ಬ್ರೇಕಿಂಗ್ ನ್ಯೂಸ್
07-05-24 09:48 pm Bangalore Correspondent ಕ್ರೈಂ
ಬೆಂಗಳೂರು, ಮೇ.7: ಖಾಸಗಿ ಕಂಪನಿಯಲ್ಲಿ ಡೈರೆಕ್ಟರ್ ಹುದ್ದೆಯಲ್ಲಿರುವ ಬೆಂಗಳೂರಿನ ಜಯನಗರ ನಿವಾಸಿ 52 ವರ್ಷದ ವ್ಯಕ್ತಿಯೊಬ್ಬರು ಷೇರು ಮಾರ್ಕೆಟಲ್ಲಿ ಹಣ ಹೂಡಿಕೆ ಮಾಡಿ, ಡಬಲ್ ಲಾಭ ಆಗುತ್ತೆ ಎಂಬ ವಂಚಕರ ಮಾತು ಕೇಳಿ ಬರೋಬ್ಬರಿ 5.2 ಕೋಟಿ ರೂಪಾಯಿ ಹಣವನ್ನು ಕಳಕೊಂಡಿದ್ದಾರೆ.
ಹಣ ಕಳಕೊಂಡ ವ್ಯಕ್ತಿ ಎಪ್ರಿಲ್ 8ರಂದು ಬೆಂಗಳೂರು ಸಿಇಎನ್ ಠಾಣೆಗೆ ದೂರು ನೀಡಿ, ತನಗಾದ ವಂಚನೆಯನ್ನು ಹೇಳಿಕೊಂಡಿದ್ದಾರೆ. ಮಾರ್ಚ್ 11ರಂದು ಇವರಿಗೆ ವಾಟ್ಸಪ್ ಮೆಸೇಜ್ ಒಂದು ಬಂದಿತ್ತು. ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ಇದ್ದ ಮೆಸೇಜ್ ನಲ್ಲಿ bys.app.com ಎನ್ನುವ ವೆಬ್ ಸೈಟ್ ಲಿಂಕ್ ಕೂಡ ಇತ್ತು. ಅದಕ್ಕೆ ಕ್ಲಿಕ್ ಮಾಡಿದ ಕೂಡಲೇ ಇವರ ನಂಬರ್ Y-5 Ever Core Financial Leader ಎಂಬ ಹೆಸರಿನಲ್ಲಿದ್ದ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿತ್ತು. ಅದರಲ್ಲಿ ಅಂದಾಜು 160 ಮಂದಿ ಸದಸ್ಯರಿದ್ದರು.
ಇದೇ ವೇಳೆ, ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ನೀವು ಅದರಲ್ಲಿ ಕೊಟ್ಟಿರುವ ಲಿಂಕ್ ಒತ್ತಿ ಸ್ಟಾಕ್ ಮಾರ್ಕೆಟ್ ಏಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದರು. ಏಪ್ ಡೌನ್ಲೋಡ್ ಮಾಡಿಕೊಂಡಿದ್ದ ವ್ಯಕ್ತಿ, ಬಳಿಕ ಅವರು ಹೇಳಿದಂತೆ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಕೆಲವೇ ವಾರಗಳಲ್ಲಿ 5.2 ಕೋಟಿಯಷ್ಟು ರೂಪಾಯಿ ಹಣವನ್ನು ತನ್ನ ವಿವಿಧ ಐದು ಬ್ಯಾಂಕ್ ಖಾತೆಗಳಿಂದ ಹೂಡಿಕೆ ಮಾಡಿದ್ದರು. ಮತ್ತಷ್ಟು ಹಣವನ್ನು ಅದರಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಮಾರ್ಕೆಟ್ ಅಪ್ ಆಗಿರುವುದನ್ನು ತಿಳಿದ ಈ ವ್ಯಕ್ತಿ ಎಪ್ರಿಲ್ 2ರಂದು ಒಂದಷ್ಟು ಹಣವನ್ನು ಮರಳಿ ಹಿಂಪಡೆಯಲು ಯತ್ನಿಸಿದ್ದು, ಆದರೆ ಹಣ ಹಿಂಪಡೆಯುವುದು ಸಾಧ್ಯವಾಗಲಿಲ್ಲ. ಬೇರೆಯವರಲ್ಲಿ ಈ ಬಗ್ಗೆ ಕೇಳಿದಾಗ, ಅದೇನೋ ಮೋಸದ ಆಟ ಎನ್ನುವ ವಿಚಾರ ಗೊತ್ತಾಗಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಮೋಸ ಹೋಗಿದ್ದೇನೆಂದು ತಿಳಿದು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಟ್ಯಂತರ ರೂಪಾಯಿ ಹಣ ಕಳಕೊಂಡಿದ್ದರಿಂದ ಇಡಿ ಮತ್ತು ಐಟಿ ಅಧಿಕಾರಿಗಳು ಇದರ ಬಗ್ಗೆ ತನಿಖೆಗೆ ಮುಂದಾಗುವ ಸಾಧ್ಯತೆಯಿದೆ. ಅಲ್ಲದೆ, ಮೋಸಗಾರರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಹಣವನ್ನು ಮುಟ್ಟುಗೋಲು ಹಾಕಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಸ್ಟಾಕ್ ಮಾರ್ಕೆಟ್ ಹೂಡಿಕೆ ಎಂಬ ಹೆಸರಲ್ಲಿ ವಾಟ್ಸಪ್ ನಲ್ಲಿ ಮೆಸೇಜ್ ಕಳುಹಿಸುವುದು, ಕರೆ ಮಾಡಿ ಒತ್ತಾಯ ಪಡಿಸುವ ಕೃತ್ಯಗಳು ಹೆಚ್ಚಿದ್ದು, ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬಲಿ ಬೀಳುತ್ತಿದ್ದಾರೆ.
In a recent case of cyber fraud, a 52-year-old Bengaluru businessman, identified as Sharath (name changed), residing in Jayanagar, Bengaluru fell victim to a scam involving the stock market, resulting in a loss of Rs 5.2 crore, according to a report.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm