ಬ್ರೇಕಿಂಗ್ ನ್ಯೂಸ್
09-08-25 10:53 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.9 : ಧರ್ಮಸ್ಥಳ ಹೆಣ ಹೂತ ಆರೋಪ ಪ್ರಕರಣದಲ್ಲಿ ದೂರುದಾರ ತೋರಿಸಿದ್ದ ಬಾಹುಬಲಿ ಬೆಟ್ಟದ ಬಳಿಯೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ಶವ ಹೂತ ಬಗ್ಗೆ ಸಾಕ್ಷ್ಯ ಲಭಿಸಿಲ್ಲ.
ಬಾಹುಬಲಿ ಬೆಟ್ಟಕ್ಕೆ ತೆರಳುವ ರಸ್ತೆ ಮಧ್ಯದ ಎಡಭಾಗದಲ್ಲಿ ಜಾಗವನ್ನು ತೋರಿಸಲಾಗಿತ್ತು. ಸ್ಥಳದಲ್ಲಿ 15 ಅಡಿ ಅಗಲ ಮತ್ತು ಉದ್ದಕ್ಕೆ ಸುಮಾರು ಎಂಟು ಅಡಿ ಆಳಕ್ಕೆ ಮಣ್ಣು ತೆರವು ಮಾಡಿ ಶೋಧಿಸಲಾಗಿದೆ. ಆದರೆ ಯಾವೊಂದು ಸಾಕ್ಷ್ಯವೂ ಲಭಿಸದೆ ಎಸ್ಐಟಿ ಅಧಿಕಾರಿಗಳು ಮರಳಿದ್ದಾರೆ. ಬಾಹುಬಲಿ ಬೆಟ್ಟದ ಬಳಿಯ ಈ ಜಾಗವನ್ನು 16ನೇ ನಂಬರ್ ಎಂದು ಮಾರ್ಕ್ ಹಾಕಲಾಗಿತ್ತು.




ನಿನ್ನೆ ಶುಕ್ರವಾರ ಧರ್ಮಸ್ಥಳದಿಂದ ಎರಡು ಕಿಮೀ ದೂರದ ಕಲ್ಲೇರಿ- ಬೋಳಿಯಾರ್ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಶಾಲಾ ಸಮವಸ್ತ್ರದಲ್ಲಿಯೇ ಬಾಲಕಿಯ ಶವ ಹೂತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದ ಈ ಜಾಗದಲ್ಲಿ ಶೋಧ ಕಾರ್ಯ ಮಾಡಲಾಗಿತ್ತು. ಆದರೆ ಅಲ್ಲಿಯೂ ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ. ಆ ಜಾಗವನ್ನು 15ನೇ ನಂಬರ್ ಎಂದು ಗುರುತ ಹಾಕಲಾಗಿತ್ತು.
ಇಂದು ಬೆಳಗ್ಗೆ ಧರ್ಮಸ್ಥಳ ಆವರಣದ ಒಳಗಡೆ ಬರುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರಿಗೆ ಅಚ್ಚರಿ ಉಂಟಾಗಿತ್ತು. ಮುಸುಕು ಹಾಕಿದ್ದ ದೂರುದಾರ ನೇರವಾಗಿ ಮಹಾದ್ವಾರದ ಬಳಿಯಿರುವ ಬಾಹುಬಲಿ ಬೆಟ್ಟದ ಬಳಿಯ ರಸ್ತೆಯಲ್ಲಿ ಕರೆದೊಯ್ದು ಅಲ್ಲಿನ ಗುಡ್ಡದ ಒಂದು ಬದಿಯನ್ನು ತೋರಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ಸಾಕ್ಷ್ಯ ಸಿಗದೇ ಇರುವುದು ಶೋಧ ನಡೆಸಿದ ತಂಡಕ್ಕೂ ನಿರಾಸೆ ಮೂಡಿಸಿದೆ. ಈವರೆಗೆ ಒಟ್ಟು 15 ಕಡೆಗಳಲ್ಲಿ ಅಗೆತ ಮಾಡಲಾಗಿದ್ದು ಒಂದು ಕಡೆ ಮಾತ್ರ ಶವದ ಸಾಕ್ಷ್ಯ ಲಭಿಸಿತ್ತು. ಆನಂತರ, ಗುಡ್ಡದ ಮೇಲ್ಭಾಗದಲ್ಲಿ ಒಂದು ಅಸ್ಥಿಪಂಜರ ಸಿಕ್ಕಿತ್ತು. ಇದೇ ವೇಳೆ, ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮತ್ತಿಬ್ಬರು ದೂರುದಾರ ಹೆಣ ಹೂತಿದ್ದನ್ನು ನೋಡಿದ್ದೇವೆಂದು ಸಾಕ್ಷಿಗಾರರೆಂದು ಹೇಳಿ ಇಬ್ಬರು ಬಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಬೆಳ್ತಂಗಡಿ ಠಾಣೆಯಲ್ಲಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಧರ್ಮಸ್ಥಳ ಪರವಾಗಿ ಹೋರಾಟ ನಡೆಸುತ್ತಿರುವ ಉಡುಪಿ ಮೂಲದ ವಸಂತ ಗಿಳಿಯಾರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಅಶ್ಲೀಲ ಮತ್ತು ಜನರನ್ನು ಎತ್ತಿಕಟ್ಟುವ ರೀತಿ, ಧರ್ಮ ಧರ್ಮಗಳ ನಡುವೆ ದ್ವೇಷ ಮೂಡುವ ರೀತಿ ಹೇಳಿಕೆ ನೀಡಿ ವಿಡಿಯೋ ಹರಿಯಬಿಟ್ಟಿದ್ದಾರೆಂದು ಇಬ್ಬರು ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
In the ongoing Dharmasthala human remains investigation, the Special Investigation Team (SIT) carried out another search near Bahubali Hill, a location pointed out by the complainant. Despite excavating an area 15 feet in length and width and around 8 feet deep, no evidence of buried remains was found, leaving the team disappointed. This site had been marked as Location No. 16.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm