ಬ್ರೇಕಿಂಗ್ ನ್ಯೂಸ್
04-08-24 10:48 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 4: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಹಿಳೆಯೊಬ್ಬರು 1.65 ಕೋಟಿ ರೂಪಾಯಿ ಹಣ ಕಳಕೊಂಡಿದ್ದು ತಾನು ಮೋಸಕ್ಕೀಡಾದ ಬಗ್ಗೆ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ಸ್ ಟಾ ಗ್ರಾಮಿನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತಾ ಪಟೇಲ್ ಹೆಸರಿನ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಚಾಟ್ ಮಾಡಿ, ಷೇರ್ ಮಾರ್ಕೆಟ್ ಕುರಿತ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಆನಂತರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದ್ದ.
ನಂತರ, Fidelity pearl of south Asia ಎಂಬ ಷೇರು ಮಾರುಕಟ್ಟೆ ವಾಟ್ಸಪ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದರು. ಅದರಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದಂತೆ, ಫಿಡೆಲಿಟಿ ಏಪ್ ಡೌನ್ಲೋಡ್ ಮಾಡಿ ತನ್ನ ಎಚ್ ಡಿಎಫ್ ಸಿ ಬ್ಯಾಂಕಿನಿಂದ ಜೂನ್ 26ರಿಂದ ಜುಲೈ 31ರ ನಡುವೆ ಹಂತ ಹಂತವಾಗಿ ಒಟ್ಟು 1,65,92,293 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದರು.
ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅದು ತಿಳಿಯುತ್ತಿದ್ದನಂತೆ ಮಹಿಳೆಗೆ ಮೋಸದ ಅರಿವಾಗಿದ್ದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿ ಹೇಳಿದಂತೆ ಬೇರೆ ಬೇರೆ ಖಾತೆಗಳಿಗೆ IMPS ಮತ್ತು RTGS ಮೂಲಕ ಮಹಿಳೆ ಹಣ ವರ್ಗಾವಣೆ ಮಾಡಿದ್ದರು. ಈ ಹಣ ಹೂಡಿಕೆ ರೂಪದಲ್ಲಿ ಫಿಡೆಲಿಟಿ ಏಪ್ ನಲ್ಲಿ ತೋರಿಸುತ್ತಿತ್ತು. ಆದರೆ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯುವ ಅವಕಾಶ ಇರಲಿಲ್ಲ. ಈ ರೀತಿ ಹಲವಾರು ಸಾರ್ವಜನಿಕರನ್ನು ವಂಚಕರು ನೇರವಾಗಿ ಸಂಪರ್ಕಿಸಿ ಮೋಸದ ಜಾಲಕ್ಕೆ ಸಿಲುಕಿಸುತ್ತಾರೆ. ಅತಿ ಹೆಚ್ಚು ಲಾಭ ಕೊಡಿಸುವ ಭರವಸೆಯನ್ನೂ ಕೊಡುತ್ತಾರೆ. ಮೋಸದ ಅರಿವಿರದೆ ಹಣ ಹೂಡಿಕೆ ಮಾಡಿದವರನ್ನು ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಾರೆ. ಇದೇ ಕಾರಣಕ್ಕೆ ಏಪ್ ನಲ್ಲಿ ಹೂಡಿಕೆ ಮಾಡಿದ ಮೊತ್ತ ಹೆಚ್ಚು ಅಪ್ ಆದ ರೀತಿ ಕಾಣಿಸುತ್ತಾರೆ. ಆಮೂಲಕ ಹಣ ಇದ್ದವರನ್ನು ಮತ್ತಷ್ಟು ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ. ಇದೊಂದು ಸೈಬರ್ ವಂಚಕರ ಜಾಲವಾಗಿದ್ದು ತಂಡವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಭಾರತದ ಮೂಲೆಯಲ್ಲಿ ಕುಳಿತು ಈ ಕೃತ್ಯ ಎಸಗುತ್ತಿದ್ದು ಇವರನ್ನು ಪತ್ತೆ ಮಾಡಲು ಪೊಲೀಸರೂ ಸರ್ವ ಪ್ರಯತ್ನ ಹಾಕದೇ ಇರುವುದು ಮತ್ತಷ್ಟು ವಂಚನೆಗೆ ದಾರಿಯಾಗಿಸಿದೆ.
Mangalore Share market fraud, women looses 1.65 crore money. Fidelity Pearl of South Asia company share market Fraud exposed. A case has been registered at cyber crime police station.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
17-06-25 01:48 pm
Mangalore Correspondent
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm