಲಕ್ಷ್ಮೀ ಈಗ ಕಂಬಿ ಎಣಿಸುವಂತಾಗಿದೆ.
ಮಂಡ್ಯದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ; ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ 5 ಜನರ ಕೊಲೆ !
Five of family found murdered in Mandya, illicit affair reason for Murder. Five of a family, including four children, were found murdered at KRS village in Srirangapatna taluk in Mandya district on Sunday.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm