ಬ್ರೇಕಿಂಗ್ ನ್ಯೂಸ್
22-11-25 03:49 pm Mangaluru Correspondent ಕರಾವಳಿ
ಮಂಗಳೂರು, ನ.22 : ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಡ್ರೀಮ್ ಡೀಲ್ ಲಕ್ಕಿ ಸ್ಕೀಮ್ ಪ್ರಚಾರಕ್ಕಾಗಿ ಹಾಕಿರುವ ಜಾಹೀರಾತುಗಳನ್ನು ಕೂಡಲೇ ತೆರವು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಆದೇಶ ಮಾಡಿದ್ದಾರೆ.
ಲಕ್ಕಿ ಸ್ಕೀಮ್ ನಡೆಸುವುದು ಕಾನೂನು ರೀತ್ಯ ಅಪರಾಧವಾಗಿದ್ದರಿಂದ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಜಾಹೀರಾತು ಕೊಟ್ಟಿರುವುದನ್ನು ಪ್ರಶ್ನಿಸಿ ‘ಹೆಡ್ ಲೈನ್ ಕರ್ನಾಟಕ’ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚತ್ತುಕೊಂಡ ಕೆಎಸ್ಸಾರ್ಟಿಸಿ ಅಧಿಕಾರಿಗಳು ಬಸ್ಸುಗಳಲ್ಲಿ ಹಾಕಿರುವ ಜಾಹೀರಾತನ್ನು ತೆರವು ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ಜೊತೆಗೆ ಅಭಿಪ್ರಾಯ ಹಂಚಿಕೊಂಡಿರುವ ರಾಜೇಶ್ ಶೆಟ್ಟಿ, ಸರ್ಕಾರಿ ಬಸ್ ಗಳಲ್ಲಿ ಈ ರೀತಿಯ ಜಾಹೀರಾತು ಹಾಕಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಜಾಹೀರಾತು ಹಾಕುವುದಕ್ಕೆ ಸಾಯಿ ಏಡ್ ಏಜನ್ಸಿ ಇದೆ. ಮೂರು ವರ್ಷಕ್ಕೆ ಬೆಂಗಳೂರಿನಿಂದಲೇ ಗುತ್ತಿಗೆ ಪಡೆದುಕೊಂಡಿದ್ದು ಅವರೇ ಜಾಹೀರಾತುಗಳನ್ನು ನಿರ್ವಹಿಸುತ್ತಾರೆ. ಲಕ್ಕಿ ಸ್ಕೀಮ್ ಕಾನೂನು ರೀತ್ಯ ಅಪರಾಧವಾಗಿದ್ದರಿಂದ ಡ್ರೀಮ್ ಡೀಲ್ ಜಾಹೀರಾತು ಹಾಕಿರುವುದಕ್ಕೆ ಏಜನ್ಸಿಗೆ ನೋಟೀಸು ನೀಡುತ್ತೇವೆ ಎಂದಿದ್ದಾರೆ.

ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ಮಾಹಿತಿ ಪ್ರಕಾರ, ಮಂಗಳೂರಿನಿಂದ ಸಂಚರಿಸುವ ಐದು ಬಸ್ ಗಳಲ್ಲಿ ಈ ರೀತಿ ಜಾಹೀರಾತು ಹಾಕಲಾಗಿತ್ತು. ಅದನ್ನು ಕೂಡಲೇ ತೆರವು ಮಾಡಲಾಗುತ್ತಿದೆ. ಜಾಹೀರಾತು ಹಾಕುವ ಸಂದರ್ಭದಲ್ಲಿ ಲಕ್ಕಿ ಸ್ಕೀಮ್ ಎನ್ನುವುದು ತಿಳಿದಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಮತ್ತು ಪುತ್ತೂರು ಠಾಣೆಗಳಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿರುವ ನಾಲ್ಕು ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಲ್ಕು ದಿನಗಳ ಹಿಂದೆ ಬಿಎಂಆರ್ ಗ್ರೂಪ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ಸುರತ್ಕಲ್ ಬಳಿಯ ಕೃಷ್ಣಾಪುರದ ಕಚೇರಿಗೆ ಗ್ರಾಹಕರು ನುಗ್ಗಿ ದಾಂಧಲೆಗೈದಿದ್ದು ನಡೆದಿತ್ತು.
ಡ್ರೀಮ್ ಡೀಲ್ ಕಂಪನಿಯವರು ತಮ್ಮದು ಕಾನೂನು ರೀತ್ಯ ನಡೆಯುತ್ತಿದೆ ಎಂದು ಹೇಳಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಯಾವುದೇ ಹಣಕಾಸು ವಹಿವಾಟು ನಡೆಸುವುದಕ್ಕೂ ಆಯಾ ಕಾನೂನು ವ್ಯಾಪ್ತಿಯಲ್ಲಿ ಸರ್ಕಾರದಿಂದ ಲೈಸನ್ಸ್ ಪಡೆದಿರಬೇಕು. ಸೊಸೈಟಿಗಳಾದರೆ ಸೊಸೈಟಿ ಆಕ್ಟ್ ನಡಿ ರಿಜಿಸ್ಟರ್ ಆಗಿರಬೇಕು. ಚಿಟ್ ಫಂಡ್ ಗಳಾದರೆ ರಾಜ್ಯ ಹಣಕಾಸು ಸಚಿವಾಲಯದಡಿ ಚಿಟ್ ಫಂಡ್ ಕಾಯ್ದೆಯಡಿ ರಿಜಿಸ್ಟರ್ ಮಾಡಿಕೊಂಡಿರಬೇಕು. ತಿಂಗಳ ಕಂತಿನಲ್ಲಿ ಹಣ ಪಡೆದು ಲಕ್ಕಿ ಡ್ರಾ ನಡೆಸುವುದು, ಅದರ ನೆಪದಲ್ಲಿ ಹಣ ಸಂಗ್ರಹಿಸುವುದು ಸಂಪೂರ್ಣ ಕಾನೂನು ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ಪೊಲೀಸರು ಸ್ವಂಯಪ್ರೇರಿತ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ.
ಚಿಟ್ ಫಂಡ್, ಸೊಸೈಟಿಗಳಲ್ಲಿ ತಿಂಗಳ ಕಂತಿನಲ್ಲಿ ಹಣ ಸಂಗ್ರಹಣೆ ಮಾಡಬಹುದು. ಇದರ ನೆಪದಲ್ಲಿ ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ ಲಕ್ಕಿ ಡ್ರಾ ನೆಪದಲ್ಲಿ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಅವಕಾಶ ಇಲ್ಲ. ಲಕ್ಕಿ ಸ್ಕೀಮ್ ಹೆಸರಿನಲ್ಲಿ ಮಂಗಳೂರು, ಪುತ್ತೂರಿನಲ್ಲಿ 25ಕ್ಕೂ ಹೆಚ್ಚು ನಕಲಿ ಕಂಪನಿಗಳ ಹೆಸರಿನಲ್ಲಿ ರಾಜಾರೋಷ ಎನ್ನುವಂತೆ ಅಕ್ರಮವಾಗಿ ಹಣಕಾಸು ವಹಿವಾಟು ನಡೆಯುತ್ತಿದೆ. ತಿಂಗಳಿಗೆ ಒಂದು ಸಾವಿರ ಕಟ್ಟಿದರೆ 50 ಲಕ್ಷ ಬೆಲೆಯ ಐಷಾರಾಮಿ ಕಾರು, ಮಂಗಳೂರಿನಲ್ಲಿ ಫ್ಲಾಟ್ ಬಹುಮಾನ ಇದೆಯೆಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಅದನ್ನು ನಡೆಸುತ್ತಿದ್ದವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಪೈವಳಿಕೆ ಭಾಗದಲ್ಲಿ ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸದ ಹೊರತು ಕಡಿವಾಣ ಬೀಳುವ ಸಾಧ್ಯತೆ ಇಲ್ಲ.
In Mangaluru, KSRTC has ordered the immediate removal of advertisements promoting the Dream Deal lucky scheme from its buses after it was revealed that such schemes are legally prohibited. South Kannada KSRTC Divisional Controller Rajesh Shetty directed officials to take down the ads, stating that the corporation was unaware of the agency’s decision to display them.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am