ಬ್ರೇಕಿಂಗ್ ನ್ಯೂಸ್
18-06-24 12:19 pm Udupi Correspondent ಕ್ರೈಂ
ಉಡುಪಿ, ಜೂನ್.18: ಉಡುಪಿಯಲ್ಲಿ ಮತ್ತೊಮ್ಮೆ ತಲವಾರು ಸದ್ದು ಮೊಳಗಿದೆ. ಪುಂಡರು ತಲವಾರು ಹಿಡಿದು ಯುವಕನೊಬ್ಬನ ಕೊಲೆಗೆ ಯತ್ನಿಸಿದ್ದು ಬಳಿಕ ಆತನ ಬಂದಿದ್ದ ಬೈಕನ್ನು ಪುಡಿಗಟ್ಟಿದ್ದಾರೆ.
ಜೂನ್ 15 ರಂದು ರಾತ್ರಿ ಘಟನೆ ನಡೆದಿದ್ದು ಪುಂಡಾಟ ಮೆರೆದಿದ್ದವರೇ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾರೆ. ವಿಡಿಯೋ ಹೊರ ಬರುತ್ತಲೇ ರೌಡಿಗಳ ವೃತ್ತಾಂತ ಹೊರಬಿದ್ದಿದೆ. ಸೆಲೂನ್ ಒಂದರ ನೌಕರ ಚರಣ್ ಎಂಬಾತ, ಶಬರಿ ಎಂಬ ಯುವಕನಿಗೆ ಬೈದಿದ್ದ. ಇದನ್ನು ಪ್ರಶ್ನಿಸಿದ್ದ ಶಬರಿಯ ಸ್ನೇಹಿತ ಪ್ರವೀಣ್ ಮತ್ತು ಆತನ ಗ್ಯಾಂಗ್ ಮಾತುಕತೆಗೆಂದು ಚರಣ್ ನನ್ನು ಉಡುಪಿ ನಗರದ ಬಿರಿಯಾನಿ ಪಾಯಿಂಟ್ ಬಳಿ ಕರೆಸಿಕೊಂಡಿತ್ತು.
ಚರಣ್ ತನ್ನ ಮೂವರು ಸ್ನೇಹಿತರ ಜೊತೆಗ ಆಗಮಿಸಿದ್ದರೆ, ಇತ್ತ ಪ್ರವೀಣ್ ಅಂಡ್ ಟೀಂ ತಲವಾರು ಹಿಡಿದೇ ಕಾಳಗಕ್ಕೆ ಬಂದಿದ್ದರು. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ. ಚರಣ್ ಸಿಗದಿದ್ದ ಕೋಪವನ್ನು ಪ್ರವೀಣ್ ಮತ್ತು ಸಹಚರರು ಬೈಕ್, ಸ್ಕೂಟರ್ ಮೇಲೆ ತೋರಿಸಿದ್ದಾರೆ. ತಲವಾರಿನಲ್ಲಿ ಹಾನಿಗೈದು ಬೈಕ್ ಪುಡಿ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಪುಂಡರ ಅಟ್ಟಹಾಸದ ವಿಡಿಯೋ ಓಡಿಹೋದವರಿಗೆ ತಿಳಿಯಬೇಕು ಎಂದು ವಾಟ್ಸಪ್ ಗ್ರೂಪುಗಳಿಗೆ ಷೇರ್ ಮಾಡಿದ್ದರು. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಮೂರು ಗ್ಯಾಂಗ್ ವಾರ್ ಘಟನೆ ನಡೆದಿದ್ದು ರೌಡಿ, ತಲವಾರು ಹೊಡೆದಾಟಕ್ಕೆ ಉಡುಪಿ ನಗರದ ಜನತೆ ಭಯಪಟ್ಟಿದ್ದಾರೆ. ಶಾಂತಿಯಲ್ಲಿದ್ದ ಉಡುಪಿಯಲ್ಲಿ ಸದ್ದಿಲ್ಲದೆ ಸಮಾಜ ವಿರೋಧಿ ಕೃತ್ಯಗಳು ಹೆಚ್ಚಿದ್ದು ಜನರನ್ನು
ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ಮೇ 18ರ ನಸುಕಿನಲ್ಲಿ ಕುಂಜಿಬೆಟ್ಟು ರಸ್ತೆಯಲ್ಲಿ ಟೀಂ ಗರುಡದ ಎರಡು ತಂಡಗಳು, ಗಾಂಜಾ ಅಮಲಿನಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕಾಳಗ ನಡೆಸಿದ್ದವು. ತಲವಾರು ಹಿಡಿದು, ಬಡಿದಾಡಿದ್ದ ವಿಡಿಯೋ ವೈರಲ್ ಆಗಿತ್ತು.
Another gang war case exposed in Udupi, talwar attack, bikes vandalised, video goes viral. After the video went viral police have nabbed the criminals. Gang had plot to murder a youth after which he escaped but their bikes were vandalised using swords
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 05:38 pm
Mangalore Correspondent
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am