ಬ್ರೇಕಿಂಗ್ ನ್ಯೂಸ್
02-07-25 11:39 am Mangalore Correspondent ಕರಾವಳಿ
ಮಂಗಳೂರು, ಜುಲೈ 2 : ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿ ಕೈಕೊಟ್ಟ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಬಿಜೆಪಿ ಮತ್ತು ಹಿಂದು ಸಂಘಟನೆಗಳು ಮೌನ ವಹಿಸಿದ್ದರೆ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರನ್ನು ತೀವ್ರ ಟೀಕೆ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡ ಪದ್ಮರಾಜ್, ನಾವು ಯುವತಿಗೆ ನ್ಯಾಯ ದೊರಕಿಸಲು ಹೋರಾಟಕ್ಕೆ ಕೈಜೋಡಿಸುತ್ತೇವೆ. ಮಹಿಳೆಯನ್ನು ಮಾತೆ ಎನ್ನುವ ಮಂದಿ ಈ ರೀತಿಯ ಅನ್ಯಾಯ ಆಗಿರುವಾಗ ಸುಮ್ಮನಿರುವುದನ್ನು ಸಹಿಸಲಾಗದು ಎಂದಿದ್ದಾರೆ.
ಇದೇ ವೇಳೆ, ಪುತ್ತೂರಿನಲ್ಲಿ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಆಕೆಯ ತಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಈಗಷ್ಟೇ ಅಂತಿಮ ವರ್ಷದ ಬಿಎಸ್ಸಿ ಮಾಡುತ್ತಿರುವ ನನ್ನ ಮಗಳಿಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಮಗುವಿನ ಜನನಕ್ಕೆ ಕಾರಣನಾದ ಕೃಷ್ಣ ಜೆ. ರಾವ್ ನಾಪತ್ತೆಯಾಗಿದ್ದು, ನಾವು ಪೊಲೀಸರಿಗೆ ದೂರು ನೀಡಿದ್ದರೂ ಆತನನ್ನು ಬಂಧಿಸದೆ ನಾಟಕ ಮಾಡುತ್ತಿದ್ದಾರೆ. ಆರೋಪಿಯನ್ನು ಸ್ವತಃ ಆತನ ತಂದೆ ರಾಜಕೀಯ ಪ್ರಭಾವ ಬಳಸಿ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.


ಮಗಳು ಮತ್ತು ಕೃಷ್ಣ ಜೆ. ರಾವ್ ಹೈಸ್ಕೂಲಿನಲ್ಲಿದ್ದಾಗಲೇ ಪರಸ್ಪರ ಪ್ರೇಮಿಸುತ್ತಿದ್ದರು. ಮಗಳು ಮಂಗಳೂರಿನಲ್ಲಿ ಬಿಎಸ್ಸಿ ಮುಗಿಸಿದ್ದು, ಕೃಷ್ಣ ರಾವ್ ಪುತ್ತೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಮೇಲೆ ನಮಗೆ ತಿಳಿಯಿತು. ಆನಂತರ, ಮದುವೆಯಾಗುತ್ತೇನೆಂದು ತಂದೆ, ಮಗ ಭರವಸೆ ಕೊಟ್ಟಿದ್ದನ್ನು ನಂಬಿದ್ದೆವು. ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಆತನೂ ಜೊತೆಗೆ ಬರುತ್ತಿದ್ದ. ಕೆಲ ದಿನಗಳಿಂದ ಉಲ್ಟಾ ಹೊಡೆದಿದ್ದು, ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾನೆ. ಹಿಂದು ಸಂಘಟನೆಗಳ ಮುಖಂಡರು ಕರೆ ಮಾಡಿ ಹತ್ತು ಲಕ್ಷ ರೂ. ಕೊಡುತ್ತಾರಂತೆ, ಹಣ ಸ್ವೀಕರಿಸಿ ಗರ್ಭಪಾತ ಮಾಡಿಸಿ ಎಂದು ಸಲಹೆ ನೀಡಿದರು. ಕೋಟಿ ಕೊಟ್ಟರೂ ಮಾಡಿಸಲ್ಲ ಎಂದಾಗ ಹಿಂದೆ ಸರಿದರು. ಮಗುವಿನ ಡಿಎನ್ಎ ಪರೀಕ್ಷೆಗೆ ನಾನು ಮತ್ತು ಮಗಳು ಸಿದ್ಧರಿದ್ದೇವೆ. ಯಾವುದೇ ಪುಣ್ಯಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುವುದಕ್ಕೂ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.
ಹುಡುಗ ಉಲ್ಟಾ ಹೊಡೆದಾಗ ಮಹಿಳಾ ಠಾಣೆಗೆ ದೂರು ನೀಡಲು ತೆರಳಿದ್ದೆ. ಆಗ ಕೃಷ್ಣ ರಾವ್ ಮತ್ತು ತಂದೆ ಜಗನ್ನಿವಾಸ ರಾವ್ ಠಾಣೆಗೆ ಬಂದು ಮದುವೆಯಾಗುವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆನಂತರ, ಶಾಸಕ ಅಶೋಕ್ ರೈಯವರ ಮೂಲಕವೂ ಹೇಳಿಸಿದ್ದರು. ಶಾಸಕರ ಮಾತು ನಂಬಿ ಎಫ್ಐಆರ್ ಹಾಕುವುದು ಬೇಡ ಎಂದು ಹಿಂದೆ ಬಂದಿದ್ದೆ. ಈಗ ಶಾಸಕರಿಗೂ ತಿಳಿಸಿದ್ದು ಕಾನೂನು ಪ್ರಕಾರ ಮುಂದುವರಿಯಲು ತಿಳಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.
A sensational case involving the son of Puttur BJP leader Jagannivasa Rao has triggered a major political controversy. The young man, identified as Krishna J. Rao, allegedly impregnated a young woman, promising marriage, and later abandoned her. While the BJP and affiliated Hindu organisations have maintained silence, Congress leaders have come forward extending support to the victim, vowing to fight for justice.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm