ಬ್ರೇಕಿಂಗ್ ನ್ಯೂಸ್
18-04-26 10:37 pm HK News Staffer ಕ್ರೈಂ
ಮಹಾರಾಷ್ಟ್ರ, ಎಪ್ರಿಲ್ 18 : ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಜಗಳಗಳು ಸಾಮಾನ್ಯವಾದರೂ, ಅವು ಕೆಲವೊಮ್ಮೆ ಭೀಕರ ಅಂತ್ಯಕ್ಕೆ ಕಾರಣವಾಗುವ ಉದಾಹರಣೆಗಳು ಇವೆ. ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ ಅರ್ನಿ ತಾಲೂಕಿನ ಬೋರ್ಗಾಂವ್ನಲ್ಲಿ ನಡೆದ ಘಟನೆ ಇದಕ್ಕೆ ಮತ್ತೊಂದು ಉದಾಹರಣೆ. ಮಟನ್ ಸರಿಯಾಗಿ ಬೇಯಿಸಿಲ್ಲ ಎಂಬ ಕಾರಣಕ್ಕೆ ಗಂಡ ಮಾಡಿದ ಅವಮಾನವನ್ನು ಸಹಿಸಲಾಗದೆ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮೃತ ಚೇತನಾ ಅವರ ಪತಿ ಮನೋಜ್ ಜಾಧವ್ ತನ್ನ ಸ್ನೇಹಿತನನ್ನು ಮನೆಗೆ ಮಟನ್ ಊಟಕ್ಕೆ ಆಹ್ವಾನಿಸಿದ್ದನು. ಈ ವೇಳೆ ಅತಿಥಿಗಳ ಎದುರೇ ಮಟನ್ ಸರಿಯಾಗಿ ಬೇಯಿಸಿಲ್ಲ ಎಂದು ಹೆಂಡತಿಗೆ ಗದರಿಸಿ ಅವಮಾನಿಸಿದ್ದಾನೆ. ಇದೇ ವಿಚಾರಕ್ಕೆ ದಂಪತಿಗಳ ನಡುವೆ ವಾಗ್ವಾದ ಉಂಟಾಗಿದ್ದು, ಇದರಿಂದ ಮನನೊಂದ ಚೇತನಾ ತೀವ್ರ ನಿರಾಶೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಚೇತನಾ ಸಾವಿನ ಹಿಂದೆ ಗಂಡನ ಅನುಮಾನ ಸ್ವಭಾವವೂ ಕಾರಣವಾಗಿರಬಹುದು ಎಂಬ ಮಾಹಿತಿ ಹೊರಬಂದಿದೆ. ಮನೋಜ್ ಕುಡಿತದ ಚಟ ಹೊಂದಿದ್ದು, ಆಗಾಗ ಮನೆಗೆ ಬಂದು ಜಗಳವಾಡುತ್ತಿದ್ದನೆಂದು ಹೇಳಲಾಗಿದೆ. ಅಲ್ಲದೆ, 2015ರಲ್ಲಿ ಅವನ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಾಗಿತ್ತು. ನಂತರ 2017ರಲ್ಲಿ ಚೇತನಾ ‘ಸಂತೋಷದಿಂದ ಬದುಕಬೇಕು’ ಎಂಬ ನಿರ್ಧಾರದಿಂದ ಗಂಡನನ್ನು ಕ್ಷಮಿಸಿ ಸಂಸಾರ ಮುಂದುವರಿಸಿದ್ದಳು.
ಆದರೆ ಅವಮಾನದಿಂದ ಮನನೊಂದು ಚೇತನಾ ತಕ್ಷಣವೇ ವಿಷ ಸೇವಿಸಿದ್ದಾಳೆ. ಆಕೆಯನ್ನು ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಈ ಸಂಬಂಧ ಚೇತನಾಳ ಚಿಕ್ಕಪ್ಪ ಮನೋಹರ್ ರಾಥೋಡ್ ನೀಡಿದ ದೂರಿನ ಮೇರೆಗೆ, ಪೊಲೀಸರು ಮನೋಜ್ ಜಾಧವ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಇಂತಹ ಘಟನೆಗಳು ಕುಟುಂಬ ಜೀವನದಲ್ಲಿ ಸಹನೆ, ಪರಸ್ಪರ ಗೌರವ ಮತ್ತು ಸಂವಹನದ ಮಹತ್ವವನ್ನು ನೆನಪಿಸುತ್ತವೆ. ಸಣ್ಣ ವಿಷಯಗಳು ದೊಡ್ಡ ದುರಂತಗಳಿಗೆ ಕಾರಣವಾಗದಂತೆ, ಮನಸ್ಸಿನ ಒತ್ತಡಗಳನ್ನು ಹಂಚಿಕೊಳ್ಳುವುದು ಮತ್ತು ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರ ಹುಡುಕುವುದು ಅತ್ಯಗತ್ಯವಾಗಿದೆ.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm