ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ; ಇಬ್ಬರು ಸಜೀವ ದಹನ, ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು ! 

21-03-22 04:00 pm       Udupi Correspondent   ಕರಾವಳಿ

ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಿಡಿದು ಮೂರು ಮಂದಿ ಸಾವಿಗೀಡಾದ ಘಟನೆ ಕಾಪು ಸಮೀಪದ ಮಲ್ಲಾರು ಎಂಬಲ್ಲಿ ನಡೆದಿದೆ. ಇಬ್ಬರು ಯುವಕರು ಸ್ಥಳದಲ್ಲೇ ಬೆಂಕಿ ಹತ್ತಿಕೊಂಡು ಸಜೀವ ದಹನವಾಗಿದ್ದಾರೆ. 

ಉಡುಪಿ, ಮಾ.21 : ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಿಡಿದು ಮೂರು ಮಂದಿ ಸಾವಿಗೀಡಾದ ಘಟನೆ ಕಾಪು ಸಮೀಪದ ಮಲ್ಲಾರು ಎಂಬಲ್ಲಿ ನಡೆದಿದೆ. ಇಬ್ಬರು ಯುವಕರು ಸ್ಥಳದಲ್ಲೇ ಬೆಂಕಿ ಹತ್ತಿಕೊಂಡು ಸಜೀವ ದಹನವಾಗಿದ್ದಾರೆ. 

ಮಲ್ಲಾರ್ ಪಕೀರನಕಟ್ಟೆ ಮಸೀದಿ ಬಳಿ ಘಟನೆ ನಡೆದಿದ್ದು ಒಮ್ಮಿಂದೊಮ್ಮೆಲೇ ಗ್ಯಾಸ್ ಸಿಲಿಂಡರ್ ಸಿಡಿದು ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಫ್ರಿಜ್, ಇನ್ನಿತರ ಉಪಕರಣಗಳಿಗೆ ಹೊತ್ತಿಕೊಂಡಿದೆ. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದವರು ಆಹುತಿಯಾಗಿದ್ದಾರೆ. 

ರಜಾಕ್ ಮತ್ತು ರಜಬ್ ಸ್ಥಳದಲ್ಲೇ ಸಾವು ಕಂಡಿದ್ದರೆ, ನಿಯಾಜ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಇತರ ಮೂವರು ಯುವಕರು ತೀವ್ರ ಗಾಯಗೊಂಡಿದ್ದಾರೆ. ಬೆಂಕಿ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ್ದು ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಸೇರಿ ನಂದಿಸಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಮೂವರು ಪಾಲುದಾರಿಕೆಯಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದರು. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಉಡುಪಿ ಅಗ್ನಿಶಾಮಕ ದಳ ಮತ್ತು ಐಎಸ್ ಪಿಆರ್ ಎಲ್ ಘಟಕದ ಅಗ್ನಿಶಾಮಕ ದಳ ಸಿಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

In an incident that occurred on Monday March 21 at Farkinakatte of the town, three people died when a LPG cylinder exploded at a scrap shop.