ಬ್ರೇಕಿಂಗ್ ನ್ಯೂಸ್
27-04-24 05:31 pm HK News Desk ಕರಾವಳಿ
ಪುತ್ತೂರು, ಎ.27: ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತನಗೆ ಈ ಮದುವೆ ಬೇಡ ಎಂದು ರಂಪಾಟ ನಡೆಸಿದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದ್ದು ಕೊನೆಗೆ ಪೊಲೀಸರ ಸಮಕ್ಷಮ ರಾಜಿ ಪಂಚಾಯ್ತಿ ಆದರೂ ಮದುವೆ ಸಂಬಂಧ ಮುರಿದು ಬಿದ್ದಿದೆ.
ಕೊಣಾಲು ಗ್ರಾಮದ ಉಮೇಶ ಹಾಗೂ ಬಂಟ್ವಾಳ ತಾಲೂಕು ಕುಳ ಗ್ರಾಮದ ಸರಸ್ವತಿ ಅವರ ಮದುವೆ ನಿಗದಿಯಾಗಿತ್ತು. ನಿನ್ನೆ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದೂ ಆಗಿತ್ತು.
ಧಾರೆ ಕಾರ್ಯಕ್ರಮ ನಡೆದು ವಧು ಹಾಗೂ ವರ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು. ಕರಾವಳಿ ಹಿಂದು ಸಂಪ್ರದಾಯ ಪ್ರಕಾರ ಕೊನೆಗೆ ತಾಳಿ ಕಟ್ಟಿದರೆ ಮದುವೆ ಮುಗಿದಂತೆ. ಆದರೆ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿದ್ದು ರಂಪಾಟ ನಡೆಸಿದ್ದಾಳೆ. ಇದ್ದಕ್ಕಿದ್ದಂತೆ ವಧುವಿನ ಈ ನಿರ್ಧಾರದಿಂದ ಎರಡೂ ಕಡೆಯವರು ವಿಚಲಿತಗೊಂಡಿದ್ದು ವಧುಮಗಳನ್ನು ಮನವೊಲಿಸಿದರೂ ಆಕೆ ತಾಳಿ ಕಟ್ಟಿಸಿಕೊಳ್ಳಲು ಬಿಡಲಿಲ್ಲ. ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ್ದು ಅಲ್ಲಿ ರಾಜಿ ಪಂಚಾತಿಕೆ ನಡೆಸಲಾಯಿತು.
ಪೊಲೀಸ್ ಠಾಣೆಯಲ್ಲಿ ವಧು ಸರಸ್ವತಿ ಪಶ್ಚಾತಾಪ ಪಟ್ಟಿದ್ದು ಉಮೇಶ ಅವರನ್ನು ಮದುವೆ ಆಗಲು ಒಪ್ಪಿಗೆ ಸೂಚಿಸಿದ್ದಾಳೆ. ಆದರೆ ಅಷ್ಟರ ವರೆಗೂ ಪಟ್ಟು ಬಿಡದೆ ಮದುವೆ ಕಾರ್ಯವನ್ನೇ ಹಾಳು ಮಾಡಿದ ವಧುವನ್ನು ಉಮೇಶ್ ನಿರಾಕರಿಸಿದ್ದು ಮದುವೆ ಸಂಬಂಧವೇ ಮುರಿದು ಬಿದ್ದಿದೆ. ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆದು ತಮ್ಮಷ್ಟಕ್ಕೇ ತೆರಳಿದ್ದಾರೆ.
ಇತ್ತ ವರನ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಅಡುಗೆ ಸಿದ್ಧಪಡಿಸಲಾಗಿತ್ತು. 500 ಮಂದಿಗೆ ಊಟಕ್ಕೆ ಸಿದ್ಧಪಡಿಸಿದ್ದಲ್ಲದೆ, ಸಾವಿರದಷ್ಟು ಐಸ್ ಕ್ರೀಮ್ ಕೂಡ ತರಿಸಲಾಗಿತ್ತು. ಕೊನೆ ಕ್ಷಣದಲ್ಲಿ ಯುವತಿ ಮದುವೆ ರದ್ದುಗೊಂಡಿದ್ದರಿಂದ ಎರಡು ಕಡೆಯವರಿಗೂ ಲಕ್ಷಾಂತರ ರೂ. ನಷ್ಟ ಆಗಿದೆ. ಇಷ್ಟಕ್ಕೂ ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದು ಯಾಕೆನ್ನುವುದು ತಿಳಿದುಬಂದಿಲ್ಲ.
A marriage at the Konalu village wedding hall took a dramatic turn as the bride refused to allow the groom to tie the mangalsutra on Friday. The marriage of Umesh, son of the late Kolpe Babu Gowda, was arranged with Saraswati, daughter of the late Koragappa Gowda of Kula in Bantwal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am