ಬ್ರೇಕಿಂಗ್ ನ್ಯೂಸ್
27-05-22 08:59 pm Mangalore Correspondent ಕ್ರೈಂ
ಉಳ್ಳಾಲ, ಮೇ 27: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಉಚ್ಚಿಲ ಸಮೀಪ ನಸುಕಿನ ಜಾವ ನಡೆದಿರುವ ರೌಡಿಶೀಟರ್ ಅಜ್ಜಿನಡ್ಕ , ಮುಳ್ಳುಗುಡ್ಡೆ ನಿವಾಸಿ ಆರೀಫ್ (37) ಕೊಲೆಯತ್ನ ಪ್ರಕರಣದ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮೇಲಂಗಡಿ ನಿವಾಸಿ ಅಬ್ದುಲ್ ಕರೀಂ(46), ಪೈಝಲ್ನಗರ ನಿವಾಸಿಗಳಾದ ಪುಚ್ಚ ನಿಶಾಕ್(25), ಮೊಹಮ್ಮದ್ ಅಶ್ಪಾಕ್(26), ಕಾಟಿಪಳ್ಳ ನಿವಾಸಿ ಉಮ್ಮರ್ ಫಾರೂಕ್(25), ಮಾರ್ನಮಿಕಟ್ಟೆ ನಿವಾಸಿ ರಿಫಾತ್ (27) ಬಂಧಿತ ಆರೋಪಿಗಳು. ರೌಡಿಶೀಟರ್ ಆರೀಫ್ ಮತ್ತು ಅಬ್ದುಲ್ ಕರೀಂ ಜತೆಯಾಗಿ ವ್ಯವಹಾರ ಮಾಡುತ್ತಿದ್ದು, ಕರೀಂ ಎಂಬಾತ ಆರೀಫ್ ನಿಂದ ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ.


ಕೆಲವು ದಿನಗಳ ಹಿಂದೆ ಆರೀಫ್ ಸಾಲ ನೀಡಿದ ಹಣ ವಾಪಸ್ ನೀಡುವಂತೆ ಕರೀಂನಲ್ಲಿ ಕೇಳಿದ್ದ. ಈ ವಿಚಾರವನ್ನು ಕರೀಂ ನೌಫಾಲ್ ಬಳಿ ತಿಳಿಸಿದ್ದ ಎನ್ನಲಾಗಿದೆ. ನೌಫಾಲ್ ಆರೀಫ್ಗೆ ಕರೆ ಮಾಡಿ ಎಲ್ಲಾ ಹಣ ವಾಪಸ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ. ಇದೇ ವಿಚಾರದಲ್ಲಿ ಅವರ ಮಧ್ಯೆ ಸಂಘರ್ಷ ನಡೆದಿದ್ದು, ನೌಫಾಲ್ ತನ್ನ ಸ್ನೇಹಿತರಾದ ನಿಶಾಕ್, ಅಶ್ಪಾಕ್, ಫಾರೂಕ್ ಮತ್ತು ರಿಫಾತ್ ಗೆ ಕೊಲೆ ಮಾಡಲು ಸುಫಾರಿ ನೀಡಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಮಂಗಳವಾರ ನಸುಕಿನ ಜಾವ ಆರೋಪಿಗಳು ಆರೀಫ್ ನನ್ನು ಉಚ್ಚಿಲ ಬಳಿ ತಡೆದು ನಿಲ್ಲಿಸಿ ಮಚ್ಚಿನಿಂದ ದಾಳಿ ನಡೆಸಿ ಕೊಲೆಯತ್ನ ನಡೆಸಿದ್ದರು. ಗಂಭೀರ ಗಾಯಗೊಂಡ ಆರೀಫ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ನೌಫಾಲ್ , ತಲ್ಹತ್ ಬಂಧನಕ್ಕೆ ಶೋಧ ಮುಂದುವರಿದಿದೆ.
ಉಳ್ಳಾಲ ; ಹಳೇ ದ್ವೇಷ ತೀರಿಸಲು ರೌಡಿಗೆ ಇರಿದು ಕೊಲೆಯತ್ನ, ನಾಲ್ವರು ದುಷ್ಕರ್ಮಿಗಳಿಂದ ಕುಕೃತ್ಯ
Rowdy stabbed at Ullal, five arrested by Ullal police in Mangalore. Arif was stabbed by miscreants over old revenge near Uchila. The search for another accused is on.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm