ಬ್ರೇಕಿಂಗ್ ನ್ಯೂಸ್
18-08-20 12:47 pm Mangalore Reporter ಕರಾವಳಿ
ಪುತ್ತೂರು, ಆಗಸ್ಟ್ 18: ಕುಡಿತದ ಅಮಲಿನಲ್ಲಿ ಮಗನೇ ತಂದೆಯನ್ನು ಕಡಿದು ಕೊಲೆಗೈದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕುಡಿತದ ಅಮಲು ತಲೆಗೇರಿ ತಂದೆ ಹಾಗೂ ಮಗ ಹೊಡೆದಾಡಿದ್ದು, ಈ ಸಂದರ್ಭ ಮಗ ತನ್ನ ಕೈಗೆ ಸಿಕ್ಕಿದ ಕತ್ತಿಯಿಂದ ತಂದೆಯ ಮೇಲೆ ಕಡಿದಿದ್ದು, ತಂದೆ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. 68 ವರ್ಷದ ಗಂಗಾಧರ ನಾಯ್ಕ ಕೊಲೆಯಾದವರಾಗಿದ್ದು ಪುತ್ರ ಶಶಿಧರ್ ನಾಯ್ಕ್ ಹತ್ಯೆಗೈದ ಆರೋಪಿಯಾಗಿದ್ದಾನೆ.
ಅತ್ಯಂತ ಸ್ಥಿತಿವಂತ ಕುಟುಂಬವಾಗಿರುವ ಶಶಿಧರ್ ನಾಯ್ಕ್ ಹಾಗೂ ಆತನ ತಂದೆ ಗಂಗಾಧರ್ ನಾಯ್ಕ್ ತಿಂಗಳಾಡಿಯ ಬಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಕುಟುಂಬಕ್ಕೆ ಪುತ್ತೂರು ನಗರದ ಕೃಷ್ಣನಗರ ಎಂಬಲ್ಲಿಯೂ ಒಂದು ಮನೆಯಿದೆ. ಸ್ಥಿತಿವಂತ ಕುಟುಂಬದ ಮಗನಾದ ಶಶಿಧರ್ ನಾಯ್ಕ್ ಗೆ ಕುಡಿತದ ಜೊತೆಗೆ ಗಾಂಜಾದ ಚಟ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ನಿನ್ನೆ ಎಂದಿನಂತೆ ಕುಡಿದು ಮನೆಗೆ ಬಂದಿದ್ದ ಶಶಿಧರ್ ಕ್ಷುಲ್ಲಕ ವಿಚಾರಕ್ಕೆ ತಂದೆಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ತಂದೆ ಹಾಗೂ ಮಗನ ನಡುವೆ ತಳ್ಳಾಟ ನಡೆದಿದೆ. ರೊಚ್ಚಿಗೆದ್ದ ಶಶಿಧರ್ ನಾಯ್ಕ್ ಮನೆಯಲ್ಲೇ ಇದ್ದ ಕತ್ತಿಯಿಂದ ತಂದೆ ಗಂಗಾಧರ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಗಂಗಾಧರ್ ನಾಯ್ಕ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm