ಬ್ರೇಕಿಂಗ್ ನ್ಯೂಸ್
09-01-24 03:57 pm Mangalore Correspondent ಕರಾವಳಿ
ಮಂಗಳೂರು, ಜ.9: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳಲ್ಲಿ ಜನವರಿ 14ರ ಸಂಕ್ರಮಣದ ಬಳಿಕ ರಾತ್ರಿಯಿಡೀ ಯಕ್ಷಗಾನ ನಡೆಸಲು ನಿರ್ಧರಿಸಲಾಗಿದೆ. ಹೈಕೋರ್ಟ್ ಸೂಚನೆ ಮತ್ತು ಕಟೀಲು ದೇವಸ್ಥಾನದ ಭಕ್ತರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಕಮಿಟಿ ಆಡಳಿತ ಮೊಕ್ತೇಸರ ಸನತ್ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಹಿಂದೆ ರಾತ್ರಿ ಪೂರ್ತಿ ಇರುತ್ತಿದ್ದ ಯಕ್ಷಗಾನಕ್ಕೆ 2020ರಲ್ಲಿ ಕೊರೊನಾ ಕಾರಣದಿಂದ ಬ್ರೇಕ್ ಬಿದ್ದಿತ್ತು. ಆನಂತರ, ಅಧಿಕೃತ ಕಾಲಮಿತಿಯ ಯಕ್ಷಗಾನಗಳು ಚಾಲ್ತಿಗೆ ಬಂದಿದ್ದವು. ಎರಡು ವರ್ಷಗಳ ಹಿಂದೆ ಬಿಜೆಪಿ ಸರಕಾರ ಇದ್ದಾಗ ಧ್ವನಿವರ್ಧಕ ನಿಷೇಧ ಕುರಿತು ರಾಜ್ಯದಲ್ಲಿ ಅಭಿಯಾನ ನಡೆದಿತ್ತು. ನಸುಕಿನ ವೇಳೆಗೆ ಮಸೀದಿಯಲ್ಲಿ ಕೂಗುವ ಆಜಾನ್ ನಿಷೇಧಿಸಬೇಕೆಂಬ ಒತ್ತಾಯದ ನೆಪದಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಸಬಾರದೆಂದು ಕೂಗು ಎಬ್ಬಿಸಲಾಗಿತ್ತು. ಇದರಿಂದ ಆಜಾನ್ ಕೂಗಿನ ನಿಯಂತ್ರಣ ಆಗದೇ ಇದ್ದರೂ, ಯಕ್ಷಗಾನ ಆಟಗಳಿಗೆ ನೇರ ಪರಿಣಾಮ ಬಿದ್ದಿತ್ತು. ರಾತ್ರಿ ವೇಳೆ ಧ್ವನಿವರ್ಧಕ ನಿಷೇಧ ಹೆಸರಲ್ಲಿ ಕಟೀಲು ಮೇಳಗಳು ಕಾಲಮಿತಿಯ ಯಕ್ಷಗಾನಗಳಿಗೆ ಜೋತು ಬಿದ್ದಿದ್ದವು.
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಡಿಮೆಯಾಗಿದ್ದರೂ, ಧ್ವನಿವರ್ಧಕದ ಶಬ್ದ ಮಿತಿ ಕಡಿಮೆಗೊಳಿಸುವ ಜಿಲ್ಲಾಡಳಿತದ ಸೂಚನೆಯಂತೆ ಸಂಜೆ 6 ಗಂಟೆಯಿಂದ ರಾತ್ರಿ 12ರ ವರೆಗೆ ಕಾಲಮಿತಿಯ ಯಕ್ಷಗಾನವೇ ಹೆಚ್ಚು ಪ್ರಚಲಿತವಾಗಿತ್ತು. ಸಂಜೆ ಹೊತ್ತಿಗಾದರೆ ಜನ ಹೆಚ್ಚು ಸೇರುತ್ತಾರೆಂಬ ಭಾವನೆಯೂ ಇದರ ಹಿಂದಿತ್ತು. ಇದರಿಂದ ಹಗಲಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಲಾವಿದರಿಗೂ ಒಳಿತಾಗಿತ್ತು. ಇತ್ತೀಚೆಗೆ ಕರಾವಳಿಯ ಇತರೇ ಯಕ್ಷಗಾನ ಮೇಳಗಳು ಭಕ್ತರ ಅಪೇಕ್ಷೆಯಂತೆ ರಾತ್ರಿ ಪೂರ್ತಿ ಅಥವಾ ಕಾಲಮಿತಿ ಎರಡಕ್ಕೂ ಪ್ರತ್ಯೇಕ ವೀಳ್ಯದೊಂದಿಗೆ ಆಟ ಆಡಿಸುತ್ತಿದ್ದರೆ, ಕಟೀಲು ಮೇಳಗಳಲ್ಲಿ ಮಾತ್ರ ಆ ರೀತಿಯ ಒಗ್ಗಿಕೊಳ್ಳುವ ಸಾಧ್ಯತೆಗೆ ಮೇಳಗಳ ಆಡಳಿತ ಮುಂದಾಗಿರಲಿಲ್ಲ.
