ಬ್ರೇಕಿಂಗ್ ನ್ಯೂಸ್
10-01-24 11:09 pm Mangalore Correspondent ಕರಾವಳಿ
ಮಂಗಳೂರು, ಜ.10: ಬೆಂಗಳೂರಿನಲ್ಲಿ ಲೋಕಸಭೆ ಸಿದ್ಧತೆ ಬಗ್ಗೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ ಖೂಬಾಗೆ ಟಿಕೆಟ್ ನೀಡಬಾರದೆಂದು ಶಾಸಕ ಪ್ರಭು ಚವಾಣ್ ಆಗ್ರಹ ಮಾಡಿದ್ದು ಮತ್ತು ಇಬ್ಬರು ನಾಯಕರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ. ಕೊನೆಗೆ, ಭಗವಂತ ಖೂಬಾ ಸಭೆಯಿಂದ ಅರ್ಧದಲ್ಲಿ ಹೊರ ನಡೆದು ಬಂದಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಕಡಬ ತಾಲೂಕಿನ ಬಳ್ಪದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಲ್ಲಿ ಕೇಳಿದಾಗ, ಅದು ಸತ್ಯಕ್ಕೆ ದೂರವಾದ ಮಾತು. ಹಾಗೇನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಸುದ್ದಿ ನಾನು ನೋಡಿದೆ. ಆ ಸಭೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಮಾತ್ರ ಲೋಕಸಭಾ ಸಿದ್ದತಾ ಸಭೆ ನಡೆದಿತ್ತು. ಅಲ್ಲಿ ಯಾರ ಪರ, ವಿರೋಧ ಅಭಿಪ್ರಾಯದ ಸಭೆ, ಚರ್ಚೆ ನಡೆದಿಲ್ಲ. ಟಿಕೆಟ್ ಹಂಚಿಕೆ ಕೇಂದ್ರದವರು ಅನೇಕ ಆಯಾಮ ಮತ್ತು ಮಾನದಂಡಗಳಲ್ಲಿ ಮಾಡ್ತಾರೆ. ಅದು ಬಿಟ್ಟು ಸಭೆಯಿಂದ ಹೊರನಡೆದಿರುವ ಯಾವುದೇ ಘಟನೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾಗಿದೆ.
ನಿನ್ನೆ ರಾತ್ರಿ ಬಂದ ನನ್ನ ಟಿಪಿ ನೋಡಿ, ಅದರಲ್ಲಿ 12 ಗಂಟೆಗೆ ಹೊರಡಬೇಕು ಅಂತ ಇದೆ. ನಾನು ರಾಜ್ಯಾಧ್ಯಕ್ಷರ ಅನುಮತಿ ಕೇಳಿಯೇ ಹೊರಗೆ ಬಂದಿದ್ದೇನೆ. ಸಂಜೆ 5 ಗಂಟೆ ಹೊತ್ತಿಗೆ ಕಡಬದ ಬಳ್ಪದ ಕಾರ್ಯಕ್ರಮಕ್ಕೆ ಬರಬೇಕಿತ್ತು. ಇದನ್ನ ಒಂದು ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದೇನೆ. ಹೀಗಾಗಿ ಬೀದರ್ ಮತ್ತು ಕಲಬುರ್ಗಿ ಲೋಕಸಭೆ ಸ್ಥಾನಗಳ ಚರ್ಚೆ ಮುಗಿಸಿ ಹೊರಬಂದೆ.
ನಿಮ್ಮ ವಿರುದ್ಧ ಪ್ರಭು ಚವಾಣ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ, ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಮಾಧಾನಕ್ಕೆ ಪಕ್ಷದಲ್ಲಿ ಯಾವ ಸ್ಥಾನ ಇದೆ. ಅವರು ಹೇಳಬಹುದು, ಆದರೆ ಅವರು ಹೇಳಿದ ತಕ್ಷಣ ವರಿಷ್ಠರು ಮಾಡಬೇಕು ಅಂತ ಇಲ್ಲ. ಒಂದು ವ್ಯವಸ್ಥೆ ಅಂತ ಇರುತ್ತೆ, ಎಲ್ಲರನ್ನೂ ಕೂಡಿಸೋದು, ಅದು ಪಕ್ಷದಲ್ಲಿ ನಡೆಯುತ್ತೆ. ಯಾರ ಅಸಮಾಧಾನವೂ ಪಕ್ಷದಲ್ಲಿ ಕೆಲಸಕ್ಕೆ ಬರಲ್ಲ. ತಮ್ಮ ಅಭಿಪ್ರಾಯ ಕೇಳಿದಾಗ ಹೇಳುವ ವ್ಯವಸ್ಥೆ ಪಕ್ಷದಲ್ಲಿ ಇದೆ. ಹೀಗಾಗಿ ಇಂಥದ್ದರಲ್ಲಿ ಅಸಮಾಧಾನಕ್ಕೆ ಯಾವುದೇ ಆಸ್ಪದ ಇಲ್ಲ ಎಂದು ಹೇಳಿದರು.
ಖೂಬಾ ಅವರು ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ ಗ್ರಾಮೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದರು.
At a meeting of BJP leaders in Bengaluru on lok sabha preparations, MLA Prabhu Chavan demanded that sitting MP Bhagwant Khuba should not be given a ticket from Bidar constituency and the two leaders had a verbal spat with each other. In the end, it was said that Lord Khooba had left the congregation halfway.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm