ಬ್ರೇಕಿಂಗ್ ನ್ಯೂಸ್
23-09-23 02:22 pm Mangalore Correspondent ಕರಾವಳಿ
ಮಂಗಳೂರು, ಸೆ.23: ಎತ್ತಿನಹೊಳೆ ಯೋಜನೆ ಮುಗಿದ ಅಧ್ಯಾಯ, ಹಳೆ ವಿಚಾರವನ್ನು ಪ್ರಶ್ನೆ ಕೇಳಬೇಡಿ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಪತ್ರಕರ್ತರ ಪ್ರಶ್ನೆಗೆ ಸಿಡುಕಿನ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮೊಯ್ಲಿ ಅವರಲ್ಲಿ ಎತ್ತಿನಹೊಳೆ ಯೋಜನೆಯನ್ನು ನೀವು ತರಾತುರಿಯಲ್ಲಿ ಆರಂಭಿಸಿದ್ದಿರಿ, ಈಗ ಅದರಿಂದಾಗಿ ಕರಾವಳಿಗೇ ಬರ ಬಂದಿದೆ, ಈಗಲಾದರೂ ನೀವು ನಿಲ್ಲಿಸಲು ಹೇಳುತ್ತೀರಾ ಎಂಬ ಪ್ರಶ್ನೆಗೆ, ಅದೆಲ್ಲ ಹಳೆ ವಿಚಾರ, ಪ್ರತಿ ಬಾರಿ ಆ ಕುರಿತು ಪ್ರಶ್ನೆ ಮಾಡಬೇಡಿ ಎಂದಿದ್ದಾರೆ.
ಯೋಜನೆ ಜಾರಿಗೆ ನೀವು ಮತ್ತು ಸದಾನಂದ ಗೌಡ ಕಾರಣಕರ್ತರು, ಯಾಕೆ ಪ್ರಶ್ನೆ ಮಾಡಬಾರದು, ಅದಕ್ಕೆ 23 ಸಾವಿರ ಕೋಟಿ ದುಡ್ಡು ಖರ್ಚು ಮಾಡಿದ್ದೀರಲ್ಲಾ ಎಂದು ಕೇಳಿದ್ದಕ್ಕೆ, ಬಿಜೆಪಿಯವರು ಯೋಜನೆ ನಿಲ್ಲಿಸಿದ್ದಾರೆಯೇ.. ನಾವು ಯಾಕೆ ನಿಲ್ಲಿಸಬೇಕು. ಇದಕ್ಕೆಲ್ಲ ಉತ್ತರ ನೀಡಲ್ಲ ಎಂದರು. ನೀವು ಕರಾವಳಿ ಜನರಿಗೆ ಉತ್ತರ ಕೊಡಲೇಬೇಕು ಎಂದಾಗ, ನಾನು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿಯೇ ಕೊಡುತ್ತೇನೆ ಎಂದು ಮೌನಕ್ಕೆ ಜಾರಿದರು. ನೀವು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡುತ್ತೀರಂತೆ, ಅಲ್ಲಿನ ಜನರಿಗೂ ಉತ್ತರ ಕೊಡಬೇಕಾಗುತ್ತದೆ ಎಂದಾಗ, ಅದು ಆ ಪ್ರಶ್ನೆ ಬಂದಾಗ ಉತ್ತರ ಕೊಡುತ್ತೇನೆ ಎಂದು ನಕ್ಕರು.
ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರೂ ಕಳಿಸೋಕೆ ಆಗಿಲ್ಲ, 20 ಸಾವಿರ ಖರ್ಚು ಮಾಡಿದ್ದೀರಿ ಎಂದಾಗ, ನೀವೇ ಒಂದೆಡೆ ನೀರು ಹರಿಸಿಲ್ಲ ಅಂತೀರಿ. ಇಲ್ಲಿ ನೀರಿಲ್ಲ, ಬರಡಾಗಿದೆ ಅಂತೀರಿ. ನೀರೇ ಹರಿಸಿಲ್ಲಾಂದ್ರೆ, ನೀರು ಖಾಲಿಯಾಗೋದು ಹೇಗಾಗುತ್ತೆ. ಈಗ ಯೋಜನೆ ಕಾಮಗಾರಿ ಆಗುತ್ತಾ ಇದೆ. ನಿಮ್ಮಲ್ಲೇ ಪ್ರಶ್ನೆ, ಉತ್ತರ ಎರಡೂ ಇದೆ ಎಂದರು ಮೊಯ್ಲಿ. ನೀವು ಯೋಜನೆ ವೈಫಲ್ಯದ ಬಗ್ಗೆ ಉತ್ತರ ಕೊಡಬೇಕು ಎಂದು ಮತ್ತೆ ಕೇಳಿದ್ದಕ್ಕೆ, ನಾನು ಉತ್ತರ ಕೊಡುತ್ತೇನೆ, ನಿಮಗೆ ಕೊಡಬೇಕಿಲ್ಲ ಎಂದು ಸಿಡುಕು ತೋರಿದರು. ಪದೇ ಪದೇ ಆ ಕುರಿತು ಪ್ರಶ್ನೆ ಕೇಳಿದ್ದರಿಂದ ಸಿಡಿಮಿಡಿಗೊಂಡ ಮೊಯ್ಲಿ, ನಾನು ಬೇಕಾದಲ್ಲಿ ಉತ್ತರ ಕೊಡುತ್ತೇನೆ ಎನ್ನುತ್ತಲೇ ಮುಖ ತಿರುಗಿಸಿ ಕುಳಿತುಬಿಟ್ಟರು.
2013ರಲ್ಲಿ ಆಗ ಚಿಕ್ಕಬಳ್ಳಾಪುರ ಸಂಸದರಾಗಿದ್ದ ವೀರಪ್ಪ ಮೊಯ್ಲಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲೇ ಶಿಲಾನ್ಯಾಸ ಮಾಡಿದ್ದರು. ಕರಾವಳಿ ಜನರ ಭಾರೀ ವಿರೋಧ ಮಧ್ಯೆಯೇ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಈವರೆಗೆ ಯೋಜನೆಗೆ 23 ಸಾವಿರ ಕೋಟಿ ಖರ್ಚಾಗಿದೆ ಎಂದು ಸರಕಾರ ಲೆಕ್ಕ ಹೇಳುತ್ತಿದ್ದು, ಒಂದು ಹನಿ ನೀರನ್ನೂ ಒಯ್ಯಲು ಸಾಧ್ಯವಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ಜನರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡಿ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಜನರೇ ಮಾಡುತ್ತಿದ್ದಾರೆ.
Yetthinahole project is a finished story, Journalists in Managlore slam Veerappa Moily.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm