ಬ್ರೇಕಿಂಗ್ ನ್ಯೂಸ್
01-03-26 09:52 am HK News Staffer ದೇಶ - ವಿದೇಶ
ಟೆಹ್ರಾನ್, ಮಾ.1: ಅಮೆರಿಕ- ಇಸ್ರೇಲ್ ಏರ್ ಸ್ಟ್ರೈಕ್ ನಲ್ಲಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ಅವರು ಹತ್ಯೆಗೀಡಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಹತ್ಯೆ ಮಾಡಿದ್ದಾಗಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಯತೊಲ್ಲಾ ಖಮೇನಿ ಜೊತೆಗೆ ಅವರ ಪುತ್ರಿ, ಮೊಮ್ಮಗು, ಅಳಿಯ, ಸೊಸೆಯೂ ಹತ್ಯೆಗೀಡಾಗಿದ್ದಾರೆ. ಖಮೇನಿ ಅವರು ಆಡಳಿತವನ್ನು ಪ್ರಧಾನಿಗೆ ಒಪ್ಪಿಸಿ ಒಂದು ವಾರದಿಂದ ಅಡಗು ತಾಣಕ್ಕೆ ತೆರಳಿದ್ದರು. ಆದರೆ ಇಸ್ರೇಲಿನ ಗುಪ್ತಚರ ಪಡೆ ಮೊಸಾದ್, ಖಮೇನಿ ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಗುರಿಯಿಟ್ಟು ಬಾಂಬ್ ಹಾಕಿ ಇಡೀ ಕುಟುಂಬವನ್ನು ಹತ್ಯೆ ಮಾಡಿದೆ. ಖಮೇನಿ ಶನಿವಾರ ಬೆಳಗ್ಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮ ಐಆರ್ ಎನ್ ನ್ಯೂಸ್ ವರದಿ ಮಾಡಿದೆ.
ಖಮೇನಿ ಗೌರವಾರ್ಥ ಇರಾನ್ ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೆ, ಏಳು ದಿನಗಳ ರಾಷ್ಟ್ರ ವ್ಯಾಪಿ ಸರ್ಕಾರಿ ರಜಾ ದಿನ ಘೋಷಣೆ ಮಾಡಲಾಗಿದೆ. ಖಮೇನಿ ಹತ್ಯೆಯ ಬಗ್ಗೆ ವಿಶ್ವಸಂಸ್ಥೆ ಯಾವುದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿಲ್ಲ. 86 ವರ್ಷದ ಖಮೇನಿ ಇರಾನ್ ದೇಶವನ್ನು 1989ರಿಂದ ಆಡಳಿತದಲ್ಲಿದ್ದರು. ರೆವೊಲ್ಯುಶನರಿ ಗಾರ್ಡ್ ಎನ್ನುವ ಪ್ರಭಾವಿ ಪಡೆಯನ್ನು ಕಟ್ಟಿದ್ದರು. ಅಮೆರಿಕದ ಬೆದರಿಕೆ ನಡುವೆಯೂ ಅಣು ಬಾಂಬ್ ತಯಾರಿಸುತ್ತಿದ್ದಾರೆ ಎನ್ನುವುದು ಖಮೇನಿ ಮೇಲಿನ ಆರೋಪವಾಗಿತ್ತು. ಅಣು ಶಸ್ತ್ರ ಹೊಂದಬಾರದು ಎಂಬ ನಿರಂತರ ಬೆದರಿಕೆ ಬಳಿಕ ಇಸ್ರೇಲ್- ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದು ಹತ್ಯೆ ಮಾಡಿದೆ.
ತನ್ನ ಮೇಲಿನ ದಾಳಿಗೆದುರಾಗಿ ಇರಾನ್ ಪಡೆಗಳು ಅಮೆರಿಕದ ಮಿಲಿಟರಿ ಬೇಸ್ ಇರುವ ಯುಎಇ, ಕತಾರ್, ಬೆಹ್ರೈನ್ ಮೇಲೆ ದಾಳಿ ನಡೆಸಿತ್ತು.

ಜಾಗತಿಕ ಭಯೋತ್ಪಾದನೆಯ ಸೂತ್ರಧಾರನ ಸಾವು :
ಜಾಗತಿಕ ಭಯೋತ್ಪಾದನೆಯ ಅತಿದೊಡ್ಡ ಪ್ರತಿಪಾದಕ, ಸೂತ್ರಧಾರ ಕಡೆಗೂ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಹೇಳಿಕೆ ಬಿಡುಗಡೆ ಮಾಡಿದೆ. ಎಕ್ಸ್ ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕಡೆಯಿಂದ ಹೇಳಿಕೆ ನೀಡಲಾಗಿದ್ದು ದಶಕಗಳ ಕಾಲದಿಂದ ನಡೆಸುತ್ತಿದ್ದ ಭಯೋತ್ಪಾದನಾ ಯುಗದ ಅಂತ್ಯವಾಗಿದೆ. ಅಲಿ ಖಮೇನಿ ಹತ್ಯೆಯಿಂದ ಜಗತ್ತು ಸುರಕ್ಷತೆಯತ್ತ ಮರಳಿದೆ ಎಂದು ಹೇಳಿದೆ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm