ಬ್ರೇಕಿಂಗ್ ನ್ಯೂಸ್
07-08-21 05:46 pm Headline Karnataka News Network ಕ್ರೀಡೆ
ನವದೆಹಲಿ, ಆಗಸ್ಟ್ 7: ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಇಂದು ಮರೆಯಲಾರದ ದಿನ. ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಒಲಿಂಪಿಕ್ ಅತ್ಲೀಟ್ ವಿಭಾಗದಲ್ಲಿ ಚಿನ್ನದ ಬೇಟೆಯಾಡಿ ಇತಿಹಾಸ ಸೃಷ್ಟಿಸಿದ್ದಾನೆ. ಜಾವ್ಲಿನ್ ಥ್ರೋ ವಿಭಾಗದಲ್ಲಿ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ಚರಿತ್ರೆ ಸೃಷ್ಟಿಸಿದ್ದು, ವಿಶ್ವದ ಗಮನ ಗೆದ್ದಿದ್ದಾರೆ.
ಭಾರತದ ಯಾವುದೇ ಅತ್ಲೀಟ್ ಒಲಿಂಪಿಕ್ ನಲ್ಲಿ ಈವರೆಗೆ ಪದಕ ಪಡೆದಿದ್ದೇ ಇಲ್ಲ. ಆಫ್ರಿಕನ್ ಮೂಲದವರು ಅಥವಾ ಜರ್ಮನಿ, ಚೀನಾ ಮೂಲದವರು ಮಾತ್ರ ಅತ್ಲೀಟ್ ನಲ್ಲಿ ಪ್ರಾಬಲ್ಯ ಪಡೆದಿದ್ದರು. ಅಂಥದ್ದರಲ್ಲಿ ಭಾರತದ ನೀರಜ್ ಚೋಪ್ರಾ ಜಾವ್ಲಿನ್ ಥ್ರೋ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಚೋಪ್ರಾ ಮೊದಲ ಅರ್ಹತಾ ಸುತ್ತಿನಲ್ಲೇ 86.59 ಮೀಟರ್ ದೂರಕ್ಕೆ ಜಾವ್ಲಿನ್ ಎಸೆದು ಗಮನ ಸೆಳೆದಿದ್ದರು. ಅರ್ಹತಾ ಸುತ್ತಿನಲ್ಲಿ ಅತ್ಯಂತ ಹೆಚ್ಚು ದೂರಕ್ಕೆ ಎಸೆದಿದ್ದು ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಎರಡನೇ ಸುತ್ತಿನಲ್ಲಿ 87.58 ಮೀಟರ್ ದೂರಕ್ಕೆ ಎಸೆದು ಪದಕ ಗೆಲ್ಲುವತ್ತ ಮತ್ತಷ್ಟು ಹತ್ತಿರವಾಗಿದ್ದರು. ಕೊನೆಗೆ, ಇದೇ 87.58 ಮೀಟರ್ ಉದ್ದಕ್ಕೆ ಎಸೆದ ಸಾಧನೆಯನ್ನು ಅತಿ ಗರಿಷ್ಠವೆಂದು ಪರಿಗಣಿಸಿ ಚಿನ್ನದ ಪದಕದ ಘೋಷಣೆ ಮಾಡಲಾಗಿದೆ.
ಜೆಕ್ ರಿಪಬ್ಲಿಕ್ ದೇಶದ ವೆಡ್ಲೆಜ್ ಜೇಕಬ್ 86.67 ಮೀಟರ್ ಸಾಧನೆಯ ಮೂಲಕ ಎರಡನೇ ಸ್ಥಾನಿಯಾದರು. ಅದೇ ದೇಶದ ವೆಸ್ಲೀ ಎಂಬಾತ 85.44 ಮೀಟರ್ ದೂರದ ಸಾಧನೆಯ ಮೂಲಕ ತೃತೀಯ ಸ್ಥಾನಿಯಾಗಿದ್ದಾರೆ. ಭಾರತದ ಪಾಲಿಗೆ ಎರಡನೇ ವೈಯಕ್ತಿಕ ಸ್ವರ್ಣದ ಸಾಧನೆಯಿದು. ಈ ಹಿಂದೆ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಸಾಧನೆ ಮಾಡಿದ್ದರು.
History has been scripted at Tokyo! What @Neeraj_chopra1 has achieved today will be remembered forever. The young Neeraj has done exceptionally well. He played with remarkable passion and showed unparalleled grit. Congratulations to him for winning the Gold. #Tokyo2020 https://t.co/2NcGgJvfMS
— Narendra Modi (@narendramodi) August 7, 2021
Javelin thrower Neeraj Chopra won a historic athletics gold medal to become India's second ever individual Olympic gold medallist after shooter Abhinav Bindra. Wrestler Bajrang Punia
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm