ಬ್ರೇಕಿಂಗ್ ನ್ಯೂಸ್
14-08-25 10:29 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.14 : ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯಾಚರಣೆ 15ನೇ ದಿನವೂ ಮುಂದುವರಿದಿದ್ದು ನೇತ್ರಾವತಿ ಸ್ನಾನಘಟ್ಟ, ಬಂಗ್ಲೆಗುಡ್ಡೆ, ಕಲ್ಲೇರಿ ಕಾಡಿನ ಬಳಿಕ ದ್ವಾರಕಾಶ್ರಮದ ಬಳಿ ಶೋಧ ಕಾರ್ಯ ನಡೆಸಲಾಗಿದೆ. ಇಲ್ಲಿ 17ನೇ ಪಾಯಿಂಟ್ ಗುರುತಿಸಿ ಶೋಧಕ್ಕಾಗಿ ಅಗೆದಿದ್ದು ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
13ನೇ ಸ್ಥಳದಲ್ಲಿ ಹಲವು ಹೆಣ ಹೂತಿದ್ದಾಗಿ ದೂರುದಾರ ಹೇಳಿದ್ದ. ಹೀಗಾಗಿ ಎರಡು ದಿನ ಕಾರ್ಯಾಚರಣೆ ನಡೆಸಿದ್ದು ಅಲ್ಲಿ ಶೋಧ ನಡೆಸಿದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಅಲ್ಲಿ ಎರಡು ದಿನಗಳ ಕಾಲ 18 ಅಡಿ ಆಳಕ್ಕೆ, ಮತ್ತೊಂದು ಕಡೆ 13 ಅಡಿ ಅಗಲಕ್ಕೆ ಅಗೆಯಲಾದರೂ, ಕುರುಹು ಪತ್ತೆಯಾಗಿಲ್ಲ. ಈ ನಡುವೆ ಇಬ್ಬರು ಸಾಕ್ಷಿದಾರರು ಮುಂದೆ ಬಂದಿದ್ದು, 13ನೇ ಜಾಗದಲ್ಲಿ ಶವ ಹೂತಿದ್ದನ್ನು ನಾವೂ ನೋಡಿದ್ದೇವೆ ಎಂದು ಸ್ಥಳೀಯರಾದ ತುಕಾರಾಮ ಗೌಡ ಹಾಗೂ ಪುರಂದರ ಗೌಡ ಹೇಳಿದ್ದಾರೆ.
ಎಸ್ ಐಟಿಗೆ ದೂರು ಕೊಡಲಾಗಿದೆ. ಅವರು ತನಿಖೆ ನಡೆಸಿದ್ರೆ ನಾವು ಎಲ್ಲಾ ಸಾಕ್ಷಿ ಹೇಳಲು ಸಿದ್ಧ ಎಂದು ಈ ಇಬ್ಬರು ತಿಳಿಸಿದ್ದಾರೆ. ನೇತ್ರಾವತಿ ನದಿ ತಡದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ಪಾತ್ರವೂ ಇದೆ, ಅದನ್ನು ಎಸ್ ಐಟಿ ಬಳಿ ಹೇಳುತ್ತೇವೆ. ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4-5 ಗಂಟೆಯ ವೇಳೆಗೆ ಕದ್ದು ಮುಚ್ಚಿ ಹೆಣ ಹೂತಿದ್ದನ್ನು ನಾನು ನೋಡಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ.
ಇದರ ಬಗ್ಗೆ ಭಯದಿಂದ ಇಲ್ಲಿಯವರೆಗೂ ಹೇಳಿರಲಿಲ್ಲ. ಈಗ ಎಸ್ ಐಟಿ ರಚನೆ ಮಾಡಿರುವುದರಿಂದ ಧೈರ್ಯದಿಂದ ಹೇಳಿದ್ದೇವೆ ಎಂದು ಹೇಳಿದ್ದಾರೆ. ಈಗ ಹೆಣದ ಕುರುಹು ಸಿಗದಿರಲು ಆ ಜಾಗ ಅಭಿವೃದ್ಧಿಯಾಗಿರುವುದೇ ಕಾರಣ ಎಂದು ಪುರಂದರಗೌಡ ಹೇಳಿದ್ದಾರೆ. ಭಾರಿ ಮಳೆ ಬಂದು ಪ್ರವಾಹ ಆದ ಕಾರಣ, ಅಣೆಕಟ್ಟು ಕೆಲಸದ ಕಾರಣದಿಂದಾಗಿಯೂ ಆ ಜಾಗದ ವ್ಯತ್ಯಾಸ ಆಗಿದೆ ಎಂದು ಪುರಂದರ ಗೌಡ ಹೇಳಿದ್ದಾರೆ.
The search operation for alleged buried bodies in Dharmasthala entered its 15th day, with Special Investigation Team (SIT) officials shifting their focus to the area near Dwarkashrama after earlier digs at Netravati bathing ghat, Banglegudde, and Kalleri forest yielded no results.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm