ಬ್ರೇಕಿಂಗ್ ನ್ಯೂಸ್
03-09-25 10:52 pm Mangalore Correspondent ಕರಾವಳಿ
ಮಂಗಳೂರು, ಸೆ.3 : 43 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಅತಿಯಾದ ಋತುಸ್ರಾವ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ನೋವಿನ ಲಕ್ಷಣಗಳನ್ನು ಹೊಂದಿದ್ದರು. ತಪಾಸಣೆಯ ವೇಳೆ ಆಕೆಗೆ ಎಂಡೊಮೆಟ್ರಿಯೋಸಿಸ್ ಸೋಂಕು ಇರುವುದು ಪತ್ತೆಯಾಗಿತ್ತು. ಇದಕ್ಕಾಗಿ ಹಲವು ಆಸ್ಪತ್ರೆಗಳನ್ನು ಸಂದರ್ಶಿಸಿದ್ದರೂ ಗುಣ ಕಂಡಿರಲಿಲ್ಲ. ಒಂದು ವಾರದಿಂದ ಹೊಟ್ಟೆಯ ಭಾಗದಲ್ಲಿ ತೀವ್ರ ನೋವು, ಜ್ವರದಿಂದ ಬಳಲಿ ಅತ್ತಾವರದ ಕೆಎಂಸಿ ಆಸತ್ರೆಗೆ ಬಂದಿದ್ದರು.
ಸ್ಕ್ಯಾನಿಂಗ್ ಮತ್ತು ಎಂಆರ್ ಐ ಪರೀಕ್ಷೆ ನಡೆಸಿದಾಗ ಅಂಡಾಶಯದಲ್ಲಿ ಬೈಲ್ಯಾಟರಲ್ ಎಂಡೋಮೆಟ್ರಿಯೋಟಿಕ್ ಗಂಟುಗಳು ಇರುವುದು ಹಾಗೂ ಅಕ್ಯೂಟ್ ಪೆಲ್ವಿಕ್ ಇನ್ಫ್ಲಮೇಟರಿ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿದ್ದವು. ಆಕೆಗೆ ಇಂಟಾವೇನಸ್ ಆ್ಯಂಟಿಬಯಾಟಿಕ್ ಔಷಧ ನೀಡಿ ಒಂದು ವಾರ ನಿಗಾ ಇರಿಸಲಾಯಿತು. ಆದರೆ ಜ್ವರ ಮತ್ತು ನೋವು ಕಡಿಮೆಯಾಗದಿದ್ದರಿಂದ ಪ್ರಸೂತಿ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಅಗತ್ಯವೆಂದು ನಿರ್ಧರಿಸಿದರು. ಹಿರಿಯ ಪ್ರಸೂತಿ ತಜ್ಞೆ ಡಾ| ನೀನಾ ಮಹಾಲೆ ಮತ್ತು ಹಿರಿಯ ಜನರಲ್ ಸರ್ಜನ್ ಡಾ| ಪೂರ್ಣಚಂದ್ರ ತೇಜಸ್ವಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ಹೊಟ್ಟೆಯ ಭಾಗದಲ್ಲಿ ಕೀವು ತುಂಬಿರುವುದು, ಪೆಲ್ವಿಕ್ ಭಾಗದಲ್ಲಿ ಬಾವು ಹಾಗೂ ಗರ್ಭಕೋಶ, ಎರಡೂ ಫಾಲೋಪಿಯನ್ ನಾಳಗಳು ಮತ್ತು ಅಂಡಾಶಯಗಳು ಹೊಟ್ಟೆಗೆ ಅಂಟಿಕೊಂಡಿರುವುದು ತಿಳಿದುಬಂತು. ಇದು ಬಹಳ ಸಂಕೀರ್ಣ ಪ್ರಕರಣವಾಗಿದ್ದು, ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು.
ಪೆಲ್ವಿಸ್ ಭಾಗದ ಅಂಗಾಂಗಗಳು ರೋಗಪೀಡಿತವಾಗಿ ಪರಸ್ಪರ ಅಂಟಿಕೊಂಡಿದ್ದರೂ ಅವುಗಳನ್ನು ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಶಸ್ತ್ರಚಿಕಿತ್ಸಾ ತಜ್ಞರ ತಂಡ ಯಶಸ್ವಿಯಾಯಿತು. ಪೋಸ್ಟ್ ಆಪರೇಟಿವ್ ವಾರ್ಡ್ ನಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥ ಡಾ.ಅಪರ್ಣಾ ಭಟ್, ಡಾ.ನೀನಾ ಮಹಾಲೆ ಮತ್ತು ಡಾ.ಸೌದಾ ಅವರ ನೇತೃತ್ವದಲ್ಲಿ ನಿಕಟ ನಿಗಾದಡಿ ಚಿಕಿತ್ಸೆ ನೀಡಲಾಯಿತು. ರೋಗಿ ಬಳಿಕ ಉತ್ತಮವಾಗಿ ಚೇತರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತಂಡ ಪ್ರಯತ್ನ, ವೈದ್ಯಕೀಯ ನೈಪುಣ್ಯ ಮತ್ತು ಶಸ್ತ್ರಚಿಕಿತ್ಸೆ ಕೌಶಲಗಳು ಇಂತಹ ಕ್ಲಿಷ್ಟಕರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಬಹಳ ನಿರ್ಣಾಯಕ ಎಂಬುದನ್ನು ಅತ್ತಾವರ ಕೆಎಂಸಿಯಲ್ಲಿ ನಡೆಸಲಾಗಿರುವ ಈ ಚಿಕಿತ್ಸೆ ಸಾಬೀತುಪಡಿಸಿದೆ.
A 43-year-old woman suffering from a rare gynecological condition has successfully undergone a complex surgery at KMC Hospital, Attavar. The patient had been experiencing heavy menstrual bleeding and severe abdominal pain for nearly a year. Medical investigations revealed that she was suffering from endometriosis.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm