ಬ್ರೇಕಿಂಗ್ ನ್ಯೂಸ್
29-05-24 07:15 pm Mangalore Correspondent ಕ್ರೈಂ
ಮಂಗಳೂರು, ಮೇ 29: ಕೇರಳದ ಕಾಸರಗೋಡು ಮೂಲದ ವಿವಾಹಿತ ಮಹಿಳೆಯೊಬ್ಬರನ್ನು ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿದ ಬಗ್ಗೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಿಮ್ ಟ್ರೈನರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಾಸರಗೋಡು ಮೂಲದ 32 ವರ್ಷದ ಮಹಿಳೆ ಕದ್ರಿ ಠಾಣೆಗೆ ಮೇ 15ರಂದು ದೂರು ನೀಡಿದ್ದಾರೆ. ಮಹಿಳೆ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ದೇಹ ಧಡೂತಿಯಾಗಿದೆ ಎಂದು ಜಿಮ್ ಕಸರತ್ತು ಮಾಡಲು ತೆರಳುತ್ತಿದ್ದಳು. ಅಲ್ಲಿ ಜಿಮ್ ತರಬೇತುದಾರ ಸುಜಿತ್ ಎಂಬಾತನ ಜೊತೆಗೆ ಗೆಳೆತನ ಉಂಟಾಗಿತ್ತು. ಆನಂತರ, ಮಹಿಳೆ ಫಿಸ್ತುಲಾ ರೋಗ ಬಾಧೆಗೆ ಒಳಗಾಗಿದ್ದು ಮಾರ್ಚ್ 13ರಂದು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಗೆಳೆಯನಾಗಿದ್ದ ಸುಜಿತ್ ಬಂದಿದ್ದು, ಜೊತೆಗೆ ಉಳಿದುಕೊಂಡಿದ್ದ. ಈ ವೇಳೆ ತನ್ನ ಮೇಲೆ ಬೇಡ ಎಂದರೂ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆ ದೂರು ನೀಡಿದ್ದಾರೆ.
ಆನಂತರ, ತನ್ನ ನಗ್ನ ಫೋಟೋಗಳನ್ನು ತೆಗೆದಿಟ್ಟು ಬ್ಲಾಕ್ಮೇಲ್ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದು ಎಪ್ರಿಲ್ 4ರಿಂದ 8ರ ವರೆಗೆ ಮಹಾರಾಜಾ ರೆಸಿಡೆನ್ಸಿ ಹೊಟೇಲ್ ನಲ್ಲಿ ಇರಿಸಿ ಅತ್ಯಾಚಾರ ಮಾಡಿದ್ದಾನೆ. ಅಲ್ಲಿದ್ದಾಗಲೇ ಮಹಿಳೆಗೆ ಫುಡ್ ಪಾಯಿಸನ್ ಆಗಿದ್ದು ಎಪ್ರಿಲ್ 8ರಿಂದ 10ರ ವರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಯೂ ಆರೋಪಿ ಸುಜಿತ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದು ಪೊಲೀಸರು ಸೆಕ್ಷನ್ 376, 506 ಜೊತೆಗೆ 149 ಪ್ರಕಾರ ಕೇಸು ದಾಖಲಿಸಿದ್ದಾರೆ.
ಆರೋಪಿ ಹೊಸದುರ್ಗ ತಾಲೂಕು ಪುಲ್ಲೂರು ಗ್ರಾಮದ ಸುಜಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಮದುವೆಯಾಗುತ್ತೇನೆಂದು ನಂಬಿಸಿದ್ದಕ್ಕೆ ಇವರು ಗೆಳೆತನ ಹೊಂದಿದ್ದರು ಎನ್ನಲಾಗುತ್ತಿದ್ದು, ಆನಂತರ ಇವರ ನಡುವೆ ವೈಮನಸ್ಸು ಉಂಟಾಗಿ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ. ಕಾಸರಗೋಡಿನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದರೂ, ಅಲ್ಲಿ ದೂರು ಸ್ವೀಕರಿಸದೇ ಇದ್ದುದರಿಂದ ಮಂಗಳೂರಿನಲ್ಲಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
In a shocking incident, a Kasargod-based woman admitted initially into a hospital and subsequently into another hospital was raped several times. As per the police complaint filed by the victim dated May 15, 2024 with Mangaluru east police station, she was admitted into a hospital for treatment of fistula on March 13, 2024.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 09:29 pm
Mangalore Correspondent
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am