ಇದೇ ವೇಳೆ, ಹಿಂದಿನಿಂದ ಬಂದ ಯಕ್ಷಗಾನ ಪರಂಪರೆಗೆ ಕಾಲಮಿತಿಯಿಂದ ಪೆಟ್ಟು ಬಿದ್ದಿದೆ, ರಾತ್ರಿ ಪೂರ್ತಿ ಇದ್ದರಷ್ಟೇ ಯಕ್ಷಗಾನಕ್ಕೆ ಸೊಬಗು, ಹಳೆಯ ರೀತಿಯಲ್ಲೇ ಯಕ್ಷಗಾನ ಇರಬೇಕು ಎನ್ನುವ ವಾದ ಮುಂದಿಟ್ಟು ಕಟೀಲಿನ ಭಕ್ತರ ಒಂದು ತಂಡ ಹೈಕೋರ್ಟ್ ಕದ ತಟ್ಟಿತ್ತು. ಕೋರ್ಟಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ನಡೆಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಅದನ್ನು ದೇವಸ್ಥಾನ ಆಡಳಿತವೇ ತೀರ್ಮಾನ ಮಾಡಬೇಕು ಎಂದು ಹೇಳಿತ್ತು. ಕೋರ್ಟ್ ಸೂಚನೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಂದಿಟ್ಟು ಕಾಲಮಿತಿಯ ಯಕ್ಷಗಾನಕ್ಕೆ ಬ್ರೇಕ್ ಕೊಡಬೇಕೆಂಬ ಒತ್ತಾಯ ಮುಂದಿಡಲಾಗಿತ್ತು.
ಕಟೀಲು ದೇವಸ್ಥಾನದ ಆಡಳಿತ ಕಮಿಟಿಯ ಆಸ್ರಣ್ಣರಿಗೆ ಮತ್ತು ಕಟೀಲು ಮೇಳಗಳ ಕಲಾವಿದರಲ್ಲಿ ಎಲ್ಲರಿಗೂ ಸಮ್ಮತಿ ಇಲ್ಲದೇ ಇದ್ದರೂ, ಸದ್ಯಕ್ಕೆ ರಾತ್ರಿ ಪೂತ್ರಿ ಯಕ್ಷಗಾನ ನಡೆಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. 2022-23ನೇ ಸಾಲಿನ ಕಟೀಲಿನ ಆರು ಮೇಳಗಳ ಪೂರ್ತಿ ಯಕ್ಷಗಾನ ತಿರುಗಾಟ ಕಾಲಮಿತಿಯಲ್ಲೇ ನಡೆದಿತ್ತು. ಈ ಸಾಲಿನಲ್ಲಿ ಡಿಸೆಂಬರ್ 8ರಿಂದ ತೊಡಗಿ ಜನವರಿ 13ರ ವರೆಗಿನ ಯಕ್ಷಗಾನ ಕಾಲಮಿತಿಯಲ್ಲೇ ನಡೆಯುತ್ತದೆ. ಆದರೆ, ಇದೇ ಸಂಕ್ರಾಂತಿ ಬಳಿಕ ಕಟೀಲು ಮೇಳಗಳ ಆಟಗಳು ರಾತ್ರಿಯಿಂದ ಬೆಳಗ್ಗಿನ ವರೆಗೂ ಆಗಲಿದ್ದು, ರಾತ್ರಿ ಪೂರ್ತಿ ಚೆಂಡೆಯ ಅಬ್ಬರ ಮಾರ್ದನಿಸಲಿದೆ. ಕಾಲಮಿತಿಯ ಯಕ್ಷಗಾನವೇ ಬೇಕು ಎನ್ನುವವರಿಗೂ ಇದರಿಂದ ವಿನಾಯ್ತಿ ಇರಲ್ಲ. ಈ ರೀತಿಯ ನಿಯಮದ ಕಟ್ಟುಪಾಡು ಹಾಕುವುದಕ್ಕಿಂತ ಒಂದೆರಡು ಮೇಳಗಳನ್ನು ಕಾಲಮಿತಿಗೂ ಇಳಿಸುವ ಚಿಂತನೆಯನ್ನು ಮಾಡಬಹುದು ಎಂಬುದು ಕಲಾವಿದರ ವಾದ ಇದೆ. ಈ ಬಗ್ಗೆ ಕಟೀಲಿನ ಆಸ್ರಣ್ಣರಿಗೂ ಕೆಲವು ಕಲಾವಿದರು ಕಿವಿಯೂದಿದ್ದಾರೆ ಎನ್ನುವ ಮಾಹಿತಿಗಳಿವೆ.
The six Yakshagana melas of Kateel Sri Durgaparameshwari Temple will be held overnight after the transition on January 14. The decision was taken on the directions of the High Court and on the request of devotees of Kateel temple, temple committee managing director Sanath Kumar Shetty said.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
08-06-25 02:58 pm
Mangalore Correspondent
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm