ಬ್ರೇಕಿಂಗ್ ನ್ಯೂಸ್
08-12-23 06:44 pm Mangaluru Correspondent ಕರಾವಳಿ
ಮಂಗಳೂರು, ಡಿ.8: ಕೋಮು ದ್ವೇಷದ ನೆಲದಲ್ಲಿ ಸೌಹಾರ್ದ ಸಾರುವ ಮದುವೆಯೊಂದು ಸದ್ದಿಲ್ಲದೆ ನಡೆದಿದೆ. ಹಿಂದು ಯುವಕ ಮತ್ತು ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸುತ್ತಿದ್ದವರು ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ ಯುವ ಜೋಡಿ ಮದುವೆಯಾಗಿ ಪ್ರತ್ಷಕ್ಷರಾಗಿದ್ದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದ ನಿವಾಸಿಗಳಾಗಿರುವ ಯುವಕ – ಯುವತಿ ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇವರು ಮದುವೆಯಾಗಿರುವ ಸುದ್ದಿಯನ್ನು ಮಂಗಳೂರಿನ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕ್ಕೊಂಡಿದ್ದು ಆಯೆಷಾ ಎಂಬ ಮುಸ್ಲಿಂ ಯುವತಿ ಅಕ್ಷತಾ ಎಂದು ಬದಲಾಗಿರುವುದನ್ನು ಹೇಳಿಕೊಂಡಿದ್ದಾರೆ. ಯುವತಿಯ ಕುಟುಂಬ ಕಾರವಾರ ಮೂಲದವರಾಗಿದ್ದು, ತಂದೆ, ತಾಯಿ ಕಾಟಿಪಳ್ಳದಲ್ಲಿಯೇ ಹಲವು ವರ್ಷಗಳಿಂದ ನೆಲೆಸಿದ್ದರು. ಈ ನಡುವೆ, ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರೂ ಮದುವೆಗೆ ಧರ್ಮ ಅಡ್ಡಿಯಾಗಿತ್ತು. ಶರಣ್ ಪಂಪ್ವೆಲ್ ತನ್ನ ಫೇಸ್ಬುಕ್ ಪೇಜ್ ನಲ್ಲಿ ಇಬ್ಬರ ಫೋಟೋ ಹಾಕಿ ಮದುವೆ ಬಗ್ಗೆ ಟಾಂ ಟಾಂ ಮಾಡಿದ್ದಕ್ಕೆ ಟೀಕೆಯೂ ಕೇಳಿಬಂದಿದೆ.
ಹುಡುಗ ಪ್ರಶಾಂತ್ ಬಜರಂಗದಳ ಕಾರ್ಯಕರ್ತನಾಗಿದ್ದು, ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಕಾರ್ಯಕರ್ತನ ಕೆಲಸಕ್ಕೆ ಬಜರಂಗದಳ ಕಡೆಯಿಂದ ಶಹಭಾಸ್ ಗಿರಿ ಸಿಕ್ಕಿದ್ದರೆ, ಹುಡುಗ- ಹುಡುಗಿಯ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಜಾಲತಾಣದಲ್ಲಿ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ. ಯುವಕನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಮತ್ತಿತರ ಕೇಸುಗಳಿದ್ದು, ರೌಡಿ ಲಿಸ್ಟ್ ನಲ್ಲಿಯೂ ಇದ್ದಾನೆ.
ಮುಸ್ಲಿಂ ಯುವಕರು ಹಿಂದು ಯುವತಿಯನ್ನು ಮದುವೆಯಾಗಿ ಅರ್ಧದಲ್ಲಿ ಕೈಬಿಟ್ಟು ಹೋಗುವುದನ್ನು ಬಜರಂಗದಳ ಲವ್ ಜಿಹಾದ್ ಕೃತ್ಯ ಎಂದು ಜರೆಯುತ್ತಿದ್ದರೆ, ಒಳ್ಳೆಯ ರೀತಿಯಲ್ಲಿ ನೋಡಿಕೊಂಡ ಮುಸ್ಲಿಮರೂ ನಮ್ಮ ಸಮಾಜದಲ್ಲಿದ್ದಾರೆ. ಇದೇ ವೇಳೆ, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾಗಿ ಒಳ್ಳೆಯ ರೀತಿಯಲ್ಲೇ ನೋಡಿಕೊಂಡರೆ ಆ ರೀತಿಯ ಹಣೆಪಟ್ಟಿ ಬರಲಿಕ್ಕಿಲ್ಲ.
Hindu Muslim Marriage Mangalore, Bajrang dal activist marries Muslim girl from Surathkal in Magalore. Sharan Pumpwell share images of both couple which has sparked controversy on social media.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
19-06-25 01:05 pm
Mangalore Correspondent
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm