ಬ್ರೇಕಿಂಗ್ ನ್ಯೂಸ್
18-08-25 04:07 pm Mangalore Correspondent ಕರಾವಳಿ
ಮಂಗಳೂರು, ಆ.18 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆಯ ಮಧ್ಯೆ ರಾಜಕಾರಣಿಗಳ ಮಧ್ಯಪ್ರವೇಶ ಒಟ್ಟು ಪ್ರಕರಣವೇ ಹಳ್ಳ ಹಿಡಿಯುತ್ತಾ ಎನ್ನುವ ಶಂಕೆ ಮೂಡಿಸಿದೆ. ಇದರ ನಡುವಲ್ಲೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ವಿಲೇವಾರಿ ಬಗ್ಗೆ ಪೊಲೀಸರು ಎಷ್ಟು ನಿರ್ಲಕ್ಷ್ಯ ವಹಿಸಿದ್ದರು ಎನ್ನುವ ಬಗ್ಗೆ ಕೆಲವು ಸಾಕ್ಷ್ಯಗಳು ಹೊರಬೀಳುತ್ತಿವೆ. ಆರ್ಟಿಐನಡಿ ಪಡೆದ ಮಾಹಿತಿಗಳನ್ನು ಒಂದೊಂದಾಗಿಯೇ ಸಾಮಾಜಿಕ ಕಾರ್ಯಕರ್ತರು ಹೊರಕ್ಕೆ ಬಿಡುತ್ತಿದ್ದಾರೆ.
2009ರ ಜೂನ್ 15ರಂದು ಧರ್ಮಸ್ಥಳ ಸ್ನಾನಘಟ್ಟದ ಬಳಿ ಪತ್ತೆಯಾದ 15-20 ವರ್ಷದ ಅಪರಿಚಿತ ಹುಡುಗಿಯ ಶವವನ್ನು ಧರ್ಮಸ್ಥಳ ಹೊರ ಠಾಣೆ ಪೊಲೀಸರು ಅದೇ ದಿನವೇ ವಿಲೇವಾರಿ ಮಾಡುವುದಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಬರೆದ ಪತ್ರವೊಂದನ್ನು ಸಾಮಾಜಿಕ ಕಾರ್ಯಕರ್ತ ನವೀನ್ ಸೂರಿಂಜೆ ತನ್ನ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸ್ನಾನಘಟ್ಟದ ಬಳಿ 15-06-09ರಂದು 15-20 ವರ್ಷ ಪ್ರಾಯದ ಅಪರಿಚಿತ ಹುಡುಗಿಯ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 51/09 ಕಲಂ 174 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದೆ. ಮೃತ ಅಪರಿಚಿತ ಹುಡುಗಿಯ ವಾರೀಸುದಾರರು ಯಾರೆಂದು ತಿಳಿದುಬಂದಿರುವುದಿಲ್ಲ.
ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಸದ್ರಿ ಮೃತದೇಹದ ಅಂತ್ಯಸಂಸ್ಕಾರವನ್ನು ಪಂಚಾಯತ್ ವತಿಯಿಂದ ಮಾಡುವರೇ ಕೋರಿಕೆ ಎಂದು ಧರ್ಮಸ್ಥಳ ಹೊರ ಠಾಣೆ ಪೊಲೀಸ್ ಅಧಿಕಾರಿ ಜೂನ್ 15ರಂದೇ ಪಂಚಾಯತ್ ಕಚೇರಿಗೆ ಪತ್ರ ಬರೆದಿರುವ ಪತ್ರ ಇದಾಗಿದ್ದು, ಆರ್ಟಿಐನಡಿ ಈ ಮಾಹಿತಿಯನ್ನು ಪಡೆಯಲಾಗಿದೆ. ಜೂನ್ 15ರಂದು ಮೃತದೇಹ ಪತ್ತೆಯಾಗಿದ್ದರೆ, ಅದೇ ದಿನ ಪೋಸ್ಟ್ ಮಾರ್ಟಂ ನಡೆಸಿ ಅದೇ ದಿನವೇ ವಿಲೇವಾರಿ ಮಾಡುವಂತೆ ಕೇಳಿಕೊಳ್ಳಲಾಗಿದೆ.
ಯಾವುದೇ ಅಪರಿಚಿತ ಶವ ಸಿಕ್ಕರೆ ಕನಿಷ್ಠ 15 ದಿನಗಳ ಕಾಲ ಇಟ್ಟುಕೊಂಡು ವಾರೀಸುದಾರರ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಪೊಲೀಸರು ಶವ ಸಿಕ್ಕ ದಿನವೇ ವಿಲೇವಾರಿ ಮಾಡಲು ತರಾತುರಿಯಲ್ಲಿ ಧರ್ಮಸ್ಥಳ ಗ್ರಾಪಂ ಕಚೇರಿಗೆ ಪತ್ರ ಬರೆದಿರುವುದು ಯಾಕೆ ಎನ್ನುವ ಪ್ರಶ್ನೆ ಮುಂದಿಡಲಾಗಿದೆ. ಈ ಪತ್ರದ ಬಗ್ಗೆ ಜಾಲತಾಣದಲ್ಲಿ ಪರ- ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದರೂ, ಪೊಲೀಸರು ಬರೆದಿರುವ ಪತ್ರದಲ್ಲಿ ಶವ ಪತ್ತೆಯಾದ ದಿನವೇ ಪಂಚಾಯತ್ ಕಚೇರಿಗೂ ವಿಲೇವಾರಿ ಮಾಡಲು ಬರೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪೊಲೀಸರು ತರಾತುರಿಯಲ್ಲಿ ವಿಲೇವಾರಿಗೆ ಮುಂದಾಗಿದ್ದಕ್ಕೆ ಕಾರಣ ಏನು ಎಂದು ಪ್ರಶ್ನೆ ಮಾಡಲಾಗಿದೆ.
Fresh controversy has erupted in the ongoing Dharmasthala human remains case after an RTI disclosure revealed that police showed negligence in handling unidentified bodies in the past. According to information obtained under the Right to Information Act and shared online by activist Naveen Soorinje, the body of an unidentified girl aged 15–20 years was found on June 15, 2009, near the Dharmasthala Snanaghat.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm