ಬ್ರೇಕಿಂಗ್ ನ್ಯೂಸ್
24-02-25 09:43 pm Mangalore Correspondent ಕ್ರೈಂ
ಮಂಗಳೂರು, ಫೆ.24: ಮಂಗಳೂರು ನಗರ ಮಧ್ಯದ ಕೊಡಿಯಾಲಬೈಲಿನಲ್ಲಿರುವ ಸಬ್ ಜೈಲಿಗೆ ಹಿಂದಿನಿಂದಲೂ ಗಾಂಜಾ ಇನ್ನಿತರ ಮಾದಕ ಪದಾರ್ಥಗಳನ್ನು ಪೂರೈಸುವ ಆರೋಪಗಳಿದ್ದವು. ಇದೀಗ ಶಂಕಿತ ಗಾಂಜಾ ಪ್ಯಾಕೆಟನ್ನು ಹಾಡಹಗಲೇ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಯುವಕರು ಜೈಲು ಆವರಣ ಗೋಡೆಯ ಹೊರಗಿನಿಂದ ಬಹಿರಂಗವಾಗಿಯೇ ಎಸೆಯುತ್ತಿರುವ ದೃಶ್ಯ ಸೆರೆಯಾಗಿದ್ದು, ಜೈಲು ಆವರಣದಲ್ಲಿ ಗಾಂಜಾ ಪೂರೈಕೆ ಖುಲ್ಲಂ ಖುಲ್ಲಾ ಆಗಿದ್ಯಾ ಎನ್ನುವ ಅನುಮಾನ ಏಳುವಂತಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್, ತನ್ನ ಕಾರಿನಲ್ಲಿ ಜೈಲಿನ ಎದುರಿನಿಂದ ಸಾಗುತ್ತಿದ್ದಾಗಲೇ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಸ್ಕೂಟರಿನಲ್ಲಿ ಬಂದು ಪ್ಲಾಸ್ಟಿಕ್ ಪೊಟ್ಟಣದಲ್ಲಿ ವಸ್ತುವೊಂದನ್ನು ಎಸೆಯುತ್ತಿರುವುದು ಪತ್ತೆಯಾಗಿದೆ. ಕೂಡಲೇ ಸ್ಕೂಟರನ್ನು ಬೆನ್ನತ್ತಿದಾಗ, ಅದರಲ್ಲಿದ್ದವರು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದಾರೆ. ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿ ಜೈಲು ಆವರಣದಿಂದ ಒಳಭಾಗಕ್ಕೆ ಪ್ಯಾಕೆಟ್ ಒಂದನ್ನು ಎಸೆಯುತ್ತಿರುವುದು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ದಾಖಲಾಗಿದೆ.
ಜೈಲಿನ ಒಳಗಿರುವ ಕೈದಿಗಳು ಸಿಗರೇಟ್, ಗಾಂಜಾ ಸೇವನೆ ಮಾಡುತ್ತಿರುವುದು, ಜೊತೆಗೆ ಮೊಬೈಲ್ ಬಳಕೆಯನ್ನೂ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಬಹಳಷ್ಟು ಆಪಾದನೆ ಕೇಳಿಬಂದಿತ್ತು. ಪೊಲೀಸರು ದಾಳಿ ನಡೆಸಿದಾಗಲಂತೂ ಗಾಂಜಾ ಇನ್ನಿತರ ಮಾದಕ ಪದಾರ್ಥಗಳು, ಮೊಬೈಲ್ಗಳೂ ಪತ್ತೆಯಾಗಿದ್ದವು. ಇದೀಗ ಜೈಲಿನ ಆವರಣದ ಬೃಹತ್ ಗೋಡೆಯ ಹೊರಗಿನಿಂದ ಒಳಭಾಗಕ್ಕೆ ಸ್ಕೂಟರಿನಲ್ಲಿ ಬಂದಿದ್ದ ಯುವಕರು ಹಾಡಹಗಲೇ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಗಾಂಜಾ ಎಸೆಯುತ್ತಿದ್ದಾರೆಯೇ ಎನ್ನುವ ರೀತಿಯ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಕವಿತಾ ಸನಿಲ್ ಜೈಲಿಗೆ ಭೇಟಿ ನೀಡಿದ್ದು, ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ. ಜೈಲಿನ ಒಳಗಡೆ ನಿರಾತಂಕ ಎನ್ನುವಂತೆ ಗಾಂಜಾ ಪೂರೈಕೆ ಆಗುತ್ತಿದೆ, ಬಂಧೀಖಾನೆ ಇಲಾಖೆಯ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ, ಗೃಹ ಸಚಿವರು ಇದ್ಯಾವುದರ ಗೊಡವೆ ಇಲ್ಲದಂತೆ ಇದ್ದಾರೆ ಎಂದು ಶಾಸಕ ಕಾಮತ್ ಟೀಕಿಸಿದ್ದಾರೆ. ಗಾಂಜಾ ಎಸೆಯುತ್ತಿರುವ ದೃಶ್ಯಕ್ಕೆ ಸಂಬಂಧಿಸಿ ಮಂಗಳೂರು ಜೈಲಿನ ಅಧೀಕ್ಷಕ ಆಶೇಖಾನ್ ಪ್ರತಿಕ್ರಿಯಿಸಿದ್ದು, ನಾವು ಜೈಲು ಆವರಣದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದೇವೆ. ಅದರಲ್ಲಿ ಗಾಂಜಾ ಸಿಕ್ಕಿಲ್ಲ, ಚಹಾ ಪುಡಿ ಮತ್ತು ಸಿಗರೇಟ್ ಎಸೆದಿರುವುದು ಸಿಕ್ಕಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಬರ್ಕೆ ಠಾಣೆಗೆ ದೂರು ನೀಡಿದ್ದೇವೆ ಎಂದು ಹೇಳುವ ಮೂಲಕ ಪ್ಯಾಕೆಟ್ ಎಸೆದಿದ್ದನ್ನು ಹೌದೆಂದು ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಜೈಲು ಆವರಣದ ನಿವಾಸಿಗಳು ಜಾಮರ್ ಅಳವಡಿಕೆಯಿಂದಾಗಿ ಮೊಬೈಲ್ ಸಂಪರ್ಕಕ್ಕೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ಹೇಳಿಕೊಂಡಿದ್ದರು. ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ, ಜಾಮರ್ ಯಂತ್ರದ ಪವರ್ ಕಡಿಮೆ ಮಾಡಬೇಕೆಂದು ಹೇಳಿದ್ದರು. ಆದರೆ ಜೈಲು ಹೊರಗಿನ ವ್ಯಕ್ತಿಗಳಿಗೆ ಜಾಮರ್ ಪ್ರಭಾವ ಇದ್ದರೂ, ಒಳಗಿರುವ ಕೈದಿಗಳಿಗೆ ಜಾಮರ್ ತೊಂದರೆ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ಗಾಂಜಾ ಇನ್ನಿತರ ಪ್ಯಾಕೆಟ್ ಎಸೆಯುವಾಗ, ಒಳಗಿರುವ ಕೈದಿಗಳಿಗೆ ಇದೇ ಜಾಗದಲ್ಲಿ ಎಸೆದಿದ್ದೇವೆ ಎನ್ನುವ ಮಾಹಿತಿ ಹೇಗೆ ರವಾನೆಯಾಗುತ್ತದೆ ಎನ್ನುವುದು ಯಕ್ಷಪ್ರಶ್ನೆ.
Illegal drug supply to Mangalore jail captured in dash cam of car, video goes viral. Former mayor Kavitha sanil car has captured the illegal activity at Mangalore central jail.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm