ಬ್ರೇಕಿಂಗ್ ನ್ಯೂಸ್
04-04-23 01:21 pm Mangalore Correspondent ಕರಾವಳಿ
ಮಂಗಳೂರು, ಎ.4 : ಮಾನವೀಯ ಕಾರ್ಯಕ್ಕೆ ಮನಸ್ಸು ಮುಖ್ಯ ಅಂತಾರೆ. ಇಲ್ಲೊಬ್ಬರು ವೃದ್ಧ ಮಹಿಳೆ ತನ್ನ ಮನೆ ಬಳಿಯ ರೈಲು ಹಳಿಯಲ್ಲಿ ಬೃಹತ್ ಮರ ಬಿದ್ದಿರುವುದನ್ನು ಕಂಡು ತಾನೇ ತರಾತುರಿಯಲ್ಲಿ ಕೆಂಪು ವಸ್ತ್ರ ತೋರಿಸಿ ರೈಲು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿಯ ನಿವಾಸಿ, 70 ವರ್ಷದ ಚಂದ್ರಾವತಿ ಸಮಯ ಪ್ರಜ್ಞೆ ಮೆರೆದ ಮಹಿಳೆ. ಮನೆ ಬಳಿಯ ತೋಟಕ್ಕೆ ತೆರಳಿದ್ದ ಮಹಿಳೆ ರೈಲು ಹಳಿಗೆ ಮರ ಬಿದ್ದಿರುವುದನ್ನು ಗಮನಿಸಿದ್ದಾರೆ. ಮನೆಗೆ ತೆರಳಿ ಅಕ್ಕಪಕ್ಕದವರನ್ನು ಫೋನ್ ಮಾಡಿ ಕರೆಯೋಣ ಎಂದು ದಾಪುಗಾಲು ಹಾಕುತ್ತಿದ್ದಾಗಲೇ ಮಹಿಳೆಗೆ ರೈಲಿನ ಹಾರನ್ ಕೇಳಿಸಿತ್ತು.
ಕೂಡಲೇ ಮನೆಗೆ ತೆರಳಿದ ಮಹಿಳೆ, ಕೆಂಪು ಬಟ್ಟೆಯನ್ನು ಹಿಡಿದು ರೈಲು ಹಳಿಯತ್ತ ಓಡಿದ್ದಾರೆ. ರೈಲು ಬರುತ್ತಿದ್ದ ಜಾಗದಿಂದ ಇನ್ನೊಂದು ಬದಿಯ ಹಳಿಯಲ್ಲಿ ನಿಂತು ಕೆಂಪು ಬಟ್ಟೆ ತೋರಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಇದನ್ನು ಗಮನಿಸಿದ ಲೋಕೋ ಪೈಲಟ್ ರೈಲನ್ನು ನಿಧಾನಗೊಳಿಸಿದ್ದು ಹತ್ತಿರ ಬಂದಂತೆ ಮುಂದೆ ಹಳಿಗೆ ಅಡ್ಡಲಾಗಿ ಮರ ಬಿದ್ದಿರುವುದು ಕಂಡುಬಂದಿದೆ. ಆನಂತರ, ರೈಲು ನಿಲ್ಲಿಸಿ ರೈಲ್ವೇ ಸಿಬಂದಿ ಮತ್ತು ಸ್ಥಳೀಯರು ಸೇರಿ ಮರವನ್ನು ಕಡಿದು ತೆರವುಗೊಳಿಸಿದ್ದಾರೆ.
ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಸಂಭಾವ್ಯ ಅನಾಹುತ ತಪ್ಪಿಸಿದ ವೃದ್ಧ ಮಹಿಳೆಯನ್ನು ಸ್ಥಳೀಯರು ಮತ್ತು ರೈಲು ಸಿಬಂದಿ ಪ್ರಶಂಸೆ ಮಾಡಿದ್ದಾರೆ. ಮಂಗಳೂರು- ಮುಂಬೈ ಸಂಚರಿಸುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಅದಾಗಿದ್ದು ವೇಗವಾಗಿ ಮರದ ಮೇಲಿನಿಂದ ತೆರಳುತ್ತಿದ್ದರೆ ಹಳಿ ತಪ್ಪುವ ಅಪಾಯ ಇತ್ತು.
Mangalore 70 year old woman averts major train accident at Pachanady betweens Padil Jokatte. Chandravati, who lives in Mandara near Pachanady, noticed a tree had fallen on the train track just as the Matsyagandha train was making its way from Mangaluru to Mumbai.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm