ಬ್ರೇಕಿಂಗ್ ನ್ಯೂಸ್
07-12-23 05:56 pm HK News Desk ಕ್ರೈಂ
ಗಾಜಿಯಾಬಾದ್, ಡಿ.7: ಮದುವೆ ಸಮಾರಂಭದಲ್ಲಿ ವೈಟರ್ ಒಯ್ಯುತ್ತಿದ್ದ ಊಟದ ತಟ್ಟೆ ಅತಿಥಿಗಳಿಗೆ ತಾಗಿದ ಕಾರಣಕ್ಕೆ ಆತನನ್ನು ಯುವಕರು ಸೇರಿಕೊಂಡು ಹೊಡೆದು ಕೊಲೆಗೈದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 17ರಂದು ಘಟನೆ ನಡೆದಿದ್ದು, ಪಂಕಜ್(26) ಕೊಲೆಯಾದ ಯುವಕ. ಘಟನೆಯ ಬೆನ್ನತ್ತಿದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಗಾಜಿಯಾಬಾದ್ ನಗರದ ಸಿಜಿಎಸ್ ವಾಟಿಕಾ ಗೆಸ್ಟ್ ಹೌಸ್ ನಲ್ಲಿ ವೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪಂಕಜ್ ನ.17ರಂದು ಕೆಲಸಕ್ಕೆ ಹೋಗಿದ್ದು ಮರಳಿ ಬಂದಿರಲಿಲ್ಲ. ಈ ಬಗ್ಗೆ ಪಂಕಜ್ ತಾಯಿ ಪೊಲೀಸ್ ದೂರು ನೀಡಿದ್ದರು. ಗೆಸ್ಟ್ ಹೌಸ್ ನಲ್ಲಿ ವೇಟರ್ ಕೆಲಸ ಮಾಡಿಕೊಂಡಿದ್ದ ಬಗ್ಗೆ ಮತ್ತು ನ.17ರಂದು ಮದುವೆ ಸಮಾರಂಭ ಆಯೋಜಿಸಿದ್ದ ಬಗ್ಗೆ ಮಾಹಿತಿ ನೀಡಿದ್ದರು.
ಪೊಲೀಸರ ವಿಚಾರಣೆಯಲ್ಲಿ ಗೆಸ್ಟ್ ಹೌಸ್ ಕಂಟ್ರಾಕ್ಟರ್ ಮನೋಜ್ ಗುಪ್ತಾ ಸೇರಿದಂತೆ ನಾಲ್ವರು ಕೊಲೆಗೈದಿರುವುದು ತಿಳಿದುಬಂದಿದೆ. ಬಳಸಿದ ಊಟದ ತಟ್ಟೆಗಳನ್ನು ಒಯ್ಯುತ್ತಿದ್ದಾಗ ಅತಿಥಿಗಳ ಮೈಗೆ ಮುಟ್ಟಿದ ವಿಚಾರದಲ್ಲಿ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಆನಂತರ, ವೇಟರ್ ಪಂಕಜ್ ತಲೆಯ ಭಾಗಕ್ಕೆ ಹೊಡೆದಿದ್ದರು. ನೆಲಕ್ಕೆ ಕುಸಿದು ಬಿದ್ದಿದ್ದ ಪಂಕಜ್ ಮೃತಪಟ್ಟಿದ್ದಾನೆಂದು ತಿಳಿದು ಪಕ್ಕದ ಕಾಡಿನಲ್ಲಿ ದೇಹವನ್ನು ಎಸೆದು ಹೋಗಿದ್ದರು. ತನಿಖೆ ನಡೆಸಿದ ಪೊಲೀಸರು ಪಂಕಜ್ ಮೃತದೇಹ ಪತ್ತೆ ಮಾಡಿದ್ದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ತಲೆಗೆ ಆಳವಾದ ಗಾಯವಾಗಿದ್ದು ತಿಳಿದುಬಂದಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಮನೋಜ್ ಗುಪ್ತಾ, ಅಮಿತ್ ಕುಮಾರ್ ಸೇರಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ.
An argument over a tray carrying used plates touching the guests at a wedding led to the death of a 26-year-old waiter in Ghaziabad, the police said on Wednesday. The incident took place at the CGS Vatika guest house on Pusta Road in Ghaziabad on the evening of November 17, the police said.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm