ಬ್ರೇಕಿಂಗ್ ನ್ಯೂಸ್
14-05-24 10:45 pm Bangalore Correspondent ಕ್ರೈಂ
ಬೆಂಗಳೂರು, ಮೇ.14: ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಹೆಸರಲ್ಲಿ ಹಣಕ್ಕಾಗಿ ಪೀಡಿಸಿ ಮೂವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ವಿಕೃತ ರೀತಿಯಲ್ಲಿ ಚಿತ್ರಹಿಂಸೆ ನೀಡಿದ ಘಟನೆ ಕಲಬುರ್ಗಿಯಲ್ಲಿ ನಡೆದಿದ್ದು ಚಿತ್ರಹಿಂಸೆಯ ವಿಡಿಯೋ ವೈರಲ್ ಆಗಿದೆ. ಕೃತ್ಯ ಎಸಗಿದ ಏಳು ಮಂದಿಯನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಸೇಡಂ ತಾಲ್ಲೂಕಿನ ದೇವನೂರಿನ ಅರ್ಜುನಪ್ಪ ಹಣಮಂತ, ಮೊಹಮದ್ ಸಮೀರುದ್ದೀನ್ ಮತ್ತು ಹೀರಾಪುರದ ಅಬ್ದುಲ್ ರೆಹಮಾನ್ ಪೀಡನೆಗೆ ಒಳಗಾದವರು. ಕೋಣೆಯಲ್ಲಿ ಕೂಡಿಹಾಕಿ, ಇವರ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಪೀಡಿಸುವ ಕೃತ್ಯ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು ಈ ವೇಳೆ ಪೊಲೀಸ್ ಪೇದೆಯೂ ಅಲ್ಲಿರುವುದು ಕಂಡುಬಂದಿದೆ.


ಅರ್ಜುನಪ್ಪ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದ. ಪರಿಚಯಸ್ಥ ರಮೇಶ ದೊಡ್ಡಮನಿ ಎಂಬಾತ ಕಾರು ಕೊಡಿಸುವಂತೆ ಅರ್ಜನಪ್ಪನಿಗೆ ಕೇಳಿದ್ದು ಅದರಂತೆ ₹ 6 ಲಕ್ಷದ ಕಾರು ಇದೆಯೆಂದು ಹೇಳಿ ಡೀಲ್ ಕುದುರಿಸಿದ್ದ. ಮೇ 4ರಂದು ಚಿತ್ತಾಪುರದಿಂದ ಕಾರಿನಲ್ಲಿ ಹೊರಟ ಅರ್ಜುನಪ್ಪ ಮತ್ತು ರಮೇಶ, ಕಾರು ಮಾಲೀಕ ಅಬ್ದುಲ್ ರೆಹಮಾನ್ ಹೇಳಿದ ಜಾಗಕ್ಕೆ ತೆರಳಿದ್ದರು. ಮೂವರನ್ನು ಬಳಿಕ ನಾಗನಹಳ್ಳಿ ಕ್ರಾಸ್ನಿಂದ ಹಾಗರಗಾ ರಸ್ತೆಯ ಮನೆಯೊಂದಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ. ಕಾರಿನಿಂದ ಎಳೆದೊಯ್ದು ಮನೆಯ ಕೋಣೆಯಲ್ಲಿ ಕೂಡಿ ಹಾಕಿ, 10ರಿಂದ 12 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ.
ನಾವು ಹೇಳಿದಂತೆ ಕೇಳದೆ ಇದ್ದರೆ, ಇಲ್ಲಿಂದ ಜೀವಸಹಿತ ಹೋಗುವುದಿಲ್ಲ. ಒಬ್ಬೊಬ್ಬರು ರೂ. 10 ಲಕ್ಷ ಕೊಡಬೇಕು ಎಂದು ಹೆದರಿಸಿ ಬ್ಯಾಟರಿಯಿಂದ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದಾರೆ. ಮತೀನ್ ಸೇರಿ ಇತರೆ 12 ಮಂದಿ ಬಡಿಗೆಗಳಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದು ಜತೆಗೆ ಸಿಗರೇಟ್ನಿಂದ ಸುಟ್ಟು ಗಾಯ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಮ್ರಾನ್ ಪಟೇಲ್ ಮೆಹಬೂಬ್ ಪಟೇಲ್, ಮಹ್ಮದ್ ಮತೀನ್ ಅಲಿಯಾಸ್ ಸ್ಟೀಲ್ ಮತೀನ್ ಅಬ್ದುಲ್ ಸಲೀಮ್, ಮಹ್ಮದ್ ಜಿಯಾ ಉಲ್ ಹುಸೇನ್ ಅಬ್ದುಲ್ ಫಜಲ್, ಮಹ್ಮದ್ ಅಬಜಲ್ ಶೇಕ್ ಅನ್ವರ್ ಶೇಖ್, ಹುಸೇನ್ ಶೇಖ್ ಮೌಲಾಶೇಖ್, ರಮೇಶ ಭೀಮಣ್ಣ ದೊಡ್ಡಮನಿ, ಸಾಗರ ಶ್ರೀಮಂತ ಕೋಳಿ ಎಂಬ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
7 arrested for torturing three men giving electric shock to private parts in Kalaburagi. Seven people were arrested here for torturing a second-hand car dealer and two others by giving electric shock to their private parts, police said on Saturday. Police arrested Imran Patel, Mohammed Mateen, Ramesh Doddamani, Sagar Koli and their accomplices.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm