ಬ್ರೇಕಿಂಗ್ ನ್ಯೂಸ್
04-09-21 12:05 pm Source: News 18 Kannada ಕ್ರೀಡೆ
ನವದೆಹಲಿ : ಟೋಕಿಯೋ ಪ್ಯಾರಾಲಂಪಿಕ್ನಲ್ಲಿ (Tokyo Paralympics) ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಲೇಖರಾ (Avani Lekhara ) ಹೊಸ ದಾಖಲೆ ಬರೆದಿದ್ದಾರೆ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 (Air Rifle Standing SH1) ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿ ಕೂಡ ಹೊಂದಿದ್ದಾರೆ. ಅವರ ಈ ಸಾಧನೆಗೆ ಮೆಚ್ಚಿ ದೇಶಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಪ್ಯಾರಾಲಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿರುವ ಅವನಿಗೆ ಉದ್ಯಮಿ ಆನಂದ್ ಮಹೀಂದ್ರ (Anand Mahindra ) ವಿಶೇಷ ಉಡುಗೊರೆಯನ್ನು ಘೋಷಿಸಿದ್ದಾರೆ. ಮಹೀಂದ್ರ ಗ್ರೂಪ್ನ ಅಧ್ಯಕ್ಷರಾಗಿರುವ ಆನಂದ್ ಮಹಿಂದ್ರ, ಅವರಿಗಾಗಿ ವಿಶೇಷ ಎಸ್ಯುವಿ ವಾಹನವನ್ನು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಅವನಿ ಲೆಖಾರಾ ಅವರಿಗಾಗಿ ಮೊದಲ ಕಸ್ಟಮೈಸಡ್ ಎಸ್ಯುವಿ (SUV) ವಾಹನ ನೀಡುವುದಾಗಿ ತಿಳಿಸಿದ್ದಾರೆ. ಈ ರೀತಿಯು ವಾಹನವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್ ಕಮಿಟಿಯ ಅಧ್ಯಕ್ಷೆ ದೀಪಾ ಮಲಿಕ್ ನೀಡಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.
ಈ ವಿಶೇಷ ಕಾರನ್ನು ವಿಶೇಷ ಚೇತನರು ಕೂಡ ಸುಲಭವಾಗಿ, ಆರಾಮದಾಯಕವಾಗಿ ಚಾಲನೆ ಮಾಡಬಹದು. ಇದೇ ಉದ್ದೇಶದಿಂದ ಈ ವಿಶೇಷ ಎಸ್ಯುವಿ ವಾಹನ ನಿರ್ಮಾಣ ಮಾಡಲಾಗಿದೆ ಎಂದರು
ಕಳೆದೊಂದು ವಾರದ ಹಿಂದೆ ದೀಪಾ ಮಲಿಕ್ ಟೋಕಿಯೋದಲ್ಲಿ ತಾವು ಬಳಸಿದಂತೆ ವಿಶೇಷ ಚೇತನರಿಗಾಗಿ ಎಸ್ಯುವಿ ಕಾರನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು. ಈ ಕುರಿತು ತಮ್ಮ ಅಭಿವೃದ್ಧಿ ಮುಖ್ಯಸ್ಥ ವೇಲು ಅವರಿಗೆ ನಾನು ತಿಳಿಸಿದೆ. ವೇಲು ನಿರ್ಮಾಣ ಮಾಡುತ್ತಿರುವ ಈ ವಿಶೇಷ ಕಾರನ್ನು ಅವನಿ ಲೆಖಾರಾ ಅವರಿಗೆ ಮೊದಲು ಉಡುಗೊರೆಯಾಗಿ ನೀಡಲು ನಾನು ಬಯಸುತ್ತೇನೆ ಎಂದಿದ್ದಾರೆ.
ಮಹೀಂದ್ರಾ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಕ್ರೀಡಾಪಟುಗಳಿಗೆ ಇಂತಹ ಮೆಚ್ಚುಗೆ ಕಾರ್ಯಗಳು ಅತ್ಯಗತ್ಯ ಎಂದಿದ್ದಾರೆ. ಇದೊಂದು ಅಭೂತ ಪೂರ್ವ ನಿರ್ಣಯ ಎಂದು ಕೆಲವರು ಶ್ಲಾಘಿಸಿದ್ದಾರೆ.
ಮಹೀಂದ್ರಾ ಅವರು ಕ್ರೀಡಾಪಟುಗಳಿಗೆ ತಮ್ಮ ಕಂಪನಿಯ ಕಾರನ್ನು ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಟೋಕಿಯೋ ಒಲಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ವಿಜೇತ ನೀರಜ್ ಚೋಪ್ರಾ ಅವರಿಗೆ ಕೂಡ ತಮ್ಮ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿರುವ SUV, XUV 700 aನ್ನು ಉಡುಗೊರೆಯಾಗಿ ಅವರು ನೀಡಲಿದ್ದಾರೆ.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm