ಬ್ರೇಕಿಂಗ್ ನ್ಯೂಸ್
09-08-25 10:53 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.9 : ಧರ್ಮಸ್ಥಳ ಹೆಣ ಹೂತ ಆರೋಪ ಪ್ರಕರಣದಲ್ಲಿ ದೂರುದಾರ ತೋರಿಸಿದ್ದ ಬಾಹುಬಲಿ ಬೆಟ್ಟದ ಬಳಿಯೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ಶವ ಹೂತ ಬಗ್ಗೆ ಸಾಕ್ಷ್ಯ ಲಭಿಸಿಲ್ಲ.
ಬಾಹುಬಲಿ ಬೆಟ್ಟಕ್ಕೆ ತೆರಳುವ ರಸ್ತೆ ಮಧ್ಯದ ಎಡಭಾಗದಲ್ಲಿ ಜಾಗವನ್ನು ತೋರಿಸಲಾಗಿತ್ತು. ಸ್ಥಳದಲ್ಲಿ 15 ಅಡಿ ಅಗಲ ಮತ್ತು ಉದ್ದಕ್ಕೆ ಸುಮಾರು ಎಂಟು ಅಡಿ ಆಳಕ್ಕೆ ಮಣ್ಣು ತೆರವು ಮಾಡಿ ಶೋಧಿಸಲಾಗಿದೆ. ಆದರೆ ಯಾವೊಂದು ಸಾಕ್ಷ್ಯವೂ ಲಭಿಸದೆ ಎಸ್ಐಟಿ ಅಧಿಕಾರಿಗಳು ಮರಳಿದ್ದಾರೆ. ಬಾಹುಬಲಿ ಬೆಟ್ಟದ ಬಳಿಯ ಈ ಜಾಗವನ್ನು 16ನೇ ನಂಬರ್ ಎಂದು ಮಾರ್ಕ್ ಹಾಕಲಾಗಿತ್ತು.




ನಿನ್ನೆ ಶುಕ್ರವಾರ ಧರ್ಮಸ್ಥಳದಿಂದ ಎರಡು ಕಿಮೀ ದೂರದ ಕಲ್ಲೇರಿ- ಬೋಳಿಯಾರ್ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಶಾಲಾ ಸಮವಸ್ತ್ರದಲ್ಲಿಯೇ ಬಾಲಕಿಯ ಶವ ಹೂತಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದ ಈ ಜಾಗದಲ್ಲಿ ಶೋಧ ಕಾರ್ಯ ಮಾಡಲಾಗಿತ್ತು. ಆದರೆ ಅಲ್ಲಿಯೂ ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ. ಆ ಜಾಗವನ್ನು 15ನೇ ನಂಬರ್ ಎಂದು ಗುರುತ ಹಾಕಲಾಗಿತ್ತು.
ಇಂದು ಬೆಳಗ್ಗೆ ಧರ್ಮಸ್ಥಳ ಆವರಣದ ಒಳಗಡೆ ಬರುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರಿಗೆ ಅಚ್ಚರಿ ಉಂಟಾಗಿತ್ತು. ಮುಸುಕು ಹಾಕಿದ್ದ ದೂರುದಾರ ನೇರವಾಗಿ ಮಹಾದ್ವಾರದ ಬಳಿಯಿರುವ ಬಾಹುಬಲಿ ಬೆಟ್ಟದ ಬಳಿಯ ರಸ್ತೆಯಲ್ಲಿ ಕರೆದೊಯ್ದು ಅಲ್ಲಿನ ಗುಡ್ಡದ ಒಂದು ಬದಿಯನ್ನು ತೋರಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ಸಾಕ್ಷ್ಯ ಸಿಗದೇ ಇರುವುದು ಶೋಧ ನಡೆಸಿದ ತಂಡಕ್ಕೂ ನಿರಾಸೆ ಮೂಡಿಸಿದೆ. ಈವರೆಗೆ ಒಟ್ಟು 15 ಕಡೆಗಳಲ್ಲಿ ಅಗೆತ ಮಾಡಲಾಗಿದ್ದು ಒಂದು ಕಡೆ ಮಾತ್ರ ಶವದ ಸಾಕ್ಷ್ಯ ಲಭಿಸಿತ್ತು. ಆನಂತರ, ಗುಡ್ಡದ ಮೇಲ್ಭಾಗದಲ್ಲಿ ಒಂದು ಅಸ್ಥಿಪಂಜರ ಸಿಕ್ಕಿತ್ತು. ಇದೇ ವೇಳೆ, ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮತ್ತಿಬ್ಬರು ದೂರುದಾರ ಹೆಣ ಹೂತಿದ್ದನ್ನು ನೋಡಿದ್ದೇವೆಂದು ಸಾಕ್ಷಿಗಾರರೆಂದು ಹೇಳಿ ಇಬ್ಬರು ಬಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಬೆಳ್ತಂಗಡಿ ಠಾಣೆಯಲ್ಲಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಧರ್ಮಸ್ಥಳ ಪರವಾಗಿ ಹೋರಾಟ ನಡೆಸುತ್ತಿರುವ ಉಡುಪಿ ಮೂಲದ ವಸಂತ ಗಿಳಿಯಾರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಅಶ್ಲೀಲ ಮತ್ತು ಜನರನ್ನು ಎತ್ತಿಕಟ್ಟುವ ರೀತಿ, ಧರ್ಮ ಧರ್ಮಗಳ ನಡುವೆ ದ್ವೇಷ ಮೂಡುವ ರೀತಿ ಹೇಳಿಕೆ ನೀಡಿ ವಿಡಿಯೋ ಹರಿಯಬಿಟ್ಟಿದ್ದಾರೆಂದು ಇಬ್ಬರು ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
In the ongoing Dharmasthala human remains investigation, the Special Investigation Team (SIT) carried out another search near Bahubali Hill, a location pointed out by the complainant. Despite excavating an area 15 feet in length and width and around 8 feet deep, no evidence of buried remains was found, leaving the team disappointed. This site had been marked as Location No. 16.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 08:49 pm
HK News Desk
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm