ಬ್ರೇಕಿಂಗ್ ನ್ಯೂಸ್
11-09-25 11:34 am Mangalore Correspondent ಕರಾವಳಿ
ಮಂಗಳೂರು, ಸೆ.11 : ಭಾರತದಲ್ಲಿ ಸೋಶಿಯಲ್ ಮೀಡಿಯಾಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಯುವಜನರ ಮೇಲೆ ದೊಡ್ಡ ಮಟ್ಟದಲ್ಲಿ ಅಪಾಯ ಉಂಟು ಮಾಡುತ್ತಿದೆ. ಅದರಲ್ಲೂ ಸಣ್ಣ ವಯಸ್ಸಿನ ಮಕ್ಕಳಲ್ಲಿ ಗೀಳಿನಂತೆ ಕಾಡುತ್ತಿದ್ದು, ಇದರ ಬಗ್ಗೆ ಪೋಷಕರೇ ಜಾಗೃತಿ ವಹಿಸಬೇಕಾಗಿದೆ ಎಂದು ಕಳೆದ ಹಲವು ವರ್ಷಗಳಿಂದ ಜಾಲತಾಣ ಇನ್ನಿತರ ಸೋಶಿಯಲ್ ಮೀಡಿಯಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ, ವೃತ್ತಿಯಲ್ಲಿ ಬ್ಯಾಡ್ಮಿಂಟನ್ ಕೋಚ್ ಆಗಿರುವ ಗಣೇಶ್ ಕುಡ್ವ ಹೇಳಿದರು.
ಅಶೋಕನಗರದ ಎಸ್ ಡಿಎಂ ಸಿಬಿಎಸ್ಇ ಪ್ರೌಢಶಾಲೆಯಲ್ಲಿ ‘ಹೆಡ್ ಲೈನ್ ಕರ್ನಾಟಕ’ ಡಿಜಿಟಲ್ ಮೀಡಿಯಾ ಸಹಯೋಗದಲ್ಲಿ ಪೋಷಕರು ಮತ್ತು ಶಿಕ್ಷಕರಿಗಾಗಿ ನಡೆದ ಡಿಜಿಟಲ್ ಅಪಾಯಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.










13 ವರ್ಷದವರನ್ನು ಇನ್ಸ್ ಟಾ ಗ್ರಾಮ್, ಫೇಸ್ಬುಕ್ ನಲ್ಲಿ ಲೀಗಲ್ ಆಗಿ ಸೋಶಿಯಲ್ ಮೀಡಿಯಾಗೆ ಸೇರಿಸಿಕೊಳ್ಲಲು ಅವಕಾಶ ಇದೆ. ಆದರೆ ಇನ್ಸ್ ಟಾ ಗ್ರಾಮ್ ನಲ್ಲಿ ಕೆಟ್ಟದ್ದನ್ನು ಸೆನ್ಸಾರ್ ಮಾಡುವ ವ್ಯವಸ್ಥೆ ಇರುವುದಿಲ್ಲ. ವಿದೇಶದಲ್ಲಿ ಕುಳಿತ ಅಪರಿಚಿತರು ಯುವಜನರನ್ನು, ಅದರಲ್ಲು ಹರೆಯದ ಮಕ್ಕಳನ್ನು ಮೆಸೆಂಜರ್ ಬಳಸಿ ಯಾಮಾರಿಸುವುದು, ಕಿರುಕುಳ ನೀಡುವುದು, ಅದರಿಂದ ವಂಚನೆಗೆ ಒಳಪಡಿಸುವುದನ್ನು ಮಾಡುತ್ತಿದ್ದಾರೆ. ಮೆಸೇಜ್ ಬಾಕ್ಸ್ ನಲ್ಲಿ ವಿಡಿಯೋ ಕಾಲ್, ನ್ಯೂಡ್ ಕಾಲ್ ಇತ್ಯಾದಿ ಇರುತ್ತದೆ. ಇದಲ್ಲದೆ, ಇಮೋಜಿಗಳನ್ನು ಬಳಸಿ ಸೆಕ್ಸ್ ಚಾಟ್ ಮಾಡುವುದಕ್ಕೆ ಅವಕಾಶ ಇದೆ. ಇಮೋಜಿ ಬಳಸಿ ಮಕ್ಕಳು ಸೆಕ್ಸ್ ಟಿ ಅನ್ನುವ ಪರಿಕಲ್ಪನೆಯಲ್ಲಿ ಮೆಸೇಜ್ಗಳನ್ನು ಮಾಡುತ್ತಿದ್ದಾರೆ.
ಪೊಲೀಸರ ಕಣ್ತಪ್ಪಿಸಲು ಸಿಂಥೆಟಿಕ್ ಡ್ರಗ್ ಪೂರೈಕೆಗೂ ಇನ್ಸ್ ಟಾದಲ್ಲಿ ಇಮೋಜಿಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಬಗ್ಗೆ ಪೋಷಕರು ತಮ್ಮ ಮಕ್ಕಳ ಮೊಬೈಲನ್ನು ಪರಿಶೀಲಿಸಬೇಕು. ಯಾವುದನ್ನು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ತಿಳಿಯಬೇಕು ಎಂದು ಗಣೇಶ್ ಕುಡ್ವಾ ಸಲಹೆ ನೀಡಿದರು. 13 ವರ್ಷ ಬದಲು ಸೋಶಿಯಲ್ ಮೀಡಿಯಾ ಬಳಕೆಗೆ ಗ್ರಾಹಕರ ವಯಸ್ಸನ್ನು 18 ಅಥವಾ 20 ವರ್ಷಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳಾಗುತ್ತಿದ್ದು, ಇದರ ಬಗ್ಗೆ ನೀತಿ ಜಾರಿಯಾದಲ್ಲಿ ಉತ್ತಮ ಎಂದು ಗಣೇಶ್ ಕುಡ್ವಾ ಅಭಿಪ್ರಾಯ ಪಟ್ಟರು. ಪೋಷಕರು, ಶಿಕ್ಷಕರು ಸೋಶಿಯಲ್ ಮೀಡಿಯಾ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಎಸ್ಡಿಎಂ ಪ್ರೌಢಶಾಲೆಯ ಕರೆಸ್ಪಾಂಡೆಂಟ್ ಶ್ರುತಾ ಹೆಗ್ಡೆ, ಪ್ರಿನ್ಸಿಪಾಲ್ ಜಾಯ್ ಜೀವನ್ ರೈ ಮತ್ತು ಹೆಡ್ ಲೈನ್ ಕರ್ನಾಟಕ ಸಂಸ್ಥೆಯ ರೋಹಿತ್ ಕರ್ಕಡ ಉಪಸ್ಥಿತರಿದ್ದರು.
Unregulated use of social media in India is posing serious risks to children and adolescents, experts warned at an awareness program organized at SDM CBSE High School, Ashoknagar, in association with Headline Karnataka digital media. The program was attended by SDM School Correspondent Shrutha Hegde, Principal Joy Jeevan Rai, and Headline Karnataka representative Rohith Karkada.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm