ಬ್ರೇಕಿಂಗ್ ನ್ಯೂಸ್
04-01-21 09:05 pm Mangaluru Correspondant ಕರಾವಳಿ
Photo credits : RPTS
ಮಂಗಳೂರು, ಜ.4: ಪಡೀಲ್ ಬಳಿಯ ಫೈಸಲ್ ನಗರದಲ್ಲಿ ಏಕ್ಟಿವಾ ವಾಹನದಲ್ಲಿ ಸಾಗುತ್ತಿದ್ದ ಸವಾರರಿಬ್ಬರು ರಸ್ತೆ ಬದಿಯ ಬಾವಿಗೆ ಬಿದ್ದು ದುರಂತ ಸಂಭವಿಸಿದೆ.
ಸಂಜೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಫೈಸಲ್ ನಗರದ ಏರು ಹಾದಿಯ ರಸ್ತೆಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯಿದ್ದ ಬಾವಿಗೆ ಉರುಳಿ ಬಿದ್ದಿದೆ. ಕಾಂಕ್ರೀಟ್ ರಸ್ತೆಯಾಗಿದ್ದು ರಸ್ತೆ ಬದಿಗೆ ಇಳಿಯುವಷ್ಟರಲ್ಲಿ ಸ್ಕಿಡ್ ಆಗಿ ಏಕ್ಟಿವಾ ಉರುಳಿ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕ್ಟಿವಾ ವಾಹನ ರಸ್ತೆ ಬದಿಯಲ್ಲಿ ಉಳಿದುಕೊಂಡಿದ್ದರೆ, ಅದರಲ್ಲಿದ್ದ ಇಬ್ಬರು ಸವಾರರು ಬಾವಿಗೆ ಉರುಳಿ ಬಿದ್ದಿದ್ದಾರೆ.
ಘಟನೆ ನಡೆದಿರುವ ಪ್ರದೇಶದಲ್ಲಿ ಕತ್ತಲು ಕವಿದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಬೀದಿ ದೀಪ ಇಲ್ಲದ ರಸ್ತೆ ಅದಾಗಿದ್ದು ಇತ್ತೀಚೆಗಷ್ಟೇ ಕಾಂಕ್ರೀಟ್ ಆಗಿತ್ತು. ರಸ್ತೆ ಬದಿಯಲ್ಲೇ ಬಾವಿ ಇದ್ದು ಅದಕ್ಕೆ ಆವರಣ ಗೋಡೆ ಇರಲಿಲ್ಲ. ರಸ್ತೆ ಬದಿ ಅಪಾಯಕಾರಿ ಜಾಗ ಆಗಿದ್ದರೂ ತಡೆಗೋಡೆ ಮಾಡಿರಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಅದೇ ದಾರಿಯಲ್ಲಿ ಬಂದವರು ಯಾರೋ ಏಕ್ಟಿವಾ ಗಮನಿಸಿ, ಬಾವಿಗೆ ಇಣುಕಿದಾಗ ನೀರಿನಲ್ಲಿ ಯುವಕರು ಇರುವುದು ಪತ್ತೆಯಾಗಿದೆ. ಆನಂತರ ಸ್ಥಳೀಯರು ಸೇರಿ ಒಬ್ಬನನ್ನು ರಕ್ಷಣೆ ಮಾಡಿದ್ದು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಒಯ್ದಿದ್ದಾರೆ. ಇನ್ನೊಬ್ಬನ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಂಟು ಗಂಟೆ ಸುಮಾರಿಗೆ ಅಗ್ನಿಶಾಮಕ ದಳ ಆಗಮಿಸಿದೆ. ಅದಕ್ಕೂ ಮುನ್ನ ಲೈಟ್ ಇಲ್ಲದೆ ಸ್ಥಳೀಯರು ಮೊಬೈಲ್ ಬೆಳಕಿನಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ನೀರಿಗೆ ಬಿದ್ದವರ ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ಪೊಲೀಸರು ಮತ್ತು ನೂರಾರು ಮಂದಿ ಸೇರಿದ್ದಾರೆ.
Breaking Update: ಆ್ಯಕ್ಟಿವಾ ನಿಯಂತ್ರಣ ತಪ್ಪಿ ಪಲ್ಟಿ ; ಸವಾರ ಬಾವಿಗೆ ಬಿದ್ದು ಸಾವು !
Two Wheeler Active fell into well after rider lost control and got slipped in FaizalNagar, Padil, Mangalore. The Fire brigade personals rushed to the spot and have rescued two persons.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 11:28 am
HK News Staffer
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm