ಬ್ರೇಕಿಂಗ್ ನ್ಯೂಸ್
10-02-24 10:34 pm Mangalore Correspondent ಕರಾವಳಿ
ಮಂಗಳೂರು, ಫೆ.10: ಕರಾವಳಿಯ ತುಳುನಾಡಿನ ಜನರು ಆರಾಧಿಸುವ ದೈವಗಳ ಬಗ್ಗೆ ಸಿನಿಮಾ, ಸೀರಿಯಲ್ ಮಾಡುತ್ತಿರುವುದಕ್ಕೆ ದೈವಾರಾಧಕರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ದೈವಾರಾಧನೆ ಆಧರಿಸಿ ಕಾವೇರಿ ಎನ್ನುವ ಹೆಸರಿನ ಸೀರಿಯಲ್ ಬಂದಿದ್ದು, ಅದರ ಪ್ರೋಮೋ ಬರುತ್ತಲೇ ಪ್ರಸಾರ ತಡೆಹಿಡಿಯುವಂತೆ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ದೈವಾರಾಧನೆಯನ್ನೇ ಮುಂದಿಟ್ಟು ಮಾಡಿದ್ದ ಕಾಂತಾರ ಸಿನಿಮಾ ಹಿಟ್ ಆದಬಳಿಕ ದೈವಗಳ ನಂಬಿಕೆಯನ್ನೇ ಆಧರಿಸಿ ಕೆಲವರು ಸಿನಿಮಾ, ಸೀರಿಯಲ್ ಮಾಡಲು ಆರಂಭಿಸಿದ್ದಾರೆ. ಕನ್ನಡದ ಸುವರ್ಣ ವಾಹಿನಿಯಲ್ಲಿ ಕಾವೇರಿ ಎನ್ನುವ ಸೀರಿಯಲ್ ಆರಂಭಗೊಳ್ಳುತ್ತಿದ್ದು, ಅದರಲ್ಲಿ ದೈವದ ಕಲೆಯನ್ನೇ ಮುಖ್ಯವಾಗಿ ತೋರಿಸಲಾಗಿದೆ. ಅದರ ಪ್ರೋಮೋ ಬರುತ್ತಲೇ ದೈವಾರಾಧಕರು ವಿರೋಧ ವ್ಯಕ್ತಪಡಿಸಿದ್ದು, ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಮತ್ತು ಪಾಂಡೇಶ್ವರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೈವಾರಾಧನೆ ಪ್ರದರ್ಶನ ಕಲೆಯಲ್ಲ, ಸಾತ್ವಿಕರ ನಂಬಿಕೆಯ ಆರಾಧನೆ. ದೈವಗಳ ವೇಷ ತೊಟ್ಟು ಕುಣಿಯುವುದು, ಛದ್ಮವೇಷದಂತೆ ತೋರಿಸುವುದು ತಪ್ಪು. ದೈವಗಳಿಗೆ ಕಟ್ಟುವುದು ನಿರ್ದಿಷ್ಟ ಜನಾಂಗದವರು ಮಾತ್ರ ಆಗಿದ್ದು, ಅದನ್ನು ಇತರರು ಪ್ರದರ್ಶನ ವಸ್ತುವಾಗಿ ತೋರಿಸುತ್ತಿದ್ದಾರೆ. ದೈವಗಳಿಗೆ ಕಟ್ಟುವುದಕ್ಕೆ ನಿರ್ದಿಷ್ಟ ಉದ್ದೇಶ, ಪಾಡ್ದನದ ಹಿನ್ನೆಲೆ ಇರುತ್ತದೆ. ಅದನ್ನು ಬಿದ್ದು ಕಾರಣಿಕ ಎಂದು ತೋರಿಸಲು ಛದ್ಮವೇಷದ ರೀತಿ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರ ನಂಬಿಕೆಗೆ ಘಾಸಿ ಮಾಡಿದೆ. ಅಪಮಾನ ಮಾಡಿದಂತಾಗಿದೆ ಎಂದು ದೈವಾರಾಧಕರು ಆಕ್ಷೇಪ ಎತ್ತಿದ್ದಾರೆ.

ಕನ್ನಡ ವಾಹಿನಿಯಲ್ಲಿ ಮಂಗಳೂರಿನ ಪ್ರಶಾಂತ್ ಸಿಕೆ ಎಂಬವರು ದೈವದ ವೇಷ ತೊಟ್ಟು ಪಾತ್ರ ಮಾಡಿದ್ದಲ್ಲದೆ, ತನ್ನದೇ ನಿರ್ದೇಶನದಲ್ಲಿ ಸೀರಿಯಲ್ ಮಾಡುತ್ತಿದ್ದಾರೆ. ಕಾವೇರಿ ಸೀರಿಯಲ್ ಪ್ರಸಾರ ಮಾಡಬಾರದು, ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆ ಹೆಸರಲ್ಲಿ ಪೊಲೀಸ್ ದೂರು ನೀಡಲಾಗಿದೆ. ಈ ರೀತಿಯ ಅವಹೇಳನ ನಿಲ್ಲಿಸದೇ ಇದ್ದರೆ, ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ದೈವಾರಾಧಕರು ಎಚ್ಚರಿಸಿದ್ದಾರೆ.
Daiva aradhakas team in Mangalore demand to stop new kannada serial Kaveri which is about Daiva to start in Star suvarna, case filed. C k prashanth has done the role of Daiva which now has been objected.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
26-06-26 07:35 pm
HK News Staffer
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm