ಬ್ರೇಕಿಂಗ್ ನ್ಯೂಸ್
06-01-21 08:27 pm Mangaluru Correspondent ಕರಾವಳಿ
ಮಂಗಳೂರು, ಜ.6: ನಗರದ ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ರೈಲು ಬಂದಿರಲಿಲ್ಲ. ಬದಲಿಗೆ, ರೈಲಿನ ಮಾದರಿಯಲ್ಲೇ ಮತ್ತೊಂದು ರಸ್ತೆ ದಾಟುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ, ರಸ್ತೆಯನ್ನು ಒಂದು ಕ್ಷಣ ಬಂದ್ ಮಾಡಿದರು.
ರಾತ್ರಿಯಾಗಿದ್ದರಿಂದ ರೈಲು ಬರದೆ ದಿಢೀರ್ ರಸ್ತೆ ಬಂದ್ ಮಾಡಿದ್ದು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು. ಸಂಜೆಯ ಧಾವಂತದಲ್ಲಿ ಕೆಲವರು ಹಾರ್ನ್ ಮೊಳಗಿಸಿದರು. ಕೆಲವರು ಏನೆಂದು ಮುಂದೆ ಬಂದು ಅಚ್ಚರಿಯಿಂದ ನೋಡುತ್ತಾ ನಿಂತರು. ನಿಂತವರು ಮಾತ್ರ ಅಚ್ಚರಿಗೊಂಡು ಅಲ್ಲಿಂದ ಕದಲಲಿಲ್ಲ !

ಹೌದು.. ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಹೊಸ ಅತಿಥಿ ಬಂದಿತ್ತು. ನಗರದ ಜನರಿಗೆ ಅಪರೂಪದ ಅತಿಥಿ. ಬೃಹತ್ ಗಾತ್ರದ ಹೆಬ್ಬಾವು ರೈಲ್ವೇ ಗೇಟ್ ಮುಂಭಾಗದಲ್ಲೇ ರಸ್ತೆಯನ್ನು ದಾಟಿತ್ತು. ವಾಹನಗಳ ಭರಾಟೆಯ ಮಧ್ಯೆ ಹೆಬ್ಬಾವು ನಿಶ್ಚಿಂತೆಯಿಂದ ರಸ್ತೆ ದಾಟಿತ್ತು. ಇದನ್ನು ಗಮನಿಸಿದ ಕೆಲವರು ರಸ್ತೆ ತೆರವು ಮಾಡಿಕೊಟ್ಟು ಹಾವು ವಾಹನದ ಅಡಿಗೆ ಬೀಳದಂತೆ ನೋಡಿಕೊಂಡರು.
ಹೆಬ್ಬಾವು ನಿಧಾನಕ್ಕೆ ಗಜಗಾಂಭೀರ್ಯದಲ್ಲಿ ರಸ್ತೆ ದಾಟಿ, ಇನ್ನೊಂದು ಬದಿಗೆ ಸರಿಯಿತು. ಜನ ನೋಡುತ್ತಲೇ ಇದ್ದರು. ಹಿಂದೆ ಇದ್ದ ವಾಹನ ಸವಾರರಿಗೆ ವಿಚಾರ ಗೊತ್ತಾಗುವಾಗ ಹಾವು ಕತ್ತಲಲ್ಲಿ ಮರೆಯಾಗಿತ್ತು.
A Huge python snake was found crossing road near Pandeshwar Railway Track blocking road in Mangalore.
09-05-26 10:41 pm
HK News Desk
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
09-05-26 12:06 pm
HK News Staffer
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
ಒಬ್ಬನಿಗಾಗಿ ಒಂದೂವರೆ ಗಂಟೆ ಕಾದು ನಿಂತ ವಿಮಾನ; ಇತರ...
08-05-26 12:06 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am