ಬ್ರೇಕಿಂಗ್ ನ್ಯೂಸ್
09-01-21 03:01 pm Mangalore Correspondent ಕರಾವಳಿ
ಮಂಗಳೂರು, ಜ.9: ಕರಾವಳಿಯಲ್ಲಿ ದೈವಗಳ ಕಾರಣಿಕ ನಂಬದವರಿಲ್ಲ. ಕಷ್ಟಕಾಲದಲ್ಲಿ ಕೈಮುಗಿದು ಬೇಡಿಕೊಂಡರೆ ಕೈಹಿಡಿಯುತ್ತವೆ ಅನ್ನೋ ಅಚಲ ನಂಬಿಕೆ ಜನರದ್ದು. ಈ ನಂಬಿಕೆಗೆ ಪೊಲೀಸರು, ಆಡಳಿತ ವರ್ಗವೂ ಹೊರತಾಗಿಲ್ಲ. ಆದರೆ, ಇಲ್ಲೊಂದು ಕಡೆ ಸ್ವತಃ ಪೊಲೀಸ್ ಇಲಾಖೆಯವರೇ ಸೇರಿಕೊಂಡು ಪ್ರತಿ ವರ್ಷ ಕೋಲ ಒಪ್ಪಿಸುವುದನ್ನು ವಾಡಿಕೆಯಾಗಿ ನಡೆಸಿಕೊಂಡು ಬಂದಿದ್ದಾರೆ.

ಹೌದು.. ಕಾರ್ಕಳ ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರೇ ಸೇರಿಕೊಂಡು ಗುಳಿಗ ದೈವಕ್ಕೆ ಹರಕೆ ಕೋಲ ಒಪ್ಪಿಸುತ್ತಾರೆ. ಕುಕ್ಕಂದೂರಿನ ಪೊಲೀಸ್ ವಸತಿ ಗೃಹದ ಬಳಿಯ ಹುಡ್ಕೋ ಕಾಲನಿಯಲ್ಲಿ ಇರುವ ಗುಳಿಗ ದೈವಕ್ಕೆ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಈ ರೀತಿ ಕೋಲದ ಹರಕೆ ಒಪ್ಪಿಸುವುದು ವಾಡಿಕೆಯಾಗಿ ಬಂದಿದೆ. ಕಳೆದ ಬಾರಿ ಲಾಕ್ಡೌನ್ ಇದ್ದುದರಿಂದ ಎಪ್ರಿಲ್, ಮೇ ತಿಂಗಳಲ್ಲಿ ವರ್ಷಾವಧಿ ಕೋಲ ಸೇವೆಗಳು ನಡೆದಿರಲಿಲ್ಲ. ಪೊಲೀಸರ ಕೋಲ ಸೇವೆ ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ನಡೆಯುವುದಿತ್ತು. ಕಳೆದ ಬಾರಿ ಉಳಿಕೆಯಾಗಿದ್ದ ಹರಕೆ ಸೇವೆಯನ್ನು ಇಂದು ರಾತ್ರಿ (ಜ.9, ಶನಿವಾರ) ಪೊಲೀಸರು ಒಪ್ಪಿಸುತ್ತಿದ್ದಾರೆ.

ಹುಡ್ಕೋ ಕಾಲನಿಯಲ್ಲಿರುವ ಗುಳಿಗ ದೈವದ ಕಟ್ಟೆ ಮತ್ತು ಅದರ ಭಂಡಾರ ಜೈನ ಮನೆತನದ ಉಸ್ತುವಾರಿಯಲ್ಲಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಮನೆಯವರ ಲೆಕ್ಕದಲ್ಲಿ ಕೋಲ ಒಪ್ಪಿಸಿ, ಬಳಿಕ ಸರದಿಯಂತೆ ಮೇ ತಿಂಗಳ ವರೆಗೂ ಕೋಲ ಸೇವೆ ನಡೆಯುತ್ತದೆ. ಈ ಬಾರಿಯೂ ವಾರ್ಷಿಕ ಸೇವೆ ನಡೆದು ಹರಕೆ ಕೋಲಗಳು ಆರಂಭಗೊಂಡಿವೆ. ಕಾರ್ಕಳ ಪೊಲೀಸ್ ಠಾಣೆ, ತಾಲೂಕು ಆಡಳಿತ, ರೆವಿನ್ಯೂ ಇಲಾಖೆ ಹೀಗೆ ಸರಕಾರಿ ವ್ಯವಸ್ಥೆಯಿಂದಲೇ ಗುಳಿಗನಿಗೆ ಹಲವಾರು ಹರಕೆ ಕೋಲ ಸಮರ್ಪಣೆಯಾಗುವುದು ಅಲ್ಲಿನ ವಿಶೇಷ.

ಹರಕೆ ಸೇವೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಎಲ್ಲ ಸಿಬಂದಿ ಮತ್ತು ಅವರ ಕುಟುಂಬಸ್ಥರು ಪಾಲ್ಗೊಳ್ಳುತ್ತಾರೆ. ಮಾಹಿತಿ ಪ್ರಕಾರ, ಕಳೆದ 40 ವರ್ಷಗಳಿಂದಲೂ ಈ ರೀತಿ ಪೊಲೀಸರು ಗುಳಿಗನಿಗೆ ಪ್ರತಿವರ್ಷ ಕೋಲ ಸೇವೆ ಅರ್ಪಿಸುತ್ತಿದ್ದಾರೆ. ಇದರ ಖರ್ಚನ್ನು ಪೊಲೀಸ್ ಸಿಬಂದಿಯೇ ಸೇರಿಕೊಂಡು ಭರಿಸುತ್ತಾರೆ. ಹರಕೆ ಸೇವೆಯ ಜೊತೆಗೆ ಸೇರಿದ ಸಾರ್ವಜನಿಕರು ಮತ್ತು ಪೊಲೀಸ್ ಸಿಬಂದಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಊಟ, ಹರಕೆ ಸೇವೆಗಳಿಗೆ ಸುಮಾರು 50 ಸಾವಿರಕ್ಕಿಂತ ಹೆಚ್ಚು ಖರ್ಚು ಬರುತ್ತಿದ್ದು ಪ್ರತಿ ವರ್ಷ ನಿಷ್ಠೆಯಿಂದ ನಡೆಸಿಕೊಂಡು ಬಂದಿದ್ದಾರೆ.

ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರಲ್ಲಿ ಕೇಳಿದರೆ, ಅಲ್ಲಿನ ಗುಳಿಗನಿಗೆ ಭಾರೀ ಕಾರಣಿಕ ಇದೆ. ಮೊದಲಿನಿಂದಲೂ ಪ್ರತಿವರ್ಷ ಈ ಸೇವೆ ನಡೆಸುತ್ತಾ ಬರಲಾಗಿದೆ. ನಮ್ಮ ಲೆಕ್ಕದಲ್ಲಿ ಕೋಲದ ಹರಕೆ ನೀಡುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹಿಂದೆಲ್ಲಾ ಏನಾದ್ರೂ ತಪ್ಪಿಸಿಕೊಂಡು ಹೋದರೆ, ಶಸ್ತ್ರಾಸ್ತ್ರಗಳು ಕಾಣೆಯಾದರೆ ಗುಳಿಗನಿಗೆ ಹರಕೆ ಹೇಳಿದರೆ, ಕೋಲದ ಸಂದರ್ಭ ಕೇಳಿಕೊಂಡಿದ್ದ ವೇಳೆ ಅದು ಪತ್ತೆಯಾದ ಉದಾಹರಣೆಗಳಿವೆ. ಇದರಿಂದ ಹರಕೆ ಕೋಲ ನೀಡುವ ಸಂಪ್ರದಾಯ ಬೆಳೆದು ಬಂದದ್ದಿರಬೇಕು ಎಂದು ಹೇಳುತ್ತಾರೆ.
Karkala Police personals offer kola in the aspect of vow
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm