ಬ್ರೇಕಿಂಗ್ ನ್ಯೂಸ್
16-12-23 09:44 pm Mangalore Correspondent ಕರಾವಳಿ
ಮಂಗಳೂರು, ಡಿ.16: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ಆಗಿದೆ, ಜನರ ದುಡ್ಡನ್ನು ಬೇಕಾಬಿಟ್ಟಿ ದುರುಪಯೋಗ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಮಮೂರ್ತಿ ಬಿ.ಎಸ್. ಪಾಟೀಲ್ ಮುಂದೆ ದೂರು ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಈ ಬಗ್ಗೆ ದೂರು ನೀಡಿದ್ದು, ಜನರ ದುಡ್ಡನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಂಗಳೂರಿಗೆ ಬಂದಿದ್ದಾಗ ಈ ಕುರಿತು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರು. 3 ಕಿಮೀ ಫುಟ್ಪಾತ್ ಕೆಲಸಕ್ಕೆ 70 ಕೋಟಿ ರೂಪಾಯಿ ಬಿಲ್ ಮಾಡಿದ್ದನ್ನು ಪ್ರಶ್ನಿಸಿದ್ದರು. ಸ್ಮಾರ್ಟ್ ಸಿಟಿ ದುಡ್ಡಿನ ನೆಪದಲ್ಲಿ ಅಧಿಕಾರಿಗಳು ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಬೇಕು ಎಂದು ಶಶಿಧರ್ ಶೆಟ್ಟಿ, ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ, ಯಾರ್ರೀ ಮಂಗಳೂರು ಪಾಲಿಕೆ ಕಮಿಷನರ್. ಏನ್ರೀ ನಿಮ್ಮ ಗಮನಕ್ಕೆ ಬಂದಿಲ್ವಾ ಇದು. ಈ ಬಗ್ಗೆ ರಿಪೋರ್ಟ್ ಕೊಡಿ ಎಂದು ಹೇಳಿ ಫೈಲನ್ನು ದಾಟಿಸಿದ್ದಾರೆ. ಮಂಗಳೂರಿನ ಜಿಪಂ ಸಭಾಂಗಣದಲ್ಲಿ ಲೋಕಾಯುಕ್ತರು ಅಪರೂಪಕ್ಕೆ ಎಂಬಂತೆ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿಯೇ ಸಾರ್ವಜನಿಕರ ದೂರು ಸ್ವೀಕಾರ ಮಾಡಿದ್ದಾರೆ. ಸಾರ್ವಜನಿಕರು ಹಲವಾರು ರೀತಿಯ ದೂರುಗಳನ್ನು ಲೋಕಾಯುಕ್ತಕ್ಕೆ ನೀಡಿದ್ದಾರೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಪಾಟೀಲ್, ನಾವು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದೇವೆ. ಬಹಳಷ್ಟು ಅಧಿಕಾರಿಗಳ ಬಗ್ಗೆ ದೂರು, ಅಸಮಾಧಾನ ಕೇಳಿಬಂದಿದೆ. ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಿದ್ದೇನೆ, ದೂರುಗಳನ್ನು ಪರಿಶೀಲಿಸಿ ಅಗತ್ಯ ಬಿದ್ದಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಪ್ರಕರಣ ಇತ್ಯರ್ಥವಾಗದೆ ಉಳಿಯುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ವರ್ಷಕ್ಕೆ 5 ಸಾವಿರದಿಂದ 8 ಸಾವಿರದ ವರೆಗೆ ಸಾರ್ವಜನಿಕರಿಂದ ವಿವಿಧ ರೀತಿಯ ದೂರುಗಳು ಬರುತ್ತಿದ್ದು ಎಲ್ಲವನ್ನೂ ಆಲಿಸುತ್ತಿದ್ದು ನ್ಯಾಯ ದೊರಕಿಸಲು ಶ್ರಮಿಸುತ್ತೇವೆ ಎಂದರು.
ಇಲಾಖೆಯಲ್ಲಿ 700ರಷ್ಟು ಹುದ್ದೆ ಖಾಲಿ ಇದೆ ಎಂದು ಹೇಳಿದ ಅವರು, ಆ ಕಾರಣದಿಂದಲೂ ವಿಳಂಬ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡರು. ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ತನಿಖಾಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿರುತ್ತೇವೆ. ಸಾಕ್ಷ್ಯ ಸಂಗ್ರಹ, ಸಾಕ್ಷಿಗಳನ್ನು ಜೊತೆಗಿಟ್ಟು ಶಿಕ್ಷೆಯಾಗಲು ಶ್ರಮಿಸುವುದು ಸೇರಿದಂತೆ ನಾವು ಗರಿಷ್ಠ ಶಿಕ್ಷೆಗೆ ಪ್ರಯತ್ನ ಪಡುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಸಿಬಿ ರಿಷ್ಯಂತ್ ಉಪಸ್ಥಿತರಿದ್ದರು.
Lokayukta B S Patil addresses public grievances in Mangalore. Lokayukta Justice B S Patil held a meeting at the at the zilla panchayat with district officers and the public to address their grievances on Saturday December 16
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
19-06-25 01:05 pm
Mangalore Correspondent
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm