ಬ್ರೇಕಿಂಗ್ ನ್ಯೂಸ್
18-04-24 10:03 pm Bangalore Correspondent ಕ್ರೈಂ
ಬೆಂಗಳೂರು, ಏ 18: ಹಾಡಹಗಲೇ ಬೆಂಗಳೂರಿನಲ್ಲಿ ರಕ್ತದೋಕುಳಿ ನಡೆದಿದೆ. ಜನನಿಬಡ ಪ್ರದೇಶದಲ್ಲಿ ಯುವಕ -ಯುವತಿಯ ಬರ್ಬರ ಹತ್ಯೆ ನಡೆದಿದೆ.
ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ ಯುವತಿಯನ್ನ ವಿವಾಹಿತ ವ್ಯಕ್ತಿ ಸುರೇಶ್ ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ವೇಳೆ ತನ್ನ ಕಣ್ಣೆದುರೆ ಮಗಳ ಮೇಲೆ ಹಲ್ಲೆ ತಡೆಯಲು ಬಂದ ಯುವತಿಯ ತಾಯಿ, ಸುರೇಶನ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಇದರಿಂದ ಆರೋಪಿ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್ ನಲ್ಲಿ ಈ ಜೋಡಿ ಕೊಲೆ ನಡೆದಿವೆ.
ಅನುಷಾ ಎಂಬ ಯುವತಿಯನ್ನ ಸುರೇಶ್ ಚಾಕುವಿನಿಂದ ಹಿರಿದು ಕೊಂದಿದ್ದಾನೆ. ಗೊರಗುಂಟೆಪಾಳ್ಯ ಮೂಲದ ಸುರೇಶ್ ಸಾರಕ್ಕಿಯ ಶಾಕಾಂಬರಿ ನಗರ ನಿವಾಸಿ ಅನುಷಾಳನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಸಂತ್ರಸ್ತೆ ತಾಯಿ ಕಲ್ಲಿನಿಂದ ಹೊಡೆದು ಸುರೇಶ್ ಹತ್ಯೆಗೈದಿದ್ದಾಳೆ.
ಸಂಬಂಧ ಮುರಿದುಕೊಳ್ಳಲು ಬಂದಿದ್ದಾಗ ಘಟನೆ ;
ಪೊಲೀಸರ ವರದಿಯ ಪ್ರಕಾರ, ಹಲವಾರು ವರ್ಷಗಳಿಂದ ಇಬ್ಬರಿಗೂ ಪರಿಚಯ ಇತ್ತು ಎಂದು ತಿಳಿದುಬಂದಿದೆ. ಸುರೇಶ್ಗೆ ಮದುವೆಯಾಗಿತ್ತು. ಆದರೂ ಅನುಷಾ ಜೊತೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಅನುಷಾಗೆ ಸಂಬಂಧ ಮುಂದುವರೆಸುವುದು ಇಷ್ಟ ಇರಲಿಲ್ಲ. ಇಂದು ಭೇಟಿಯಾಗಿ ಸಂಪರ್ಕ ಕಡಿತ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದರು. ಆದರೆ ಅನುಷಾ ಕೈ ತಪ್ಪಿ ಹೋಗ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್, ಕೋಪದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸುರೇಶ್ ಮತ್ತು ಅನುಷಾ ಐದು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡ್ತಿದ್ರು. ಸುರೇಶ ನನಗೆ ಮದುವೆಯಾಗಿಲ್ಲಾ ಎಂದು ಅನುಷಾಳನ್ನ ಪ್ರೀತಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ ಬಗ್ಗೆ ಅಸಲಿ ವಿಚಾರ ಗೊತ್ತಾಗಿದೆ. ಸುರೇಶ್ಗೆ ಮದುವೆಯಾಗಿ ಮಕ್ಕಳಿವೆ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆ, ಇವೆಂಟ್ ಮ್ಯಾನೇಜ್ಮೆಂಟ್ ಬಿಟ್ಟು ನರ್ಸಿಂಗ್ ಹೋಮ್ನಲ್ಲಿ ಕೆಲಸಕ್ಕೆ ಸೇರಿದ್ದ ಅನುಷಾ. ಇದಾಗಿಯೂ ಸುರೇಶ್ ಅನುಷಾಳನ್ನ ಬಿಡಲು ಒಪ್ಪಿರಲಿಲ್ಲಾ ಎಂದು ತಿಳಿದುಬಂದಿದೆ.
ಪ್ರೀತಿ ನಿರಾಕರಿಸಿದರೂ ಹಿಂದೆ ಬಿದ್ದು, ಪೀಡಿಸುತ್ತಿದ್ದಾನೆ ಎಂದು ಇಂದು ಬೆಳಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಅನುಷಾ ದೂರು ನೀಡಿದ್ದರು. ಸುರೇಶ್ ಎಂಬಾತ ತನಗೆ ಪರಿಚಯ ಇದ್ದು, ತನ್ನನ್ನ ಪೀಡಿಸುತಿದ್ದಾನೆ ಎಂದು ತಿಳಿಸಿದ್ದಳು. ಪೊಲೀಸರು, ಇಬ್ಬರನ್ನು ಕರೆದು ಸುರೇಶ್ಗೆ ವಾರ್ನ್ ಮಾಡಿದ್ದರು. ಇನ್ಮುಂದೆ ಯುವತಿ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಸುರೇಶ್ ನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು.
Double murder in Bangalore park, accused killed by daughter mother. Married man was behind a girl asking her to marry but when she denied for marriage he killed her after which her mother took a cement stone and killed the accused in the park.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm