ಬ್ರೇಕಿಂಗ್ ನ್ಯೂಸ್
17-02-24 07:50 pm Mangalore Correspondent ಕರಾವಳಿ
ಮಂಗಳೂರು, ಫೆ.17: ನಾನು ಮುತ್ತಿಗೆ ಹಾಕಿದವರನ್ನು ನೋಡಿಲ್ಲ. ನಾನು ಬರೋದಕ್ಕೆ ಮೊದಲೇ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ಆ ಮುತ್ತಿಗೆ ನನಗೆ ಆಗಿರೋದಲ್ಲ. ಅವರು ಬೇರೆ ಯಾರಿಗೋ ಮುತ್ತಿಗೆ ಹಾಕಿರಬಹುದು. ನನಗೇ ಆಗುತ್ತಿದರೆ ನನ್ನ ಕಾರಿಗೆ ಮುತ್ತಿಗೆ ಹಾಕುತ್ತಿದ್ರು.. ಹೀಗೆಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮುತ್ತಿಗೆ ಯತ್ನವನ್ನು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ.
ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೇಳಿದಾಗ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದರು. ಬಜೆಟಲ್ಲಿ ಮುಸ್ಲಿಮರಿಗೆ ಹೆಚ್ಚು ನೀಡಿದ್ದೀರಂತೆ ಎಂದು ಕೇಳಿದ್ದಕ್ಕೆ, ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಪಾಯಿಂಟ್ ಎಂಟರಷ್ಟು ಮಾತ್ರ ನೀಡಿದ್ದೇವೆ. ಬಿಜೆಪಿಯವರಿಗೆ ಮುಸ್ಲಿಮರನ್ನು ಕಂಡ್ರೆ ಆಗೋದಿಲ್ಲ. ಹಾಗಾಗಿ ಅವರಿಗೆ ಏನು ಕೊಟ್ರೂ ಆಗೋದಿಲ್ಲ. ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಎಷ್ಟಿದ್ದಾರೆ ?ಅವರಿಗೆ ನೀಡಿದ ಅನುದಾನ ಏನು ಎಂದು ಲೆಕ್ಕ ಹಾಕಿ ಅಂತ ಹೇಳಿದ್ದಾರೆ.
ಬಜೆಟ್ ನಲ್ಲಿ ಮೀನುಗಾರರಿಗೆ ಬಹಳಷ್ಟು ಕೊಟ್ಟಿದ್ದೇವೆ. ಮೊದಲ ಬಾರಿ ಬೋಟ್ ಅಂಬ್ಯುಲೆನ್ಸ್ ನೀಡಿದ್ದೇವೆ. ಮೀನುಗಾರರಿಗೆ ನೀಡುತ್ತಿದ್ದ ಅನುದಾನವನ್ನು ಮೂರೂವರೆ ಸಾವಿರಕ್ಕೆ ಏರಿಸಿದ್ದೇವೆ. ಮೀನುಗಾರರಿಗೆ ಬಜೆಟ್ ನಲ್ಲಿ ಬಂಪರ್ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮ ಅವಹೇಳನ ವಿಚಾರದಲ್ಲಿ ಕೇಳಿದ್ದಕ್ಕೆ, ಬಿಜೆಪಿ ಈ ಬಗ್ಗೆ ಹೋರಾಟ ಮಾಡಲಿ, ಯಾರ ತಕರಾರು ಇರೋದಿಲ್ಲ. ಘಟನೆಯಲ್ಲಿ ಕೆಲವರ ವಿರುದ್ಧ ಎಫ್ಐಆರ್ ಆಗಿದೆ. ತನಿಖೆಯಲ್ಲಿ ಏನು ರಿಪೋರ್ಟ್ ಬರುತ್ತೆ ನೋಡೋಣ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಕಮಲನಾಥ್ ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ, ಬಿಜೆಪಿ ಸೇರ್ಪಡೆ ಅವರ ವೈಯಕ್ತಿಕ. ಬಿಜೆಪಿ ಬೆದರಿಸಿ ಅಪರೇಷನ್ ಕಮಲ ಮಾಡುತ್ತಾರೆ. ನಮ್ಮ MLA ಗಳಿಗೆ 50 ಕೋಟಿ ನೀಡುತ್ತೇವೆ ಅಂದಿದ್ರು. ಆಪರೇಷನ್ ಕಮಲ ಯಡಿಯೂರಪ್ಪ ಕಾಲದಲ್ಲಿ ಶುರುವಾಗಿದ್ದು. ಬಿಜೆಪಿ ಸೇರದೇ ಹೋದ್ರೆ ಇಡಿ ಮೂಲಕ ಹೆದರಿಸುತ್ತಾರೆ ಎಂದರು.
Mangalore BJP Protest, No gherao by BJP to my car says CM Siddaramaiah, may be it was someone elses car. Bjp workers held protest by showing black flag near bondel in Mangalore while cm and kharge was on thier way to adyar.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm