ಬ್ರೇಕಿಂಗ್ ನ್ಯೂಸ್
21-01-22 11:00 pm Mangalore Correspondent ಕ್ರೈಂ
ಮಂಗಳೂರು, ಜ.21 : ನಗರದ ಕುದ್ರೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಆಕೆಯ ಗಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾನೆ.
ಅಸ್ಸಾಮ್ ಮೂಲದ ಸ್ವಹೀದುಲ್ ಅಸ್ಲಾಮ್ ಲಷ್ಕರ್ (30) ಎಂಬ ಯುವಕ ಮತ್ತು ಆತನ ಪತ್ನಿ ಎನ್ನಲಾದ ಸೂಫಿಯಾ ಬೇಗಂ ಆರು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಕುದ್ರೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸ್ವಹೀದುಲ್ ಮಂಗಳೂರಿನಲ್ಲಿ ಪೈಂಟಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಅಡುಗೆ ಕೆಲಸ ಮಾಡಿ ಮಲಗಿದ್ದು, ಬೆಳಗ್ಗೆ 7.45ಕ್ಕೆ ಎದ್ದು ನೋಡಿದಾಗ ಸೂಫಿಯಾ ಬೇಗಂ ತನ್ನ ಮಲಗಿದ ಕೋಣೆಯಲ್ಲಿ ಕಿಟಕಿಯ ಸರಳಿಗೆ ಚೂಡಿದಾರದ ಶಾಲು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಶಾಲಿನಿಂದ ಬಿಡಿಸಿ ನೆಲದಲ್ಲಿ ಮಲಗಿಸಿದ್ದೇನೆ. ನೆರೆಹೊರೆಯವರಿಗೆ ಈ ಬಗ್ಗೆ ತಿಳಿಸಿದ್ದು ಸೂಫಿಯಾ ಮೃತಪಟ್ಟಿದ್ದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ಲಷ್ಕರ್ ಹೇಳಿದ್ದಾನೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಕೂಡ ಅಸ್ಸಾಂ ಮೂಲದ ನಿವಾಸಿಗಳಾಗಿದ್ದು ಪೊಲೀಸರು ಲಷ್ಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಮಂಗಳೂರಿಗೆ ಬರುತ್ತಿದ್ದಾರೆ ಅನ್ನುವ ಮಾಹಿತಿಯಿದೆ. ಆಕೆಯ ಹೆತ್ತವರ ಮಾಹಿತಿ ಪ್ರಕಾರ, ಯುವತಿಗೆ 17 ವರ್ಷ ಆಗಿದ್ದು, ಹತ್ತನೇ ಕ್ಲಾಸ್ ಓದುತ್ತಿರುವಾಗಲೇ ಆಕೆಯನ್ನು ಪ್ರೀತಿಸಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಈಗ ಯಾವುದೋ ವಿಚಾರದಲ್ಲಿ ಕಲಹ ಏರ್ಪಟ್ಟು ಹುಡುಗಿ ಸಾವಿಗೆ ಶರಣಾಗಿದ್ದಾಳೆಯೇ ಅಥವಾ ಈತನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಯೇ ಎಂಬ ಶಂಕೆಯಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
A painter has filed a complaint with the Bunder police that his wife committed suicide on Friday, January 21. According to the complaint, the deceased Sufia Begam was living with the painter Shohidul in a rented house in Kudroli for the past five months. Sufia Begam was a homemaker.
25-06-25 10:32 pm
Bangalore Correspondent
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
25-06-25 10:46 pm
Mangalore Correspondent
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
25-06-25 11:11 pm
Mangalore Correspondent
Social Media, Woman Murder, Affair, Mandya: ಪ...
25-06-25 04:06 pm
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm