ಬ್ರೇಕಿಂಗ್ ನ್ಯೂಸ್
08-03-23 12:47 pm Mangalore Correspondent ಕರಾವಳಿ
ಮಂಗಳೂರು, ಮಾ.8: ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿದ್ದರು ಅನ್ನುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವಿವಾದಕ್ಕೀಡಾಗಿದೆ. ಇತ್ತೀಚೆಗೆ ಮೂಡುಬಿದ್ರೆಯ ನೂರಾನಿ ಮಸೀದಿಯ ಕಾರ್ಯಕ್ರಮದಲ್ಲಿ ಮತ ಸೌಹಾರ್ದ ವಿಚಾರದಲ್ಲಿ ಮಿಥುನ್ ರೈ ಮಾಡಿದ್ದ ಭಾಷಣದ ತುಣುಕು ವೈರಲ್ ಆಗಿದ್ದು, ಕೃಷ್ಣ ಮಠಕ್ಕೂ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಅದು ಈ ನಾಡಿನ ಸೌಹಾರ್ದ, ಸಾಮರಸ್ಯದ ಪ್ರತೀಕ ಎಂದಿದ್ದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಿಥುನ್ ರೈ ಬಳಿ ಮಾಹಿತಿ ಕೇಳಿದಾಗ, ನಾನೇನು ಇತಿಹಾಸಕಾರ ಅಲ್ಲ. ಆ ರೀತಿ ಹೇಳಿಕೆ ನೀಡಿದ್ದು ಹೌದು. ಅದನ್ನು ನಿರಾಕರಣೆ ಮಾಡುವುದಿಲ್ಲ. ಈ ಹಿಂದೆ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಸೌಹಾರ್ದ ಕೂಟ ಏರ್ಪಡಿಸಿದ್ದಾಗ ಆ ರೀತಿ ಹೇಳಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಆ ಜಾಗದಲ್ಲಿ ಮಠವನ್ನು ಕಟ್ಟಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಅದು ಪತ್ರಿಕೆಯಲ್ಲಿ ಬಂದಿರುವ ದಾಖಲೆಯೂ ನನ್ನಲ್ಲಿದೆ. ನಾನು ಅವರ ಹೇಳಿಕೆಯನ್ನು ಆಧರಿಸಿ ಮಾತನಾಡಿದ್ದೇನೆ ಹೊರತು ನನ್ನ ಸ್ವಂತ ಅಭಿಪ್ರಾಯ ಅಲ್ಲ ಎಂದು ಹೇಳಿದ್ದಾರೆ.
ಆದರೆ, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿರುವ ಯಾವುದೇ ಉದಾಹರಣೆ ಇಲ್ಲ ಎನ್ನುವುದು ಇದನ್ನು ವಿವಾದ ಎಬ್ಬಿಸುತ್ತಿರುವವರ ಅಹವಾಲು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ಯಾವುದೇ ದಾಖಲೆ ಇಲ್ಲ ಎಂದು ಅಲ್ಲಿನ ಭಕ್ತರು ಹೇಳುತ್ತಾರೆ. ಇದೇ ವಿಚಾರದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದು, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ದಾಖಲೆ ಇಲ್ಲ. ಪಕ್ಕದಲ್ಲಿರುವ ಉಡುಪಿಯ ಜಾಮಿಯಾ ಮಸೀದಿಗೆ ಮುಸ್ಲಿಂ ರಾಜರು ಜಾಗ ಕೊಟ್ಟಿರಬಹುದು. ಮಿಥುನ್ ರೈ ಮತ ಗಳಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಿರಬಹುದು. ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಇವೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಮಿಥುನ್ ರೈ ಹಿಂದು- ಮುಸ್ಲಿಮರ ಸೌಹಾರ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಬಪ್ಪನಾಡಿನಲ್ಲಿ ಹಿಂದು – ಮುಸ್ಲಿಂ ಸೌಹಾರ್ದ ಇದೆ, ಹಾಗೆಯೇ ಉಡುಪಿ ಕೃಷ್ಣ ಮಠದಲ್ಲೂ ಅದೇ ರೀತಿಯ ಬಾಂಧವ್ಯ ಇದೆ. ತುಳುವಿನ ಪಾಡ್ದನದಲ್ಲೂ ಬಾಂಧವ್ಯ ಸಾರುವ ಉಲ್ಲೇಖಗಳಿವೆ. ಈಗಿನ ಕಾಲದಲ್ಲಿ ಮಾತ್ರ ಅವೆಲ್ಲವನ್ನೂ ಮರೆಮಾಚಿ ಹಿಂದು- ಮುಸ್ಲಿಂ ದ್ವೇಷ ಕಾರುವ ರೀತಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
#Udupi #SriKrishnaMatha controversy, #congress leader #MithunRai says temple land was gifted by #Muslim king pic.twitter.com/4YMGjYy3Sd
— Headline Karnataka (@hknewsonline) March 8, 2023
Udupi Sri Krishna Matha controversy, congress leader Mithun Rai says temple land was gifted by Muslim king. Pejawar Seer Sri Vishwesha Theertha himself has quoted it he added.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm