ಬ್ರೇಕಿಂಗ್ ನ್ಯೂಸ್
07-02-24 08:14 pm Mangalore Correspondent ಕರಾವಳಿ
ಮಂಗಳೂರು, ಫೆ.7: ಒಂದು ತಿಂಗಳ ಹಿಂದಷ್ಟೆ ಮಂಗಳೂರು- ಗೋವಾ ನಡುವೆ ಆರಂಭಗೊಂಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಎಕ್ಸ್ ಪ್ರೆಸ್ ರೈಲನ್ನು ಕೋಝಿಕ್ಕೋಡ್ ಗೆ ವಿಸ್ತರಿಸಲು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಣ್ಣೂರು ಸಂಸದ ಎಂ.ಕೆ. ರಾಘವನ್ ಇತ್ತೀಚೆಗೆ ಕರ್ನಾಟಕದ ಮೂರು ರೈಲುಗಳನ್ನು ಕೇರಳದ ಕೋಝಿಕ್ಕೋಡ್ ಗೆ ವಿಸ್ತರಿಸಬೇಕೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಬೆಂಗಳೂರು- ಕೊಯಂಬತ್ತೂರು, ಗೋವಾ – ಮಂಗಳೂರು ವಂದೇ ಭಾರತ್, ಬೆಂಗಳೂರು- ಕೊಂಬತ್ತೂರು ಉದಯ್ ಎಕ್ಸ್ ಪ್ರೆಸ್ ರೈಲನ್ನು ಕೋಝಿಕ್ಕೋಡ್ ವಿಸ್ತರಿಸಲು ಕೋರಿದ್ದರು.

ಬೆಂಗಳೂರು- ಮಂಗಳೂರು- ಕಣ್ಣೂರು ರೈಲು ಕೋಝಿಕ್ಕೋಡ್ ವಿಸ್ತರಣೆಯಾದ ಬೆನ್ನಲ್ಲೇ ಮಂಗಳೂರು- ಗೋವಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ರೈಲ್ವೇ ಸಚಿವರು ಒಪ್ಪಿಗೆ ನೀಡಿದ್ದಾರೆ ಎನ್ನುವ ಮಾಹಿತಿ ಕೇರಳದ ಸಂಸದರ ಮೂಲಕ ಸಿಕ್ಕಿದೆ. ಕೆಲವೇ ಸಮಯದಲ್ಲಿ ಕೇರಳಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರಲಿದೆ ಎಂದು ರೈಲ್ವೇ ಸಚಿವರು ಕಣ್ಣೂರು ಸಂಸದ ಎಂ.ಕೆ. ರಾಘವನ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಮಂಗಳೂರು ಸಂಸದ ನಳಿನ್ ಕುಮಾರ್, ಬೆಂಗಳೂರು- ಕಣ್ಣೂರು ರೈಲನ್ನು ಕೋಜಿಕ್ಕೋಡ್ ವಿಸ್ತರಿಸಬಾರದು ಎಂದು ಮನವಿ ಮಾಡಿರುವಾಗಲೇ ಮಂಗಳೂರಿನ ಮತ್ತೊಂದು ರೈಲು ಕೈತಪ್ಪಿದೆ.
ಗೋವಾ- ಮಂಗಳೂರು ವಂದೇ ಭಾರತ್ ರೈಲು ಕೋಜಿಕ್ಕೋಡ್ ವಿಸ್ತರಣೆಯಾದರೆ, ಟೂರಿಸಂ ವಲಯಕ್ಕೆ ಲಾಭ ಆಗಲಿದೆ. ಕೋಜಿಕ್ಕೋಡ್ ನಿಂದ ಬೆಳಗ್ಗಿನ ಹೊತ್ತಿಗೆ ಮಂಗಳೂರಿಗೆ ಬರಲು ರೈಲು ಸೇವೆ ಇರಲಿಲ್ಲ. ವಂದೇ ಭಾರತ್ ಕೋಜಿಕ್ಕೋಡ್ ನಿಂದ ಮಂಗಳೂರು ಮೂಲಕ ಗೋವಾಕ್ಕೆ ತೆರಳಿದರೆ, ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸದ್ಯ ಗೋವಾ –ಮಂಗಳೂರು ವಂದೇ ಭಾರತ್ ರೈಲು ನಷ್ಟದಲ್ಲಿ ಓಡುತ್ತಿದ್ದು, ಕೇರಳಕ್ಕೆ ವಿಸ್ತರಿಸಿದಲ್ಲಿ ಲಾಭದತ್ತ ಬರಲಿದೆ ಎಂದು ಸಂಸದ ಎಂ.ಕೆ.ರಾಘವನ್, ರೈಲ್ವೇ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದಾರೆ.

ಗೋವಾ- ಮಂಗಳೂರು ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆಯಿಂದಾಗಿ ನಷ್ಟದಲ್ಲಿ ಓಡುತ್ತಿದೆಯೆಂದು ಇತ್ತೀಚೆಗೆ ಕೊಂಕಣ್ ರೈಲ್ವೇ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ಈ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂದು ಮಂಗಳೂರು, ಉಡುಪಿಯ ರೈಲ್ವೇ ಯಾತ್ರಿಕರು ಒತ್ತಾಯಿಸಿದ್ದರು. ಅಲ್ಲದೆ, ರೈಲ್ವೇ ಸಚಿವಾಲಯಕ್ಕೂ ಈ ಬಗ್ಗೆ ಪತ್ರ ಬರೆಯಲಾಗಿತ್ತು. ಆದರೆ, ಇದರ ನಡುವಲ್ಲೇ ಕೇರಳದ ಸಂಸದರು ಗೋವಾ ರೈಲನ್ನೂ ಆ ಕಡೆಗೆ ತಿರುಗಿಸಲು ಮುಂದಾಗಿದ್ದಾರೆ. ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್ ವಿಭಾಗಕ್ಕೆ ಬರುವುದರಿಂದ ಅಲ್ಲಿ ಮಲಯಾಳಿಗಳೇ ಹೆಚ್ಚು ಅಧಿಕಾರಿಗಳಿದ್ದಾರೆ. ಇದರಿಂದಾಗಿ ಕರ್ನಾಟಕದ ಸಂಸದರ ಅಸಡ್ಡೆಯ ನಡುವೆ ಕೇರಳದ ಲಾಬಿಯೇ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಸತತ ಬೇಡಿಕೆಯ ಬಳಿಕ ಮಂಗಳೂರು- ಗೋವಾ ಮಧ್ಯೆ ಡಿ.30ರಂದು ವಂದೇ ಭಾರತ್ ರೈಲು ಆರಂಭಗೊಂಡಿತ್ತು.
Mangalore Goa Vande Bharat Train to extend till Kozhikode kerala says Railway Minister Ashwini. Mangalore Goa Vande Bharat Train to extend till Kozhikode kerala says Railway Minister Ashwini.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
26-06-26 07:35 pm
HK News Staffer
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm