ಬ್ರೇಕಿಂಗ್ ನ್ಯೂಸ್
09-09-25 05:59 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.9 : ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇಂದು ಬೆಳ್ತಂಗಡಿ ಕಚೇರಿಯಲ್ಲಿ ಕೇರಳದ ಯೂಟ್ಯೂಬರ್ ಮುನಾಫ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ನೋಟಿಸ್ ಜಾರಿಗೊಳಿಸಿದ್ದಕ್ಕೆ ಮುನಾಫ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ವಿಚಾರಣೆಗೆ ಒಳಗಾಗಿದ್ದಾರೆ.
ವಿಚಾರಣೆ ಮುಗಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಮುನಾಫ್, ನೀವು ಹೇಳಿದ ರೀತಿಯಲ್ಲಿ ಎಸ್ಐಟಿ ತನಿಖೆ ನಡೆಯೋದಿಲ್ಲ. ಸುಜಾತಾ ಭಟ್, ಅನನ್ಯಾ ಬಗ್ಗೆ ತನಿಖೆ ಇರೋದಲ್ಲ. ದೂರುದಾರ 164 ಹೇಳಿಕೆಯಡಿ ನೀಡಿರುವ ಮಾಹಿತಿ ಆಧರಿಸಿ ಎಸ್ಐಟಿ ರಚನೆಯಾಗಿದ್ದು, ಅದರಲ್ಲಿರುವ ಎಲ್ಲ ವಿಚಾರವನ್ನೂ ತನಿಖೆ ನಡೆಸುತ್ತಾರೆ. ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಅದಕ್ಕೆ ಉತ್ತರ ನೀಡಿದ್ದೇನೆ ಎಂದರು.
ನಾನು ಶಿರೂರಿನಲ್ಲಿ ಗುಡ್ಡ ಕುಸಿತದಿಂದ ನಮ್ಮ ಲಾರಿ ಮುಳುಗಡೆಯಾದಾಗ 72 ದಿನಗಳ ಕಾಲ ಹೋರಾಟ ನಡೆಸಿದ್ದೆ. ಅದಕ್ಕೆ ಮಲಯಾಳದ ಎಲ್ಲ ವಾಹಿನಿಗಳು ಬೆಂಬಲ ನೀಡಿದ್ದವು. ಕೊನೆಗೆ, ನಮ್ಮ ಲಾರಿಯೂ ಸಿಕ್ಕಿತ್ತು. ನಾವು ನಮ್ಮ ಕುಟುಂಬ ಸಾಗರದಲ್ಲಿದ್ದು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವನು. ಈಗ ಹತ್ತು ವರ್ಷಗಳಿಂದ ಕೇರಳದಲ್ಲಿ ಸೆಟ್ಲ್ ಆಗಿದ್ದೇನೆ.
ಸೌಜನ್ಯಾ ಪರ ಹೋರಾಟದಲ್ಲಿ ನಾನೂ ಇದ್ದೇನೆ, ಸಾಯೋ ವರೆಗೂ ಹೋರಾಟ ಮಾಡುತ್ತೇನೆ. ಅದರಲ್ಲಿ ಹಿಂಜರಿಕೆ ಇಲ್ಲ. ನಿಮ್ಮ ಕನ್ನಡದ ಟಿವಿಗಳು ನನ್ನನ್ನು ವಿಲನ್ ಮಾಡಿದವು. ಕೇರಳದಿಂದ ಪೊಲೀಸ್ ಭದ್ರತೆಯಲ್ಲಿ ಬರ್ತಾನೆ ಅಂತ ಸುದ್ದಿ ಮಾಡಿದ್ದವು. ಅಂಥ ಅನಿವಾರ್ಯತೆ ನನಗೆ ಬಂದಿಲ್ಲ. ಒಬ್ಬನೇ ಬಂದಿದ್ದೇನೆ, ವಿಚಾರಣೆ ಎದುರಿಸಿ ಹೋಗಿದ್ದೇನೆ. ಕೇರಳದ ಲಿಂಕ್ ಅಂತ ಸುದ್ದಿ ಮಾಡಿದ್ದನ್ನೂ ನೋಡಿದ್ದೇನೆ. ನಾನು ಎರಡು ತಿಂಗಳು ಮೊದಲು ಬಂದಿದ್ದು ಹೌದು. ಸುದ್ದಿ ಮಾಡಿದ್ದೂ ಹೌದು. ನನ್ನ ಪಾಲಿಗೆ ನಾವು ಮಾಡಿದ್ದು ಸುದ್ದಿ ಸತ್ಯ. ಅದು ಸುಳ್ಳು ಅಂತ ನೀವು ಸಾಬೀತು ಮಾಡಿ ಎಂದು ಸವಾಲೆಸೆದರು.
ನೀವು ಸತ್ಯ ತೋರಿಸಿದರೆ ಜನ ನಂಬುತ್ತಾರೆ, ಇಲ್ಲಾಂದ್ರೆ ನಂಬಲ್ಲ ಎಂದೂ ಹೇಳಿದ ಮುನಾಫ್, ಸುಜಾತಾ ಭಟ್ ಬಗ್ಗೆ ಕೇಳಿದ್ದಕ್ಕೆ ಅದೊಂದೇ ಯಾಕೆ ಕೇಳ್ತೀರಿ. ಒಂದೇ ವಿಷಯ ಇರೋದಲ್ಲ ಅಲ್ವಾ ಎಂದು ಪ್ರಶ್ನಿಸಿದರು. ಪದ್ಮಲತಾ, ಸೌಜನ್ಯಾ ಹೀಗೆ ಹಲವಾರು ಜನ ಸತ್ತಿದ್ದಾರೆ. ಅದನ್ನೆಲ್ಲ ನೀವು ಯಾಕೆ ಕೇಳಲ್ಲ ಎಂದು ಪ್ರಶ್ನಿಸಿದರು. ಅದೆಲ್ಲ ತನಿಖೆ ಆಗುತ್ತಾ ಎಂದು ಕೇಳಿದಾಗ, ಎಸ್ಐಟಿ ಸರಿಯಾದ ರೀತಿಯಲ್ಲೇ ತನಿಖೆ ಮಾಡುತ್ತಾರೆ, ಆದರೆ ನೀವು ಅಂದುಕೊಂಡ ರೀತಿ ಇಲ್ಲ. ಸತ್ಯ ಬಂದೇ ಬರುತ್ತದೆ ಎಂದರು.
ನಾಲ್ಕು ದಿನದಿಂದ ಅಭಿಷೇಕ್ ಬಂಧನ ಆಗುತ್ತದೆ, ವಿಠಲ ಗೌಡ ಬಂಧನ ಆಗುತ್ತದೆ ಎಂದು ತೋರಿಸ್ತಿದೀರಿ, ಯಾಕೆ ಇನ್ನೂ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದರು.
Kerala-based YouTuber Munaf, who has been actively commenting on the ongoing Dharmasthala case, appeared before the Special Investigation Team (SIT) at the Belthangady office today for questioning. This follows a notice issued to him two days ago. After the interrogation, Munaf addressed the media and made several bold remarks regarding the investigation and the way he has been portrayed by certain Kannada news channels.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm