ಬ್ರೇಕಿಂಗ್ ನ್ಯೂಸ್
20-01-22 08:54 pm Mangalore Correspondent ಕ್ರೈಂ
ಮಂಗಳೂರು, ಜ.20 : ಆಂಬುಲೆನ್ಸ್ ಸಾಗುತ್ತಿದ್ದಾಗ ಬದಿಗೆ ಸರಿಯದೆ, ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಕಾರು ಓಡಿಸಿದ ಚಾಲಕನ ವಿರುದ್ಧ ಮಂಗಳೂರಿನ ಉತ್ತರ ಸಂಚಾರಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು ಮಾಡಲಾಗಿದೆ.
ಆಂಬುಲೆನ್ಸ್ ಮಂಗಳೂರಿನಿಂದ ಉಡುಪಿ ಮೂಲಕ ಭಟ್ಕಳಕ್ಕೆ ಸಾಗುತ್ತಿದ್ದಾಗ, ಮೂಲ್ಕಿಯಿಂದ ಉಡುಪಿ ವರೆಗೂ ಸುಮಾರು 40 ಕಿಮೀ ಉದ್ದಕ್ಕೆ ಕಾರು ಚಾಲಕ ಎದುರಿನಿಂದ ವೇಗವಾಗಿ ಸಾಗಿದ್ದಾನೆ. ಆಂಬುಲೆನ್ಸ್ ಚಾಲಕ ಸೈರನ್ ಮಾಡಿಕೊಂಡು ಹೋಗುತ್ತಿದ್ದು, ಗಂಟೆಗೆ 110-120 ಕಿಮೀ ವೇಗದಲ್ಲಿ ಸಾಗುತ್ತಿರುವುದನ್ನು ವಿಡಿಯೋ ಮಾಡಿದ್ದಾನೆ. ಇದೇ ವೇಳೆ, ಅದರ ಮುಂದಿನಿಂದ ಕಾರು ಚಾಲಕ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ 130 ಕಿಮೀ ವೇಗದಲ್ಲಿ ಕಾರು ಓಡಿಸಿದ್ದು, ಆಂಬುಲೆನ್ಸ್ ವಾಹನಕ್ಕೆ ದಾರಿ ಬಿಟ್ಟುಕೊಟ್ಟಿಲ್ಲ ಎಂದು ವಿಡಿಯೋ ರೆಕಾರ್ಡ್ ಮಾಡಿ ಚಾಲಕ ಹೈಬು ಎಂಬವರು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ರಿಜಿಸ್ಟ್ರೇಶನ್ ಹೊಂದಿದ್ದ ಕಾರು ಚಾಲಕನ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ವಿಡಿಯೋ ಆಧರಿಸಿ, ಮಂಗಳೂರಿನ ಸಂಚಾರಿ ಠಾಣೆ ಪೊಲೀಸರು ಸುಮೊಟೋ ಕೇಸು ದಾಖಲಿಸಿದ್ದು, ಆರೋಪಿ ಚಾಲಕನನ್ನು ಕಾರು ಸಹಿತ ಬಂಧಿಸಿದ್ದಾರೆ. ಕಾರು ಚಾಲಕ ಮಂಗಳೂರಿನ ಅತ್ತಾವರ ನಿವಾಸಿ ಮೋನಿಷ್ (23) ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ, ಆಂಬುಲೆನ್ಸ್ ಗೆ ದಾರಿ ಮಾಡುವುದಕ್ಕಾಗಿ ಮುಂದಿನಿಂದ ಸಾಗಿದ್ದಾಗಿ ತಿಳಿಸಿದ್ದಾನೆ.
ವಿಡಿಯೋದಲ್ಲಿ ಕಾರು ಚಾಲಕ ಆಂಬುಲೆನ್ಸ್ ವಾಹನಕ್ಕೆ ಅಡ್ಡಿಯಾಗಿರುವುದು ಕಂಡುಬಂದಿಲ್ಲ. ಆದರೆ ಆಂಬುಲೆನ್ಸ್ ವಾಹನಕ್ಕಿಂತಲೂ ಅತಿ ವೇಗದ ಚಾಲನೆ ಮಾಡಿದ್ದಾನೆ. ಇದಕ್ಕಾಗಿ ಆತನ ವಿರುದ್ಧ ಐಪಿಸಿ 279, 184 ಐಎಂವಿ ಅಡಿ ನಿರ್ಲಕ್ಷ್ಯದ ಚಾಲನೆ ಮತ್ತು ಅತಿವೇಗದ ಚಾಲನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಸಿಎಂ ಇನ್ನಿತರ ವಿಐಪಿಗಳು ಬಂದಾಗ ಝೀರೋ ಟ್ರಾಫಿಕ್ ಮಾಡಿ, ಗಂಟೆಗೆ ನೂರು ಕಿಮೀ ವೇಗದಲ್ಲಿ ಸಾಗುವುದಿದೆ. ಆದರೆ, ಸಾಮಾನ್ಯ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಇರುವಾಗ ಇಷ್ಟು ವೇಗದಲ್ಲಿ ಸಾಗುವುದು ತಪ್ಪಾಗುತ್ತದೆ. ಅಡ್ಡಲಾಗಿ ವಾಹನ ಬಂದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಚಾಲಕನ ವಿರುದ್ಧ ಕೇಸು ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
A youth has been arrested for audaciously obstructing an ambulance from passing by on the road for 40 kilometers. The accused Monish has been booked under sections 279 of IPC and 184 of Indian Motor Vehicle (IMV) Act. The video of this has gone viral on social media.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm