ಬ್ರೇಕಿಂಗ್ ನ್ಯೂಸ್
11-06-24 04:54 pm HK News Desk ಕ್ರೈಂ
ಮೈಸೂರು, ಜೂ 11: ಇಲ್ಲಿನ ಸಿದ್ದಾರ್ಥ ನಗರದಲ್ಲಿರುವ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಗಳಾದ ಶಿವಾನಂದ ಸ್ವಾಮೀಜಿ (90) ಅವರ ಹತ್ಯೆಯಾಗಿದೆ. ಮಠದ ಆವರಣದಲ್ಲೇ ಸ್ವಾಮೀಜಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ವಾಮೀಜಿಯವರ ಆಪ್ತನಾಗಿದ್ದ ರವಿ ಎಂಬಾತನೇ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮೈಸೂರಿನ ನಜಾರಾಬಾದ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ನಡೆಸಿದ್ದಾರೆ.
ಆರೋಪಿ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಸ್ವಾಮೀಜಿಯವರನ್ನು ಮಠದ ಆವರಣದಲ್ಲೇ ಹತ್ಯೆ ಮಾಡಿದ್ದಾನೆನ್ನಲಾಗಿದೆ. ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲೇ ಸ್ವಾಮೀಜಿಯವರ ಶವ ಕಂಡುಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಮೋಲ್ನೋಟಕ್ಕೆ ಇದು ಆಸ್ತಿ ವಿಚಾರವಾಗಿ ಸ್ವಾಮೀಜಿ ಹಾಗೂ ರವಿ ನಡುವೆ ಇದ್ದ ಮನಸ್ತಾಪವೇ ಕೊಲೆಗೆ ಕಾರಣ ಎನ್ನಲಾಗಿದೆ.
ಕೊಲೆಯ ನಂತರ ರವಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮದ್ಯ ಸೇವಿಸಿ ಆನಂತರ ವಿಷ ಕುಡಿದಿದ್ದ, ಆತನನ್ನು ವಶಕ್ಕೆ ಪಡೆಯುವ ಹೊತ್ತಿಗೆ ಆಗಲೇ ನಿತ್ರಾಣನಾಗಿದ್ದ. ಹಾಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಮೈಸೂರಿನ ಅನ್ನದಾನೇಶ್ವರ ಮಠದ ಭಕ್ತರಾದ ಹನುಮಂತ ಪಾಟೀಲ ಹಾಗೂ ಅವರ ಪತ್ನಿ ಈ ಹಿಂದೆ ಒಮ್ಮೆ ಇದೇ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಬೆಳಗಾವಿಯಿಂದ ಮೈಸೂರಿಗೆ ಬಂದು ನೆಲೆಸಿದ್ದ ಈ ದಂಪತಿ 2011 ರಲ್ಲಿ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪಾಟೀಲ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ, ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡ್ತಿದ್ಲು . ಈ ದಂಪತಿ ಅನ್ನದಾನೇಶ್ವರ ಮಠದ ಶ್ರೀ ಮಹಾಶಿವಲಿಂಗ ಸ್ವಾಮೀಜಿ ಅವರ ಸೇವೆಯಲ್ಲಿ ತೊಡಗಿದ್ದ ವೇಳೆ ಮಠದ ಸ್ವಾಮೀಜಿಯು ದಂಪತಿಯಿಂದ ಒಂದೂವರೆ ಲಕ್ಷ ರೂ. ಹಣ ಪಡೆದಿದ್ರು.
ಇದಕ್ಕೆ ಬದಲಿಯಾಗಿ ಮಠದ ಆವರಣದಲ್ಲಿ ಜಾಗ ಕಲ್ಪಿಸುವ ಮಾತು ನೀಡಿ, ಅಲ್ಲಿ ನಿರ್ಮಾಣವಾಗುತ್ತಿದ್ದ ಕಾಂಪ್ಲೆಕ್ಸ್ ನ ಉಸ್ತುವಾರಿಯನ್ನು ಪಾಟೀಲ್ ಗೇ ನೀಡುವುದಾಗಿ ಸ್ವಾಮೀಜಿ ಮಾತು ಕೊಟ್ಟಿದ್ರು . ಆದರೆ ಇದ್ಯಾವುದು ನಡೆಯದೆ ಹೋದಾಗ, ಪಾಟೀಲ್ ದಂಪತಿ ಹಣ ನೀಡುವಂತೆ ಸ್ವಾಮೀಜಿಗೆ ಒತ್ತಾಯಿಸಿದ್ದಾರೆ . ಈ ರೀತಿ ಹಣ ಕೇಳಲು ಹೋದಾಗಲೇ ಪಾಟೀಲರ ಮಡದಿಯ ಕೈ ಹಿಡಿದು ಎಳೆದಾಡಿದ ಸ್ವಾಮೀಜಿ ಸೀರೆಗೂ ಕೈ ಹಾಕಿದ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿತ್ತು. ಬಹುಶಃ ಅದೇ ದ್ವೇಷವೇ ಕೊಲೆಗೆ ಕಾರಣವಾಗಿರಬಹುದೇ ಎಂದು ಪೊಲೀಸರು ಊಹಿಸಿದ್ದಾರೆ.
Sri Shivananda Swamiji (90) of Sri Annadaaneshwara Mutt, located adjacent to Teresian College on Male Mahadeshwara Road in Siddarthanagar in city, was found murdered in his room this morning. Reports indicate that the Swamiji was brutally hacked to death with a machete.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 05:38 pm
Mangalore Correspondent
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am