ಬ್ರೇಕಿಂಗ್ ನ್ಯೂಸ್
06-01-24 03:40 pm Mangalore Correspondent ಕರಾವಳಿ
ಮಂಗಳೂರು, ಜ.6: ಕಾಂತಾರ ಚಿತ್ರದ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುಪುರ ವಜ್ರದೇಹಿ ಮಠದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಆಗಮಿಸಿದ್ದು, ಮೈಸಂದಾಯ ಮತ್ತು ಅಣ್ಣಪ್ಪ ಪಂಜುರ್ಲಿ ದೈವದ ಕೋಲದಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ 12 ವೇಳೆಗೆ ಮೈಸಂದಾಯ ದೈವದ ಕೋಲ ನಡೆದಿದ್ದು, ಆ ಸಂದರ್ಭದಲ್ಲಿ ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ಜೊತೆಗೆ ಕಾಂತಾರ ಎರಡನೇ ಭಾಗದ ಚಿತ್ರೀಕರಣದ ಸಲುವಾಗಿ ದೈವದ ಅನುವು ಕೇಳಿದ್ದಾರೆ. ದೈವವು ರಿಷಬ್ ಶೆಟ್ಟಿ ಕೇಳಿಕೊಂಡ ಮಾತಿಗೆ ಅನುವು ನೀಡಿದಂತೆ ಬೆನ್ನು ತಟ್ಟಿ ಆಶೀರ್ವದಿಸಿದ ವಿಡಿಯೋ ವೈರಲ್ ಆಗಿದೆ. ಹೀಗಾಗಿ ದೈವ ಕಾಂತಾರದ ಚಿತ್ರಕ್ಕಾಗಿ ಅಭಯ ನೀಡಿದೆಯೆಂದು ಹೇಳಲಾಗುತ್ತಿದೆ.


ಆನಂತರ, ನಸುಕಿನ ವೇಳೆಗೆ ಅಣ್ಣಪ್ಪ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿಯೂ ರಿಷಬ್ ಶೆಟ್ಟಿ ಬಂದು ದೈವದಲ್ಲಿ ಕಾಂತಾರದ ಚಿತ್ರಕ್ಕಾಗಿ ಬೇಡಿಕೊಂಡಿದ್ದಾರೆ. ಕಾಂತಾರ ಚಿತ್ರದ ಎರಡನೇ ಭಾಗದ ಚಿತ್ರೀಕರಣದಲ್ಲಿ ಬಿಝಿಯಾಗಿರುವ ರಿಷಬ್ ಶೆಟ್ಟಿ ಅದರ ನಡುವಲ್ಲೇ ಕೋಲಕ್ಕೆ ಬಂದು ಬೇಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದ ಕಾರಣದಿಂದಲೇ ದೈವಾರಾಧನಗೆ ಅಪಚಾರ ಆಗಿದೆಯೆಂದು ಜಾಲತಾಣದಲ್ಲಿ ಟೀಕೆ ಬಂದಿತ್ತು. ಬೆಂಗಳೂರು, ಮಂಡ್ಯದಲ್ಲಿ ದೈವದ ಆವೇಶ, ಕೊರಗಜ್ಜನ ಕೋಲದಲ್ಲಿ ವಿಕೃತ ನಡವಳಿಕೆಯ ವಿಡಿಯೋ ವೈರಲ್ ಆಗಿದ್ದಕ್ಕೆ ದೈವಾರಾಧಕರು ಭಾರೀ ಟೀಕೆಯನ್ನೂ ಮಾಡಿದ್ದರು. ಇದೆಲ್ಲ ಕಾಂತಾರ ಚಿತ್ರದ ಬಳಿಕವೇ ಆಗಿರುವುದು ಎನ್ನುವ ಟೀಕೆ ವ್ಯಕ್ತವಾಗಿತ್ತು.
ಎರಡನೇ ಭಾಗದಲ್ಲಿ ದೈವದ ಕುರಿತಾಗಿ ಸಿನಿಮಾ ಮಾಡಬಾರದೆಂದು ರಿಷಬ್ ಶೆಟ್ಟಿ ಬಗ್ಗೆ ಟೀಕೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿ ಬಂದು ಸಿನಿಮಾ ಚಿತ್ರೀಕರಣಕ್ಕಾಗಿ ಬೇಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾವ ರೀತಿಯ ಬೇಡಿಕೆಯನ್ನು ದೈವದ ಮುಂದಿರಿಸಿದ್ದರು, ದೈವ ಯಾವ ರೀತಿಯ ಆಶೀರ್ವಾದ ನೀಡಿದೆ ಎನ್ನುವ ಬಗ್ಗೆ ತಿಳಿಯಲು ಗುರುಪುರ ಸ್ವಾಮೀಜಿ ಸಂಪರ್ಕಕ್ಕೆ ಸಿಕ್ಕಿಲ್ಲ.
Kantara actor Rishab Shetty visits Gurupura Math Rajashekharananda swamiji in Mangalore.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm